ನಕ್ಷೆ ದತ್ತಾಂಶಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಗೊಳಿಸಿದ ಕ್ರಮವನ್ನು ಅವರು ಉಲ್ಲೇಖಿಸಿದರು. ಹತ್ತು ವರ್ಷಗಳ ಹಿಂದೆಯೇ ಈ ಸುಧಾರಣೆಗಳನ್ನು ಜಾರಿಗೆ ತಂದಿದ್ದರೆ ಗೂಗಲ್ನಂತಹ ಸಂಸ್ಥೆಗಳು ಭಾರತದಲ್ಲಿ ಸ್ಥಾಪನೆಯಾಗುತ್ತಿದ್ದವು. ‘ಪ್ರತಿಭೆ ನಮ್ಮ ದೇಶದ ಜನರದ್ದು, ಆದರೆ ಉತ್ಪನ್ನವು ನಮ್ಮದು ಅಲ್ಲ’ ಎಂದು ಅವರು ಹೇಳಿದರು. ನಕ್ಷೆ ಕ್ಷೇತ್ರದ ಸುಧಾರಣೆಯು ನವೋದ್ಯಮ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ನೆರವು ನೀಡಲಿದೆ ಎಂದರು.