<p><strong>ಚೆನ್ನೈ:</strong> ದಿವಂಗತ ಎಂ. ಕರುಣಾನಿಧಿ ಅವರ ಹಿರಿಯ ಮಗ ನಟ ಎಂ.ಕೆ. ಮುತ್ತು (77) ಅವರು ಶನಿವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಮುತ್ತು ಅವರು ಅನಾರೋಗ್ಯ ಪೀಡಿತರಾಗಿದ್ದರು.</p>.<p>ಕರುಣಾನಿಧಿ ಹಾಗೂ ಪದ್ಮಾವತಿ (ಮೊದಲ ಪತ್ನಿ) ದಂಪತಿಯ ಪುತ್ರರಾದ ಮುತ್ತು ಅವರು ತಮಿಳಿನ ಆರು ಸಿನಿಮಾಗಳಲ್ಲಿ ನಟಿಸಿದ್ದರು. ಕರುಣಾನಿಧಿ ಬಳಿಕ ಮುತ್ತು ಅವರೇ ವಾರಸುದಾರರು ಎನ್ನಲಾಗಿತ್ತು. ಆದರೆ, ಈ ಎರಡೂ ಕ್ಷೇತ್ರದಲ್ಲಿ ಅವರು ಹೆಸರು ಮಾಡಲಿಲ್ಲ.</p>.<p>ಮುತ್ತು ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.</p>.<p>ಮುತ್ತು ಅವರು 1970ರಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಕುಡಿತದ ಚಟಕ್ಕೆ ಒಳಗಾಗಿದ್ದ ಮುತ್ತು ಮತ್ತು ತಂದೆ ಕರುಣಾನಿಧಿ ಅವರ ಸಂಬಂಧ ಅಷ್ಟೇನು ಚೆನ್ನಾಗಿ ಇರಲಿಲ್ಲ. ಇಬ್ಬರು ದೂರವೇ ಆಗಿದ್ದರು. ಆದರೆ, ಮುತ್ತು ಅವರ ಆರೋಗ್ಯ ಹದಗೆಟ್ಟ ಕಾರಣ 2009ರಲ್ಲಿ ತಂದೆ–ಮಗ ಒಂದಾಗಿದ್ದರು.</p>.<p>ಮುತ್ತು ಅವರು ನನಗೆ ತಂದೆಯಿದ್ದಂತೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ದಿವಂಗತ ಎಂ. ಕರುಣಾನಿಧಿ ಅವರ ಹಿರಿಯ ಮಗ ನಟ ಎಂ.ಕೆ. ಮುತ್ತು (77) ಅವರು ಶನಿವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಮುತ್ತು ಅವರು ಅನಾರೋಗ್ಯ ಪೀಡಿತರಾಗಿದ್ದರು.</p>.<p>ಕರುಣಾನಿಧಿ ಹಾಗೂ ಪದ್ಮಾವತಿ (ಮೊದಲ ಪತ್ನಿ) ದಂಪತಿಯ ಪುತ್ರರಾದ ಮುತ್ತು ಅವರು ತಮಿಳಿನ ಆರು ಸಿನಿಮಾಗಳಲ್ಲಿ ನಟಿಸಿದ್ದರು. ಕರುಣಾನಿಧಿ ಬಳಿಕ ಮುತ್ತು ಅವರೇ ವಾರಸುದಾರರು ಎನ್ನಲಾಗಿತ್ತು. ಆದರೆ, ಈ ಎರಡೂ ಕ್ಷೇತ್ರದಲ್ಲಿ ಅವರು ಹೆಸರು ಮಾಡಲಿಲ್ಲ.</p>.<p>ಮುತ್ತು ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.</p>.<p>ಮುತ್ತು ಅವರು 1970ರಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಕುಡಿತದ ಚಟಕ್ಕೆ ಒಳಗಾಗಿದ್ದ ಮುತ್ತು ಮತ್ತು ತಂದೆ ಕರುಣಾನಿಧಿ ಅವರ ಸಂಬಂಧ ಅಷ್ಟೇನು ಚೆನ್ನಾಗಿ ಇರಲಿಲ್ಲ. ಇಬ್ಬರು ದೂರವೇ ಆಗಿದ್ದರು. ಆದರೆ, ಮುತ್ತು ಅವರ ಆರೋಗ್ಯ ಹದಗೆಟ್ಟ ಕಾರಣ 2009ರಲ್ಲಿ ತಂದೆ–ಮಗ ಒಂದಾಗಿದ್ದರು.</p>.<p>ಮುತ್ತು ಅವರು ನನಗೆ ತಂದೆಯಿದ್ದಂತೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>