ಯುವಕನನ್ನು ಮನೋಹರ ಪಟೇಲ್ ಎಂದು ಗುರುತಿಸಲಾಗಿದ್ದು, ಸಾರಂಗ ಅರಣ್ಯ ವ್ಯಾಪ್ತಿಯ ಗುಧ್ಯಾರಿ ಗ್ರಾಮದಲ್ಲಿ ಘಟನೆ ನಡೆದಿದೆ. ಸೆಲ್ಫಿ ತೆಗೆಯುತ್ತಿದ್ದಾಗ ಮನೋಹರ್ ಜೊತೆ ಅವರ ಮೂರು ಜನ ಸ್ನೇಹಿತರು ಕೂಡ ಇದ್ದರು. ‘ಆನೆ ಅನಿರೀಕ್ಷಿತವಾಗಿ ಅವರ ಮೇಲೆ ದಾಳಿ ನಡೆಸಿದಾಗ ಸ್ನೇಹಿತರು ಅದೃಷ್ಟವಶಾತ್ ಪಾರಾದರು. ಆದರೆ ದಾಳಿಯಲ್ಲಿ ಮನೋಹರ್ ಸಾವನ್ನಪ್ಪಿದರು‘ ಎಂದು ರಾಯಗಡ ಅರಣ್ಯ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.