ಈ ಹಿಂದೆ 'ರಾಜ್ಯಸಭೆಗೆ ಹೋಗಬೇಕು ಎಂದು ನನಗೆ ಅನ್ನಿಸಿದಾಗ ನಾನು ಹೋಗುತ್ತೇನೆ' ಎಂದು ರಂಜನ್ ಗೊಗೊಯಿ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಶಿವಸೇನೆ, ಸಮಾಜವಾದಿ ಪಕ್ಷ, ಸಿಪಿಐ(ಎಂ) ಮತ್ತು ಮುಸ್ಲಿಂ ಲೀಗ್ನ ಸಂಸದರೂ ಈಗ ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ. ಶಿವಸೇನೆಯ ಸಂಜಯ್ ರಾವುತ್, ಸಿಪಿಐ(ಎಂ)ನ ಜಾನ್ ಬ್ರಿಟಾಸ್, ಡಾ.ವಿ. ಶಿವದಾಸನ್ ಮತ್ತು ಮುಸ್ಲಿಂ ಲೀಗ್ನ ಅಬ್ದುಲ್ ವಹಾಬ್ ನೋಟಿಸ್ ಸಲ್ಲಿಸಿದ್ದಾರೆ.
ಮಾರ್ಚ್ 2020ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನ್ಯಾಯಮೂರ್ತಿ ಗೊಗೊಯಿ, ಸೋಮವಾರದಂದು ಚಳಿಗಾಲದ ಅಧಿವೇಶನದಲ್ಲಿ ಮೊದಲ ಬಾರಿಗೆ ಪಾಲ್ಗೊಂಡರು. ಈ ಮೂಲಕ ಏಳು ಬಾರಿ ಮಾತ್ರ ಸದನದಲ್ಲಿ ಉಪಸ್ಥಿತರಿದ್ದರು.
ವಿರೋಧ ಪಕ್ಷಗಳ ಹಕ್ಕುಚ್ಯುತಿ ನೋಟಿಸ್ಗೆ ಪ್ರತಿಕ್ರಿಯಿಸಿರುವಗೊಗೊಯಿ, 'ಕಾನೂನು ತನ್ನದೇ ಆದ ಹಾದಿಯನ್ನು ತುಳಿಯಲಿದೆ. ನಾನು ಸೋಮವಾರ ಹಾಗೂ ಮಂಗಳವಾರ ಹಾಜರಾಗಿದ್ದೆ.ಇಂದು ಹಾಜರಾಗಿಲ್ಲ. ನಾಳೆ ಹಾಜರಾಗುವೆ. ' ಎಂದು ಹೇಳಿದ್ದಾರೆ.
Not today. I was there on Monday and on Tuesday. Should be there tomorrow: Former CJI and Rajya Sabha MP Ranjan Gogoi to ANI on him attending the Parliament