<p><strong>ಮಹಾರಾಷ್ಟ್ರ</strong>: ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಆದೇಶಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.</p><p>ಕೆಡಿಎಂಸಿ ಆದೇಶದ ಪ್ರಕಾರ, ಮೇಕೆ, ಕುರಿ, ಕೋಳಿ ಮತ್ತು ದೊಡ್ಡ ಪ್ರಾಣಿಗಳ ಪರವಾನಗಿ ಪಡೆದ ಕಸಾಯಿಖಾನೆಗಳು ಹಾಗೂ ಮಾಂಸ ಮಾರಾಟ ಮಳಿಗೆಗಳು ಮತ್ತು ಅಂಗಡಿಗಳು ಆಗಸ್ಟ್ 14 ರ ಮಧ್ಯರಾತ್ರಿಯಿಂದ ಆಗಸ್ಟ್ 15 ರ ಮಧ್ಯರಾತ್ರಿಯವರೆಗೆ ಯಾವುದೇ ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಒಂದು ವೇಳೆ ಆ ದಿನ ಮಾಂಸ ಮಾರಾಟವಾದರೇ, ಕಾಯ್ದೆ 1949 ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆ ಹೇಳಿದೆ. </p><p>ಕೆಡಿಎಂಸಿ ಆದೇಶಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷಗಳಾದ ಎನ್ಸಿಪಿ (ಎಸ್ಪಿ) ಮತ್ತು ಶಿವಸೇನೆ (ಯುಬಿಟಿ) ನಾಯಕರು, ನಮಗೆ ಯಾವ ಆಹಾರ ಬೇಕೊ ಅದನ್ನು ಸೇವಿಸುತ್ತೆವೆ. ಸ್ವಾತಂತ್ರ್ಯ ದಿನದ ಪ್ರಯುಕ್ತ ಆ ದಿನ ನಾನು ಮಟನ್ ಪಾರ್ಟಿ ಮಾಡುತ್ತೇನೆ. ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುಲು ನೀವು ಯಾರು ಎಂದು– ಪ್ರಶ್ನಿಸಿ ಠಾಣೆ ಜಿಲ್ಲೆಯ ಕಲ್ವಾ-ಮುಂಬೈ ವಿಧಾನಸಭಾ ಕ್ಷೇತ್ರದ ಅವ್ಹಾದ್ ಆದೇಶವನ್ನು ವಿರೋಧಿಸಿದ್ದಾರೆ. </p><p>ಜನರ ಆಹಾರ ಆಯ್ಕೆಗಳನ್ನು ನಿರ್ದೇಶಿಸಿದ್ದಕ್ಕಾಗಿ ಕೆಡಿಎಂಸಿ ಆಯುಕ್ತರನ್ನು ಅಮಾನತುಗೊಳಿಸಬೇಕೆಂದು ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಒತ್ತಾಯಿಸಿದರು.</p><p>ಕೆಡಿಎಂಸಿಯ ಕ್ರಮವನ್ನು ಸಮರ್ಥಿಸಿಕೊಂಡ ಶಿವಸೇನಾ ನಾಯಕ ವಿಶ್ವನಾಥ್ ಭೋಯಿರ್, ಜನರ ಆಹಾರ ಕ್ರಮವನ್ನು ವಿರೋಧಿಸುತ್ತಿಲ್ಲ. ಒಂದು ದಿನ ಮಾಂಸ ತಿನ್ನದಿದ್ದರೆ ಏನು ಸಮಸ್ಯೆ? ವಿರೋಧ ಪಕ್ಷಗಳಿಗೆ ಟೀಕಿಸುವುದು ಮಾತ್ರ ತಿಳಿದಿದೆ" ಎಂದು ಅವರು ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾರಾಷ್ಟ್ರ</strong>: ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಆದೇಶಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.</p><p>ಕೆಡಿಎಂಸಿ ಆದೇಶದ ಪ್ರಕಾರ, ಮೇಕೆ, ಕುರಿ, ಕೋಳಿ ಮತ್ತು ದೊಡ್ಡ ಪ್ರಾಣಿಗಳ ಪರವಾನಗಿ ಪಡೆದ ಕಸಾಯಿಖಾನೆಗಳು ಹಾಗೂ ಮಾಂಸ ಮಾರಾಟ ಮಳಿಗೆಗಳು ಮತ್ತು ಅಂಗಡಿಗಳು ಆಗಸ್ಟ್ 14 ರ ಮಧ್ಯರಾತ್ರಿಯಿಂದ ಆಗಸ್ಟ್ 15 ರ ಮಧ್ಯರಾತ್ರಿಯವರೆಗೆ ಯಾವುದೇ ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಒಂದು ವೇಳೆ ಆ ದಿನ ಮಾಂಸ ಮಾರಾಟವಾದರೇ, ಕಾಯ್ದೆ 1949 ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆ ಹೇಳಿದೆ. </p><p>ಕೆಡಿಎಂಸಿ ಆದೇಶಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷಗಳಾದ ಎನ್ಸಿಪಿ (ಎಸ್ಪಿ) ಮತ್ತು ಶಿವಸೇನೆ (ಯುಬಿಟಿ) ನಾಯಕರು, ನಮಗೆ ಯಾವ ಆಹಾರ ಬೇಕೊ ಅದನ್ನು ಸೇವಿಸುತ್ತೆವೆ. ಸ್ವಾತಂತ್ರ್ಯ ದಿನದ ಪ್ರಯುಕ್ತ ಆ ದಿನ ನಾನು ಮಟನ್ ಪಾರ್ಟಿ ಮಾಡುತ್ತೇನೆ. ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುಲು ನೀವು ಯಾರು ಎಂದು– ಪ್ರಶ್ನಿಸಿ ಠಾಣೆ ಜಿಲ್ಲೆಯ ಕಲ್ವಾ-ಮುಂಬೈ ವಿಧಾನಸಭಾ ಕ್ಷೇತ್ರದ ಅವ್ಹಾದ್ ಆದೇಶವನ್ನು ವಿರೋಧಿಸಿದ್ದಾರೆ. </p><p>ಜನರ ಆಹಾರ ಆಯ್ಕೆಗಳನ್ನು ನಿರ್ದೇಶಿಸಿದ್ದಕ್ಕಾಗಿ ಕೆಡಿಎಂಸಿ ಆಯುಕ್ತರನ್ನು ಅಮಾನತುಗೊಳಿಸಬೇಕೆಂದು ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಒತ್ತಾಯಿಸಿದರು.</p><p>ಕೆಡಿಎಂಸಿಯ ಕ್ರಮವನ್ನು ಸಮರ್ಥಿಸಿಕೊಂಡ ಶಿವಸೇನಾ ನಾಯಕ ವಿಶ್ವನಾಥ್ ಭೋಯಿರ್, ಜನರ ಆಹಾರ ಕ್ರಮವನ್ನು ವಿರೋಧಿಸುತ್ತಿಲ್ಲ. ಒಂದು ದಿನ ಮಾಂಸ ತಿನ್ನದಿದ್ದರೆ ಏನು ಸಮಸ್ಯೆ? ವಿರೋಧ ಪಕ್ಷಗಳಿಗೆ ಟೀಕಿಸುವುದು ಮಾತ್ರ ತಿಳಿದಿದೆ" ಎಂದು ಅವರು ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>