ಕೇರಳದ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ, ಮಲಯತ್ತೂರಿನಲ್ಲಿ ಪ್ರವಾಹ ಹೊತ್ತು ತಂದ ಕಸವೇ ಸಂಚಾರಕ್ಕೆ ತಡೆಯಾಗಿದೆ. ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ಕಣ್ಣ ಮುಂದಿದೆ, ಪರಿಸರ ಕಾಳಜಿ ಜವಾಬ್ದಾರಿ ಮುಂದಿದೆ. ಅದೇ ಸಮಯದಲ್ಲಿ ಜನರ ಜೀವ, ಜೀವನ ಹಾಗೂ ಸಂಪರ್ಕದ ಅನಿವಾರ್ಯತೆಯೂ ಕಾಡುತ್ತಿದೆ. ಅಲ್ಲಿನ ಆಡಳಿತ ಜೆಸಿಬಿ ಮೂಲಕ ಸೇತುವೆ ಮೇಲೆ ತುಂಬಿರುವ ತ್ಯಾಜ್ಯವನ್ನು ಮತ್ತೆ ಪೆರಿಯಾರ್ ನದಿಗೆ ಸುರಿಯುತ್ತಿದೆ.