<p><strong>ಮಥುರಾ:</strong> ಮಥುರಾ-ಬೃಂದಾವನದಲ್ಲಿ ಒಳಚರಂಡಿ ಅಗೆಯುತ್ತಿದ್ದಾಗ ಮಣ್ಣಿನ ದಿಬ್ಬ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.</p>.ಮಥುರಾ: ಜೂಜಾಟ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ.<p>ಮಥುರಾ-ವೃಂದಾವನ ಪುರಸಭೆಯ ವಾರ್ಡ್ ಸಂಖ್ಯೆ 34 ರ ಪರಿಕ್ರಮ ಮಾರ್ಗದಲ್ಲಿರುವ ಶ್ಯಾಮ್ ಕುಟಿ ಬಳಿ ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದೆ ಎಂದು ಬೃಂದಾವನದ ಠಾಣಾಧಿಕಾರಿ ಪ್ರಶಾಂತ್ ಕಪಿಲ್ ತಿಳಿಸಿದ್ದಾರೆ. ಸ್ಥಳದಲ್ಲಿ ಫಿರೋಜಾಬಾದ್ ಏಜೆನ್ಸಿಯು ಒಳಚರಂಡಿ ಮಾರ್ಗವನ್ನು ಅಗೆಯುವ ಕೆಲಸವನ್ನು ನಡೆಸುತ್ತಿದೆ.</p><p>ಫಿರೋಜಾಬಾದ್ ನಿವಾಸಿಗಳಾದ ನೌರಂಗಿ ಲಾಲ್ (34) ಮತ್ತು ವಿಜಯ್ ಸಿಂಗ್ ಜಾದೌನ್ (30) ಮೃತರು.</p>.ಮಥುರಾ | 5 ವರ್ಷದ ಬಾಲಕಿ ಸಾವು: ತುಂಡು ತುಂಡಾದ ದೇಹದ ಭಾಗಗಳು ಪತ್ತೆ.<p> ಕಾರ್ಮಿಕರು ಒಳಚರಂಡಿ ಅಗೆಯುತ್ತಿದ್ದಾಗ ಬೃಹತ್ ಮಣ್ಣಿನ ದಿಬ್ಬವು ಅವರ ಮೇಲೆ ಕುಸಿದಿದ್ದು, ಅವರು ಅದರ ಕೆಳಗೆ ಹೂತು ಹೋಗಿದ್ದಾರೆ. ಹೊರತೆಗೆಯುವ ಹೊತ್ತಿಗೆ ಇಬ್ಬರೂ ಪ್ರಜ್ಞಾಹೀನರಾಗಿದ್ದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಸಾವಿಗೀಡಾಗಿದ್ದಾಗಿ ವೈದ್ಯರು ತಿಳಿಸಿದ್ದಾರೆ.</p><p>ಗುತ್ತಿಗೆದಾರ ಮತ್ತು ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗನ ಸಾವು ಸಂಭವಿಸಿದೆ ಎಂದು ನೌರಂಗಿ ಲಾಲ್ ಅವರ ತಂದೆ ದೂರು ದಾಖಲಿಸಿದ್ದಾರೆ.</p>.ಮಥುರಾ ಶಾಹಿ ಮಸೀದಿ ಆವರಣ ಸಮೀಕ್ಷೆಗೆ ನೀಡಿದ್ದ ತಡೆ ವಿಸ್ತರಿಸಿದ ಸುಪ್ರೀಂ ಕೋರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಥುರಾ:</strong> ಮಥುರಾ-ಬೃಂದಾವನದಲ್ಲಿ ಒಳಚರಂಡಿ ಅಗೆಯುತ್ತಿದ್ದಾಗ ಮಣ್ಣಿನ ದಿಬ್ಬ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.</p>.ಮಥುರಾ: ಜೂಜಾಟ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ.<p>ಮಥುರಾ-ವೃಂದಾವನ ಪುರಸಭೆಯ ವಾರ್ಡ್ ಸಂಖ್ಯೆ 34 ರ ಪರಿಕ್ರಮ ಮಾರ್ಗದಲ್ಲಿರುವ ಶ್ಯಾಮ್ ಕುಟಿ ಬಳಿ ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದೆ ಎಂದು ಬೃಂದಾವನದ ಠಾಣಾಧಿಕಾರಿ ಪ್ರಶಾಂತ್ ಕಪಿಲ್ ತಿಳಿಸಿದ್ದಾರೆ. ಸ್ಥಳದಲ್ಲಿ ಫಿರೋಜಾಬಾದ್ ಏಜೆನ್ಸಿಯು ಒಳಚರಂಡಿ ಮಾರ್ಗವನ್ನು ಅಗೆಯುವ ಕೆಲಸವನ್ನು ನಡೆಸುತ್ತಿದೆ.</p><p>ಫಿರೋಜಾಬಾದ್ ನಿವಾಸಿಗಳಾದ ನೌರಂಗಿ ಲಾಲ್ (34) ಮತ್ತು ವಿಜಯ್ ಸಿಂಗ್ ಜಾದೌನ್ (30) ಮೃತರು.</p>.ಮಥುರಾ | 5 ವರ್ಷದ ಬಾಲಕಿ ಸಾವು: ತುಂಡು ತುಂಡಾದ ದೇಹದ ಭಾಗಗಳು ಪತ್ತೆ.<p> ಕಾರ್ಮಿಕರು ಒಳಚರಂಡಿ ಅಗೆಯುತ್ತಿದ್ದಾಗ ಬೃಹತ್ ಮಣ್ಣಿನ ದಿಬ್ಬವು ಅವರ ಮೇಲೆ ಕುಸಿದಿದ್ದು, ಅವರು ಅದರ ಕೆಳಗೆ ಹೂತು ಹೋಗಿದ್ದಾರೆ. ಹೊರತೆಗೆಯುವ ಹೊತ್ತಿಗೆ ಇಬ್ಬರೂ ಪ್ರಜ್ಞಾಹೀನರಾಗಿದ್ದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಸಾವಿಗೀಡಾಗಿದ್ದಾಗಿ ವೈದ್ಯರು ತಿಳಿಸಿದ್ದಾರೆ.</p><p>ಗುತ್ತಿಗೆದಾರ ಮತ್ತು ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗನ ಸಾವು ಸಂಭವಿಸಿದೆ ಎಂದು ನೌರಂಗಿ ಲಾಲ್ ಅವರ ತಂದೆ ದೂರು ದಾಖಲಿಸಿದ್ದಾರೆ.</p>.ಮಥುರಾ ಶಾಹಿ ಮಸೀದಿ ಆವರಣ ಸಮೀಕ್ಷೆಗೆ ನೀಡಿದ್ದ ತಡೆ ವಿಸ್ತರಿಸಿದ ಸುಪ್ರೀಂ ಕೋರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>