<p><strong>ಲಖನೌ: </strong>ಕುಖ್ಯಾತ ರೌಡಿ ಅಜಿತ್ ಸಿಂಗ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಿರಿಧಾನಿ ವಿಶ್ವಕರ್ಮ(40) ಅಲಿಯಾಸ್ ವೈದ್ಯ ಸೋಮವಾರ ಉತ್ತರ ಪ್ರದೇಶದ ಪೊಲೀಸರ ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾನೆ.</p>.<p>ಆರೋಪಿ ವಿಶ್ವಕರ್ಮನನ್ನು ಪೊಲೀಸರು ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ, ಕೊಲೆ ಘಟನೆ ನಡೆದ ಜಾಗವಾದ ಖರ್ಗಾಪುರ ಕ್ರಾಸಿಂಗ್ಗೆ ಕರೆದೊಯ್ದರು.ಪೊಲೀಸ್ ವಾಹನದಿಂದ ಕೆಳಗೆ ಇಳಿಯುವಾಗ ಆರೋಪಿಸಬ್ಇನ್ಸ್ಪೆಕ್ಟರ್ ಅಖ್ತರ್ ಉಸ್ಮಾನಿ ಮೇಲೆ ಹಲ್ಲೆ ಮಾಡಿ, ಅವರಿಂದ ಪಿಸ್ತೂಲ್ ಕಿತ್ತುಕೊಂಡು, ಕೆಳಕ್ಕೆ ತಳ್ಳಿ ಓಡಲು ಆರಂಭಿಸಿದ.</p>.<p>ಪೊದೆಯೊಳಗೆ ಕುಳಿತ ಆರೋಪಿ ಪೊಲೀಸರತ್ತ ಗುಂಡು ಹಾರಿಸಿದಾಗ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದರು. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದೆ’ ಎಂದುಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ನೀಲಬ್ಜಾ ಚೌಧರಿ ತಿಳಿಸಿದರು.</p>.<p>ಜನವರಿ 6ರಂದು ಲಖನೌ ನಗರದ ಗೋಮತಿ ನಗರ ವ್ಯಾಪ್ತಿಯಲ್ಲಿ ರೌಡಿ ಅಜಿತ್ ಸಿಂಗ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ: </strong>ಕುಖ್ಯಾತ ರೌಡಿ ಅಜಿತ್ ಸಿಂಗ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಿರಿಧಾನಿ ವಿಶ್ವಕರ್ಮ(40) ಅಲಿಯಾಸ್ ವೈದ್ಯ ಸೋಮವಾರ ಉತ್ತರ ಪ್ರದೇಶದ ಪೊಲೀಸರ ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾನೆ.</p>.<p>ಆರೋಪಿ ವಿಶ್ವಕರ್ಮನನ್ನು ಪೊಲೀಸರು ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ, ಕೊಲೆ ಘಟನೆ ನಡೆದ ಜಾಗವಾದ ಖರ್ಗಾಪುರ ಕ್ರಾಸಿಂಗ್ಗೆ ಕರೆದೊಯ್ದರು.ಪೊಲೀಸ್ ವಾಹನದಿಂದ ಕೆಳಗೆ ಇಳಿಯುವಾಗ ಆರೋಪಿಸಬ್ಇನ್ಸ್ಪೆಕ್ಟರ್ ಅಖ್ತರ್ ಉಸ್ಮಾನಿ ಮೇಲೆ ಹಲ್ಲೆ ಮಾಡಿ, ಅವರಿಂದ ಪಿಸ್ತೂಲ್ ಕಿತ್ತುಕೊಂಡು, ಕೆಳಕ್ಕೆ ತಳ್ಳಿ ಓಡಲು ಆರಂಭಿಸಿದ.</p>.<p>ಪೊದೆಯೊಳಗೆ ಕುಳಿತ ಆರೋಪಿ ಪೊಲೀಸರತ್ತ ಗುಂಡು ಹಾರಿಸಿದಾಗ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದರು. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದೆ’ ಎಂದುಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ನೀಲಬ್ಜಾ ಚೌಧರಿ ತಿಳಿಸಿದರು.</p>.<p>ಜನವರಿ 6ರಂದು ಲಖನೌ ನಗರದ ಗೋಮತಿ ನಗರ ವ್ಯಾಪ್ತಿಯಲ್ಲಿ ರೌಡಿ ಅಜಿತ್ ಸಿಂಗ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>