‘ಮೇ 26ರಿಂದಲೇ ಧಾಂತೋಳಿಯ ಗೋಪಾಲಕೃಷ್ಣ ದೇವಾಲಯ, ಬೆಳ್ಳೂರಿನ ಸಂಕತ್ಮೋಚನ ಪಂಚಮುಖಿ ಹನುಮಾನ್ ದೇವಾಲಯ (ಸಾಯೋನೆರ್), ಕನೋಲಿಬರದ ಬೃಹಸ್ಪತಿ ದೇವಾಲಯ ಮತ್ತು ನಾಗ್ಪುರ ನಗರದ ಹಿಲ್ಟಾಪ್ ಪ್ರದೇಶದ ದುರ್ಗಾಮಾತಾ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಸಂಘವು ಮಹಾರಾಷ್ಟ್ರದ ಎಲ್ಲಾ ದೇವಾಲಯಗಳಲ್ಲೂ ವಸ್ತ್ರಸಂಹಿತೆ ಜಾರಿಗೊಳಿಸಲು ಮುಂದಾಗಿದೆ’ ಎಂದು ಸಂಘದ ಸಂಯೋಜಕ ಸುನೀಲ್ ಘನವತ್ ತಿಳಿಸಿದ್ದಾರೆ.