ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣ: ರಾಜಸ್ಥಾನ ಸಿಎಂ ಪುತ್ರನ ಹೆಸರು ಕೈ ಬಿಡಲು ಕೋರಿದ ದೂರುದಾರ

Last Updated 23 ಮಾರ್ಚ್ 2022, 10:40 IST
ಅಕ್ಷರ ಗಾತ್ರ

ಮುಂಬೈ: ತಾವೇ ದೂರು ನೀಡಿದ್ದ ವಂಚನೆ ಪ್ರಕರಣದಲ್ಲಿ ರಾಜಸ್ಥಾನದ ಸಿಎಂ ಅಶೋಕ್‌ ಗೆಹಲೋತ್ ಅವರ ಪುತ್ರನ ಹೆಸರು ಕೈ ಬಿಡುವಂತೆ ಉದ್ಯಮಿಯೊಬ್ಬರು ಮನವಿ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಗೆಹ್ಲೋಟ್‌ ಪುತ್ರ ವೈಭವ ಗೆಹಲೋತ್ ಸೇರಿದಂತೆ 14 ಮಂದಿ ವಿರುದ್ಧ ಕಳೆದ ವಾರ ನಾಸಿಕ್‌ನ ಗಂಗಾಪುರ ಪೊಲೀಸ್‌ ಠಾಣೆಗೆ ಉದ್ಯಮಿ ಸುಶೀಲ್‌ ಪಾಟೀಲ್ ದೂರು ನೀಡಿದ್ದರು. ಇಷ್ಟೂ ಮಂದಿ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಇದೀಗ ದೂರುದಾರ ಪಾಟೀಲ್‌, ಪ್ರಕರಣದ ಮುಖ್ಯ ಆರೋಪಿ, ಗುಜರಾತ್‌ನ ಕಾಂಗ್ರೆಸ್‌ ಕಾರ್ಯಕರ್ತ ಸಚಿನ್‌ ವಲೇರಾ ಅವರಿಂದ ತಪ್ಪುತಿಳಿವಳಿಕೆ ಉಂಟಾಗಿ ವೈಭವ್‌ ಅವರ ಹೆಸರನ್ನು ದೂರಿನಲ್ಲಿ ಸೇರಿಸಿದ್ದೆ. ಅವರ ಹೆಸರನ್ನು ಕೈಬಿಡಿ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್‌ ಆಯುಕ್ತ ದೀಪಕ್‌ ಪಾಂಡೆ ಮಂಗಳವಾರ ಈ ಪ್ರಕರಣವನ್ನು ವಿತ್ತ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದರು. ಇದಕ್ಕೂ ಮುನ್ನ ನಾಸಿಕ್‌ ನ್ಯಾಯಾಲಯ ಸೂಚನೆಯಂತೆ 14 ಮಂದಿ ಮೇಲೆ ವಿವಿಧ ಐಪಿಸಿ ಕಾಲಂನಡಿ ಪ್ರಕರಣ ದಾಖಲಿಸಲಾಗಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT