ಛುಟವೈ ಗ್ರಾಮದ ಮಾದ್ವಿ ನಂದಾ ಎಂಬ ಯುವಕರೊಬ್ಬರು ಟ್ರ್ಯಾಕ್ಟರ್ನಲ್ಲಿ ತರೇಮ್ ಎಂಬಲ್ಲಿಗೆ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ಇಳಿದು ಸಾಗುವಾಗ ಕಚ್ಚಾ ಬಾಂಬ್ ಹೂತಿಟ್ಟಿದ್ದ ಜಾಗದಲ್ಲಿ ಅಕಸ್ಮಾತ್ ಹೆಜ್ಜೆ ಇಟ್ಟರು. ಹೀಗಾಗಿ ಬಾಂಬ್ ಸ್ಫೋಟಿಸಿ, ಗಾಯಗೊಂಡರು. ಅವರ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.