<p><strong>ಚುರಚಾಂದಪುರ/ಇಂಫಾಲ್:</strong> ಗಲಭೆ, ಹಿಂಸಾಚಾರವನ್ನು ದೂರವಿಡುವಂತೆ ಮಣಿಪುರದ ವಿವಿಧ ಸಂಘಟನೆಗಳಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲ ಸಂಘಟನೆಗಳು ಶಾಂತಿ ಮಾರ್ಗ ಕಂಡುಕೊಳ್ಳಬೇಕು ಎಂದು ಶನಿವಾರ ಹೇಳಿದರು. </p><h2><br>ಮೋದಿ ಭಾಷಣದ ಪ್ರಮುಖಾಂಶಗಳು </h2>.<ul><li><p>ಹಿಂಸಾಚಾರದಿಂದ ಸ್ಥಳಾಂತರಗೊಂಡ ಸಂತ್ರಸ್ತರ ಕುಟುಂಬಗಳಿಗೆ 7000 ಹೊಸ ಮನೆಗಳನ್ನು ನಿರ್ಮಿಸಲು ನೆರವು ನೀಡಲಾಗುವುದು </p></li><li><p> ಇತ್ತೀಚೆಗೆ ₹3000 ಕೋಟಿ ವಿಶೇಷ ಪ್ಯಾಕೇಜ್ ಅನುಮೋದಿಸಲಾಗಿದೆ. ಸಂತ್ರಸ್ತರ ನೆರವಿಗೆ ನಿರ್ದಿಷ್ಟವಾಗಿ ₹500 ಕೋಟಿ ನಿಗದಿಪಡಿಸಲಾಗಿದೆ </p></li><li><p>ಹಿಂದೆ ದೆಹಲಿಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಮಣಿಪುರಕ್ಕೆ ತಲುಪಲು ದಶಕಗಳೇ ಬೇಕಾಗುತ್ತಿತ್ತು. ಆದರೆ ಈಗ ತ್ವರಿತವಾಗಿ ತಲುಪುತ್ತಿವೆ. ಇದರ ಪರಿಣಾಮ ದೇಶದ ಇತರ ಭಾಗಗಳಂತೆ ಮಣಿಪುರ ಸಹ ಪ್ರಗತಿ ಪಥದತ್ತ ಸಾಗಿದೆ </p></li><li><p>ಹಿಂದೆ ಇಲ್ಲಿನ ಬೆಟ್ಟ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಉತ್ತಮ ಶಾಲೆ ಆಸ್ಪತ್ರೆಗಳು ಕನಸಾಗಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಚುರಚಾಂದಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ</p></li><li><p>ರಾಜ್ಯದಲ್ಲಿ ಎಂಟು ವರ್ಷಗಳ ಹಿಂದೆ ಕೊಳವೆ ನೀರಿನ ಸಂಪರ್ಕವನ್ನು ಕೇವಲ 30000 ಮನೆಗಳು ಪಡೆದಿದ್ದವು. ಈಗ 3.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.</p></li><li><p> ಮಣಿಪುರದ ಹೆಸರಿನಲ್ಲಿ ‘ಮಣಿ’ ಇದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಫಲವಾಗಿ ಇದು ಮುಂದಿನ ದಿನಗಳಲ್ಲಿ ಹೊಳೆಯುವ ‘ರತ್ನ’ವಾಗಲಿದೆ</p></li></ul>.Modi in Manipur| ಶಾಂತಿ,ಸಮೃದ್ಧಿಯ ಪಣ: ಹಿಂಸಾಚಾರದಿಂದ ದೂರವಿರಲು ಪ್ರಧಾನಿ ಮನವಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚುರಚಾಂದಪುರ/ಇಂಫಾಲ್:</strong> ಗಲಭೆ, ಹಿಂಸಾಚಾರವನ್ನು ದೂರವಿಡುವಂತೆ ಮಣಿಪುರದ ವಿವಿಧ ಸಂಘಟನೆಗಳಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲ ಸಂಘಟನೆಗಳು ಶಾಂತಿ ಮಾರ್ಗ ಕಂಡುಕೊಳ್ಳಬೇಕು ಎಂದು ಶನಿವಾರ ಹೇಳಿದರು. </p><h2><br>ಮೋದಿ ಭಾಷಣದ ಪ್ರಮುಖಾಂಶಗಳು </h2>.<ul><li><p>ಹಿಂಸಾಚಾರದಿಂದ ಸ್ಥಳಾಂತರಗೊಂಡ ಸಂತ್ರಸ್ತರ ಕುಟುಂಬಗಳಿಗೆ 7000 ಹೊಸ ಮನೆಗಳನ್ನು ನಿರ್ಮಿಸಲು ನೆರವು ನೀಡಲಾಗುವುದು </p></li><li><p> ಇತ್ತೀಚೆಗೆ ₹3000 ಕೋಟಿ ವಿಶೇಷ ಪ್ಯಾಕೇಜ್ ಅನುಮೋದಿಸಲಾಗಿದೆ. ಸಂತ್ರಸ್ತರ ನೆರವಿಗೆ ನಿರ್ದಿಷ್ಟವಾಗಿ ₹500 ಕೋಟಿ ನಿಗದಿಪಡಿಸಲಾಗಿದೆ </p></li><li><p>ಹಿಂದೆ ದೆಹಲಿಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಮಣಿಪುರಕ್ಕೆ ತಲುಪಲು ದಶಕಗಳೇ ಬೇಕಾಗುತ್ತಿತ್ತು. ಆದರೆ ಈಗ ತ್ವರಿತವಾಗಿ ತಲುಪುತ್ತಿವೆ. ಇದರ ಪರಿಣಾಮ ದೇಶದ ಇತರ ಭಾಗಗಳಂತೆ ಮಣಿಪುರ ಸಹ ಪ್ರಗತಿ ಪಥದತ್ತ ಸಾಗಿದೆ </p></li><li><p>ಹಿಂದೆ ಇಲ್ಲಿನ ಬೆಟ್ಟ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಉತ್ತಮ ಶಾಲೆ ಆಸ್ಪತ್ರೆಗಳು ಕನಸಾಗಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಚುರಚಾಂದಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ</p></li><li><p>ರಾಜ್ಯದಲ್ಲಿ ಎಂಟು ವರ್ಷಗಳ ಹಿಂದೆ ಕೊಳವೆ ನೀರಿನ ಸಂಪರ್ಕವನ್ನು ಕೇವಲ 30000 ಮನೆಗಳು ಪಡೆದಿದ್ದವು. ಈಗ 3.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.</p></li><li><p> ಮಣಿಪುರದ ಹೆಸರಿನಲ್ಲಿ ‘ಮಣಿ’ ಇದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಫಲವಾಗಿ ಇದು ಮುಂದಿನ ದಿನಗಳಲ್ಲಿ ಹೊಳೆಯುವ ‘ರತ್ನ’ವಾಗಲಿದೆ</p></li></ul>.Modi in Manipur| ಶಾಂತಿ,ಸಮೃದ್ಧಿಯ ಪಣ: ಹಿಂಸಾಚಾರದಿಂದ ದೂರವಿರಲು ಪ್ರಧಾನಿ ಮನವಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>