ವಿವಿಧ ಬೆಳೆಗಳಿಗೆ ‘ಎಂಎಸ್ಪಿ’ಯನ್ನು ಶೇ 21ರವರೆಗೆ ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ₹62,635 ಕೋಟಿ ಹೆಚ್ಚುವರಿ ಆದಾಯ ದೊರೆಯಲಿದೆ.ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈ ನಿರ್ಧಾರ ಕೈಗೊಂಡಿದೆ. ‘ಹಿಂಗಾರು ಬೆಳೆಗಳ ‘ಎಂಎಸ್ಪಿ’ಯು ಉತ್ಪಾದನಾ ವೆಚ್ಚಕ್ಕಿಂತ ಶೇ 50ರಿಂದ ಶೇ 112ರಷ್ಟು ಹೆಚ್ಚಿಗೆ ಇರಲಿದೆ’ ಎಂದು ಸಚಿವ ರಾಧಾಮೋಹನ್ ಸಿಂಗ್ ಹೇಳಿದ್ದಾರೆ.