‘ಕಾವೇರಿ ಜಲವಿವಾದ ನ್ಯಾಯಾ ಧೀಕರಣದ ಮಾರ್ಪಾಡಾಗಿರುವ ಅಂತಿಮ ತೀರ್ಪಿನ ಪ್ರಕಾರ, ಮೇಕೆದಾಟು ಯೋಜನೆ ಕುರಿತು ಪ್ರಾಧಿಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಳೆದ ಜುಲೈನಲ್ಲಿ ಅಭಿಪ್ರಾಯ ನೀಡಿದ್ದರು. ಆ ಬಳಿಕ ಪ್ರಾಧಿಕಾರ 5 ಸಭೆ ನಡೆಸಿದೆ. ಯಾವುದೇ ಸಭೆಯ ಕಾರ್ಯಸೂಚಿ ಪಟ್ಟಿಗೆ ಇದು ಸೇರ್ಪಡೆಯಾಗಿಲ್ಲ.