<p><strong>ಕೊಲ್ಹಾಪುರ:</strong> ಸಹೋದರಿಯ ಮಗಳು (ಸೋದರ ಸೊಸೆ) ತನ್ನ ಒಪ್ಪಿಗೆ ಪಡೆಯದೆ ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ವ್ಯಕ್ತಿಯೊಬ್ಬ, ಆರತಕ್ಷತೆ ಸಮಾರಂಭದ ವೇಳೆ ಅತಿಥಿಗಳಿಗೆ ತಯಾರಿಸುತ್ತಿದ್ದ ಆಹಾರದಲ್ಲಿ ವಿಷ ಬೆರೆಸಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.</p><p>ಅದೃಷ್ಟವಶಾತ್, ವಿಷ ಬೆರೆಸಿದ ಆಹಾರವನ್ನು ಯಾರೂ ಸೇವಿಸಿಲ್ಲ. ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ, ತಲೆಮರೆಸಿಕೊಂಡಿದ್ದಾನೆ. ಪನ್ಹಾಲ ತಾಲ್ಲೂಕಿನ ಉತ್ರೆ ಎಂಬ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕೆಲವರು ಆತನನ್ನು ಹಿಡಿಯಲು ಯತ್ನಿಸಿದರೂ, ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದಿದ್ದಾರೆ.</p><p>'ಆರೋಪಿಯನ್ನು ಉತ್ರೆ ಗ್ರಾಮದ ಮಹೇಶ್ ಪಾಟೀಲ್ ಎಂದು ಗುರುತಿಸಲಾಗಿದೆ. ವಧುವಿನ ತಾಯಿಯ ಸಹೋದರನಾಗಿರುವ ಆತನ ವಿರುದ್ಧ, ಜನರ ಜೀವಕ್ಕೆ ಅಪಾಯವೊಡ್ಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪನ್ಹಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಕೊಂಡುಭಾಯಿರಿ ತಿಳಿಸಿದ್ದಾರೆ.</p><p>ಪೊಲೀಸರ ಮಾಹಿತಿ ಪ್ರಕಾರ, ವಧು ಆರೋಪಿಯ ಮನೆಯಲ್ಲೇ ಬೆಳೆದಿದ್ದಳು ಎನ್ನಲಾಗಿದೆ.</p><p>'ಇತ್ತೀಚೆಗೆ ಮನೆಬಿಟ್ಟು ಹೋಗಿದ್ದ ವಧು, ಗ್ರಾಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ಇದರಿಂದ ಪಾಟೀಲ್ ಕೆರಳಿದ್ದ. ಮದುವೆ ಹಿನ್ನೆಲೆಯಲ್ಲಿ ದಂಪತಿ, ಆರತಕ್ಷತೆ ಏರ್ಪಡಿಸಿದ್ದ ಕಲ್ಯಾಣ ಮಂಟಪಕ್ಕೆ ನುಗ್ಗಿದ ಆತ, ಆತಿಥಿಗಳಿಗಾಗಿ ತಯಾರಿಸುತ್ತಿದ್ದ ಆಹಾರದಲ್ಲಿ ವಿಷ ಬೆರೆಸಿದ್ದ' ಎಂದು ಮಹೇಶ್ ವಿವರಿಸಿದ್ದಾರೆ.</p><p>'ಸ್ಥಳದಲ್ಲಿದ್ದವರು ವಿಷ ಬೆರೆಸದಂತೆ ತಡೆಯಲು ಯತ್ನಿಸಿದರೂ, ಸಾಧ್ಯವಾಗಿರಲಿಲ್ಲ. ಕಿಡಿಗೇಡಿ, ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸೆರೆಗೆ ಬಲೆ ಬೀಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಹಾಪುರ:</strong> ಸಹೋದರಿಯ ಮಗಳು (ಸೋದರ ಸೊಸೆ) ತನ್ನ ಒಪ್ಪಿಗೆ ಪಡೆಯದೆ ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ವ್ಯಕ್ತಿಯೊಬ್ಬ, ಆರತಕ್ಷತೆ ಸಮಾರಂಭದ ವೇಳೆ ಅತಿಥಿಗಳಿಗೆ ತಯಾರಿಸುತ್ತಿದ್ದ ಆಹಾರದಲ್ಲಿ ವಿಷ ಬೆರೆಸಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.</p><p>ಅದೃಷ್ಟವಶಾತ್, ವಿಷ ಬೆರೆಸಿದ ಆಹಾರವನ್ನು ಯಾರೂ ಸೇವಿಸಿಲ್ಲ. ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ, ತಲೆಮರೆಸಿಕೊಂಡಿದ್ದಾನೆ. ಪನ್ಹಾಲ ತಾಲ್ಲೂಕಿನ ಉತ್ರೆ ಎಂಬ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕೆಲವರು ಆತನನ್ನು ಹಿಡಿಯಲು ಯತ್ನಿಸಿದರೂ, ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದಿದ್ದಾರೆ.</p><p>'ಆರೋಪಿಯನ್ನು ಉತ್ರೆ ಗ್ರಾಮದ ಮಹೇಶ್ ಪಾಟೀಲ್ ಎಂದು ಗುರುತಿಸಲಾಗಿದೆ. ವಧುವಿನ ತಾಯಿಯ ಸಹೋದರನಾಗಿರುವ ಆತನ ವಿರುದ್ಧ, ಜನರ ಜೀವಕ್ಕೆ ಅಪಾಯವೊಡ್ಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪನ್ಹಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಕೊಂಡುಭಾಯಿರಿ ತಿಳಿಸಿದ್ದಾರೆ.</p><p>ಪೊಲೀಸರ ಮಾಹಿತಿ ಪ್ರಕಾರ, ವಧು ಆರೋಪಿಯ ಮನೆಯಲ್ಲೇ ಬೆಳೆದಿದ್ದಳು ಎನ್ನಲಾಗಿದೆ.</p><p>'ಇತ್ತೀಚೆಗೆ ಮನೆಬಿಟ್ಟು ಹೋಗಿದ್ದ ವಧು, ಗ್ರಾಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ಇದರಿಂದ ಪಾಟೀಲ್ ಕೆರಳಿದ್ದ. ಮದುವೆ ಹಿನ್ನೆಲೆಯಲ್ಲಿ ದಂಪತಿ, ಆರತಕ್ಷತೆ ಏರ್ಪಡಿಸಿದ್ದ ಕಲ್ಯಾಣ ಮಂಟಪಕ್ಕೆ ನುಗ್ಗಿದ ಆತ, ಆತಿಥಿಗಳಿಗಾಗಿ ತಯಾರಿಸುತ್ತಿದ್ದ ಆಹಾರದಲ್ಲಿ ವಿಷ ಬೆರೆಸಿದ್ದ' ಎಂದು ಮಹೇಶ್ ವಿವರಿಸಿದ್ದಾರೆ.</p><p>'ಸ್ಥಳದಲ್ಲಿದ್ದವರು ವಿಷ ಬೆರೆಸದಂತೆ ತಡೆಯಲು ಯತ್ನಿಸಿದರೂ, ಸಾಧ್ಯವಾಗಿರಲಿಲ್ಲ. ಕಿಡಿಗೇಡಿ, ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸೆರೆಗೆ ಬಲೆ ಬೀಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>