<p><strong>ಶಬರಿಮಲೆ</strong>: ಮಂಡಲ–ಮಕರವಿಳಕ್ಕು ಮಹೋತ್ಸವ ಮುಕ್ತಾಯಗೊಂಡಿದ್ದು, ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಸೋಮವಾರ ಬೆಳಿಗ್ಗೆ ವಿಧ್ಯುಕ್ತವಾಗಿ ಮುಚ್ಚಲಾಯಿತು ಎಂದು ಟ್ರಾವಂಕೂರ್ ದೇವಸ್ವಂ ಬೋರ್ಟ್ (ಟಿಡಿಬಿ) ಹೇಳಿದೆ.</p>.ಸ್ವಾಮಿಯೇ ಶರಣಂ ಅಯ್ಯಪ್ಪ: ‘ಮಕರಜ್ಯೋತಿ’ ಕಣ್ತುಂಬಿಕೊಂಡ ಭಕ್ತರು.<p>2024-25ರ ತೀರ್ಥಯಾತ್ರೆಯ ಋತುವಿನಲ್ಲಿ ಭಕ್ತರ ಮಹಾಪೂರವೇ ಹರಿದು ಬಂದಿದೆ. ಸುಮಾರು 53 ಲಕ್ಷ ಭಕ್ತರು ಶಬರಿ ಮಲೆಗೆ ಬಂದಿದ್ದಾಗಿ ಟಿಡಿಬಿ ತಿಳಿಸಿದೆ.</p><p>ಪಂದಳ ರಾಜ ಕುಟುಂಬದ ಪ್ರತಿನಿಧಿ ತ್ರಿಕ್ಕೇಟನಲ್ ರಾಜರಾಜ ಶರ್ಮಾ ಅವರು ದರ್ಶನ ಪಡೆದ ಬಳಿಕ ಬೆಳಿಗ್ಗೆ 6.30ಕ್ಕೆ ದೇಗುಲವನ್ನು ಮುಚ್ಚಲಾಯಿತು. ಬೆಳಿಗ್ಗೆ 5 ಗಂಟೆಗೆ ತೆರೆದ ದೇಗುಲದ ಪೂರ್ವ ಮಂಡಪಂನಲ್ಲಿ ಗಣಪತಿ ಹೋಮ ನಡೆಯಿತು.</p>.ಶಬರಿಮಲೆ: 29 ದಿನದಲ್ಲಿ ₹163.89 ಕೋಟಿ ಆದಾಯ.<p>ಬಳಿಕ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ಮೇಲ್ಶಾಂತಿ ಅರುಣ್ ಕುಮಾರ್ ನಂಬೂದಿರಿಯವರು ರುದ್ರಾಕ್ಷಿ ಮಾಲೆ ಧರಿಸಿ, ಯೋಗ ದಂಡ ಕೈಯಲ್ಲಿ ಹಿಡಿದುಕೊಂಡು ವಿಭೂತಿಯಾಭಿಷೇಕ ನಡೆಸಿದರು. ಬಳಿಕ ‘ಹರಿವರಾಸನಮ್’ ಪಠಿಸಿ, ದೀಪ ಆರಿಸಿ ದೇಗುಲದ ಬಾಗಿಲುಗಳನ್ನು ಮೇಲ್ಶಾಂತಿಯವರು ಮುಚ್ಚಿದರು ಎಂದು ಪ್ರಕಟಣೆ ಹೇಳಿದೆ.</p><p>ಕೀಲಿಗಳನ್ನು ರಾಜಮನೆತನದ ಪ್ರತಿನಿಧಿಗೆ ಹಸ್ತಾಂತರಿಸಲಾಯಿತು. 18 ಮೆಟ್ಟಿಲುಗಳನ್ನು ಇಳಿದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಬಳಿಕ ಕೀಲಿಯನ್ನು ದೇವಸ್ವಂ ಬೋರ್ಡ್ ಪ್ರತಿನಿಧಿ ಹಾಗೂ ಮೇಲ್ಶಾಂತಿ ಸಮ್ಮುಖದಲ್ಲಿ ಶಬರಿಮಲೆ ಆಡಳಿತಾಧಿಕಾರಿ ಬಿಜು ವಿ. ನಾಥ್ಗೆ ಹಸ್ತಾಂತರಿಸಲಾಯಿತು.</p><p>ರಾಜ ಮನೆತನದ ಪ್ರತಿನಿಧಿ ಹಾಗೂ ಅವರ ಪರಿವಾರ ಪಂದಳಂ ಅರಮನೆಗೆ ತೆರಳಿತು. ಜ. 23ರಂದು ತಿರುವಾಭರಣಂ ಮೆರವಣಿಗೆ ಪಂದಳಕ್ಕೆ ತಲುಪಲಿದೆ ಎಂದು ಪ್ರಕಟಣೆ ಹೇಳಿದೆ.</p>.Sabarimala | 8,000 ಕಿ.ಮೀ ಕ್ರಮಿಸಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಭಕ್ತರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಬರಿಮಲೆ</strong>: ಮಂಡಲ–ಮಕರವಿಳಕ್ಕು ಮಹೋತ್ಸವ ಮುಕ್ತಾಯಗೊಂಡಿದ್ದು, ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಸೋಮವಾರ ಬೆಳಿಗ್ಗೆ ವಿಧ್ಯುಕ್ತವಾಗಿ ಮುಚ್ಚಲಾಯಿತು ಎಂದು ಟ್ರಾವಂಕೂರ್ ದೇವಸ್ವಂ ಬೋರ್ಟ್ (ಟಿಡಿಬಿ) ಹೇಳಿದೆ.</p>.ಸ್ವಾಮಿಯೇ ಶರಣಂ ಅಯ್ಯಪ್ಪ: ‘ಮಕರಜ್ಯೋತಿ’ ಕಣ್ತುಂಬಿಕೊಂಡ ಭಕ್ತರು.<p>2024-25ರ ತೀರ್ಥಯಾತ್ರೆಯ ಋತುವಿನಲ್ಲಿ ಭಕ್ತರ ಮಹಾಪೂರವೇ ಹರಿದು ಬಂದಿದೆ. ಸುಮಾರು 53 ಲಕ್ಷ ಭಕ್ತರು ಶಬರಿ ಮಲೆಗೆ ಬಂದಿದ್ದಾಗಿ ಟಿಡಿಬಿ ತಿಳಿಸಿದೆ.</p><p>ಪಂದಳ ರಾಜ ಕುಟುಂಬದ ಪ್ರತಿನಿಧಿ ತ್ರಿಕ್ಕೇಟನಲ್ ರಾಜರಾಜ ಶರ್ಮಾ ಅವರು ದರ್ಶನ ಪಡೆದ ಬಳಿಕ ಬೆಳಿಗ್ಗೆ 6.30ಕ್ಕೆ ದೇಗುಲವನ್ನು ಮುಚ್ಚಲಾಯಿತು. ಬೆಳಿಗ್ಗೆ 5 ಗಂಟೆಗೆ ತೆರೆದ ದೇಗುಲದ ಪೂರ್ವ ಮಂಡಪಂನಲ್ಲಿ ಗಣಪತಿ ಹೋಮ ನಡೆಯಿತು.</p>.ಶಬರಿಮಲೆ: 29 ದಿನದಲ್ಲಿ ₹163.89 ಕೋಟಿ ಆದಾಯ.<p>ಬಳಿಕ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ಮೇಲ್ಶಾಂತಿ ಅರುಣ್ ಕುಮಾರ್ ನಂಬೂದಿರಿಯವರು ರುದ್ರಾಕ್ಷಿ ಮಾಲೆ ಧರಿಸಿ, ಯೋಗ ದಂಡ ಕೈಯಲ್ಲಿ ಹಿಡಿದುಕೊಂಡು ವಿಭೂತಿಯಾಭಿಷೇಕ ನಡೆಸಿದರು. ಬಳಿಕ ‘ಹರಿವರಾಸನಮ್’ ಪಠಿಸಿ, ದೀಪ ಆರಿಸಿ ದೇಗುಲದ ಬಾಗಿಲುಗಳನ್ನು ಮೇಲ್ಶಾಂತಿಯವರು ಮುಚ್ಚಿದರು ಎಂದು ಪ್ರಕಟಣೆ ಹೇಳಿದೆ.</p><p>ಕೀಲಿಗಳನ್ನು ರಾಜಮನೆತನದ ಪ್ರತಿನಿಧಿಗೆ ಹಸ್ತಾಂತರಿಸಲಾಯಿತು. 18 ಮೆಟ್ಟಿಲುಗಳನ್ನು ಇಳಿದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಬಳಿಕ ಕೀಲಿಯನ್ನು ದೇವಸ್ವಂ ಬೋರ್ಡ್ ಪ್ರತಿನಿಧಿ ಹಾಗೂ ಮೇಲ್ಶಾಂತಿ ಸಮ್ಮುಖದಲ್ಲಿ ಶಬರಿಮಲೆ ಆಡಳಿತಾಧಿಕಾರಿ ಬಿಜು ವಿ. ನಾಥ್ಗೆ ಹಸ್ತಾಂತರಿಸಲಾಯಿತು.</p><p>ರಾಜ ಮನೆತನದ ಪ್ರತಿನಿಧಿ ಹಾಗೂ ಅವರ ಪರಿವಾರ ಪಂದಳಂ ಅರಮನೆಗೆ ತೆರಳಿತು. ಜ. 23ರಂದು ತಿರುವಾಭರಣಂ ಮೆರವಣಿಗೆ ಪಂದಳಕ್ಕೆ ತಲುಪಲಿದೆ ಎಂದು ಪ್ರಕಟಣೆ ಹೇಳಿದೆ.</p>.Sabarimala | 8,000 ಕಿ.ಮೀ ಕ್ರಮಿಸಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಭಕ್ತರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>