<p><strong>ಬಾರಾಬಂಕಿ (ಯುಪಿ):</strong> ಸಹೋದರಿ ಮದುವೆಗೆ ಎಲ್ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ನೀಡುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದು, ಪತ್ನಿಯ ಸಂಬಂಧಿಕರು ಗಂಡನನ್ನು ಹತ್ಯೆಗೈದಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬುಧವಾರ ನೆಡೆದಿದೆ.</p>.<p>ಪೊಲೀಸರ ಪ್ರಕಾರ, ಕ್ಷಮಾ ಮಿಶ್ರಾ ಮತ್ತು ಪತಿ ಚಂದ್ರ ಪ್ರಕಾಶ್ ಮಿಶ್ರಾ ನಡುವೆ ಮಂಗಳವಾರ ಜಗಳ ನಡೆದಿತ್ತು. ಕ್ಷಮಾ ತನ್ನ ಸಹೋದರ ಮತ್ತು ಇತರ ಕೆಲ ಸಂಬಂಧಿಕರನ್ನು ಕದರಾಬಾದ್ನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಾಗ ಈ ಘಟನೆ ಸಂಭವಿಸಿದೆ. </p>.<p>ಏಪ್ರಿಲ್ 26ರಂದು ತನ್ನ ಸಹೋದರಿ ಮದುವೆಗೆ ಎಲ್ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲು ಚಂದ್ರು ಬಯಸಿದ್ದರು. ಆದರೆ, ಅವರ ಪತ್ನಿ ಕ್ಷಮಾ ಅದನ್ನು ವಿರೋಧಿಸಿದರು ಎಂದು ಫತೇಪುರ್ ಪೊಲೀಸ್ ಸರ್ಕಲ್ ಆಫೀಸರ್ (ಸಿಒ) ಡಾ. ಬಿನು ಸಿಂಗ್ ಹೇಳಿದ್ದಾರೆ. </p>.<p>ಈ ವಿಚಾರದಲ್ಲಿ ಕ್ಷಮಾ ಸಂಬಂಧಿಕರ ಹಸ್ತಕ್ಷೇಪವನ್ನು ಚಂದ್ರು ಪ್ರಶ್ನಿಸಿದಾಗ, ಅವರು ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಚಂದ್ರು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ಎಂದು ಸಿಒ ತಿಳಿಸಿದ್ದಾರೆ.</p>.<p>ಈ ಪ್ರಕರಣದಲ್ಲಿ ಹೆಂಡತಿ ಮತ್ತು ಆತನ ಸಹೋದರ ಸೇರಿ ಐವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾರಾಬಂಕಿ (ಯುಪಿ):</strong> ಸಹೋದರಿ ಮದುವೆಗೆ ಎಲ್ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ನೀಡುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದು, ಪತ್ನಿಯ ಸಂಬಂಧಿಕರು ಗಂಡನನ್ನು ಹತ್ಯೆಗೈದಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬುಧವಾರ ನೆಡೆದಿದೆ.</p>.<p>ಪೊಲೀಸರ ಪ್ರಕಾರ, ಕ್ಷಮಾ ಮಿಶ್ರಾ ಮತ್ತು ಪತಿ ಚಂದ್ರ ಪ್ರಕಾಶ್ ಮಿಶ್ರಾ ನಡುವೆ ಮಂಗಳವಾರ ಜಗಳ ನಡೆದಿತ್ತು. ಕ್ಷಮಾ ತನ್ನ ಸಹೋದರ ಮತ್ತು ಇತರ ಕೆಲ ಸಂಬಂಧಿಕರನ್ನು ಕದರಾಬಾದ್ನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಾಗ ಈ ಘಟನೆ ಸಂಭವಿಸಿದೆ. </p>.<p>ಏಪ್ರಿಲ್ 26ರಂದು ತನ್ನ ಸಹೋದರಿ ಮದುವೆಗೆ ಎಲ್ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲು ಚಂದ್ರು ಬಯಸಿದ್ದರು. ಆದರೆ, ಅವರ ಪತ್ನಿ ಕ್ಷಮಾ ಅದನ್ನು ವಿರೋಧಿಸಿದರು ಎಂದು ಫತೇಪುರ್ ಪೊಲೀಸ್ ಸರ್ಕಲ್ ಆಫೀಸರ್ (ಸಿಒ) ಡಾ. ಬಿನು ಸಿಂಗ್ ಹೇಳಿದ್ದಾರೆ. </p>.<p>ಈ ವಿಚಾರದಲ್ಲಿ ಕ್ಷಮಾ ಸಂಬಂಧಿಕರ ಹಸ್ತಕ್ಷೇಪವನ್ನು ಚಂದ್ರು ಪ್ರಶ್ನಿಸಿದಾಗ, ಅವರು ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಚಂದ್ರು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ಎಂದು ಸಿಒ ತಿಳಿಸಿದ್ದಾರೆ.</p>.<p>ಈ ಪ್ರಕರಣದಲ್ಲಿ ಹೆಂಡತಿ ಮತ್ತು ಆತನ ಸಹೋದರ ಸೇರಿ ಐವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>