<p class="title"><strong>ನವದೆಹಲಿ:</strong> ‘ಮಾನ್ಯತೆ ಪಡೆಯದ ಕಾಲೇಜಿನಿಂದ ಮಾನ್ಯತೆ ಪಡೆದ ಕಾಲೇಜಿಗೆ ಎಂಬಿಬಿಎಸ್ ವಿದ್ಯಾರ್ಥಿಯ ವಲಸೆಗೆ ಅವಕಾಶವಿಲ್ಲ. ಎರಡೂ ಕಾಲೇಜುಗಳು ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಯನುಸಾರ ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿದ್ದರಷ್ಟೇ ವಲಸೆಗೆ ಅವಕಾಶ ನೀಡಬಹುದು’ ಎಂದು ಸುಪ್ರಿಂ ಕೋರ್ಟ್ ಆದೇಶಿಸಿದೆ.</p>.<p class="title">ಕಾಯ್ದೆಯ ನಿಯಮಗಳ ಉಲ್ಲೇಖವಿಲ್ಲದೇ ಕೇವಲ ‘ವಲಸೆ’ ಎಂಬ ಪದವನ್ನಷ್ಟೇ ಪರಿಗಣಿಸಲಾಗದು. ಕಾಯ್ದೆಯ ಪ್ರಕಾರ, ಎರಡೂ ಕಾಲೇಜುಗಳು ಮಾನ್ಯತೆ ಪಡೆದಿರಬೇಕು ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಸ್ಪಷ್ಟಪಡಿಸಿತು.</p>.<p class="title">ರಾಜಸ್ಥಾನದಲ್ಲಿ ಅನಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಡಾ.ಎಸ್.ಎನ್.ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಯೊಬ್ಬರ ವಲಸೆಗೆ ಅವಕಾಶ ಕಲ್ಪಿಸಿದ್ದ ರಾಜಸ್ಥಾನ ಹೈಕೋರ್ಟ್ ಆದೇಶವನ್ನೂ ರದ್ದುಪಡಿಸಿತು. ‘ಈ ಕುರಿತು ಹೈಕೋರ್ಟ್ನ ವ್ಯಾಖ್ಯಾನವು ತಪ್ಪಾಗಿದೆ. ವಿದ್ಯಾರ್ಥಿಯ ವರ್ಗಾವಣೆ ಕುರಿತು ನಿಯಮ ಸ್ಪಷ್ಟವಾಗಿದೆ’ ಎಂದು ಪೀಠ ತಿಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ‘ಮಾನ್ಯತೆ ಪಡೆಯದ ಕಾಲೇಜಿನಿಂದ ಮಾನ್ಯತೆ ಪಡೆದ ಕಾಲೇಜಿಗೆ ಎಂಬಿಬಿಎಸ್ ವಿದ್ಯಾರ್ಥಿಯ ವಲಸೆಗೆ ಅವಕಾಶವಿಲ್ಲ. ಎರಡೂ ಕಾಲೇಜುಗಳು ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಯನುಸಾರ ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿದ್ದರಷ್ಟೇ ವಲಸೆಗೆ ಅವಕಾಶ ನೀಡಬಹುದು’ ಎಂದು ಸುಪ್ರಿಂ ಕೋರ್ಟ್ ಆದೇಶಿಸಿದೆ.</p>.<p class="title">ಕಾಯ್ದೆಯ ನಿಯಮಗಳ ಉಲ್ಲೇಖವಿಲ್ಲದೇ ಕೇವಲ ‘ವಲಸೆ’ ಎಂಬ ಪದವನ್ನಷ್ಟೇ ಪರಿಗಣಿಸಲಾಗದು. ಕಾಯ್ದೆಯ ಪ್ರಕಾರ, ಎರಡೂ ಕಾಲೇಜುಗಳು ಮಾನ್ಯತೆ ಪಡೆದಿರಬೇಕು ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಸ್ಪಷ್ಟಪಡಿಸಿತು.</p>.<p class="title">ರಾಜಸ್ಥಾನದಲ್ಲಿ ಅನಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಡಾ.ಎಸ್.ಎನ್.ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಯೊಬ್ಬರ ವಲಸೆಗೆ ಅವಕಾಶ ಕಲ್ಪಿಸಿದ್ದ ರಾಜಸ್ಥಾನ ಹೈಕೋರ್ಟ್ ಆದೇಶವನ್ನೂ ರದ್ದುಪಡಿಸಿತು. ‘ಈ ಕುರಿತು ಹೈಕೋರ್ಟ್ನ ವ್ಯಾಖ್ಯಾನವು ತಪ್ಪಾಗಿದೆ. ವಿದ್ಯಾರ್ಥಿಯ ವರ್ಗಾವಣೆ ಕುರಿತು ನಿಯಮ ಸ್ಪಷ್ಟವಾಗಿದೆ’ ಎಂದು ಪೀಠ ತಿಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>