ಡಿಸೆಂಬರ್ 28ರಂದು ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿ ಅನುಗ್ರಹ್. ಪಿಅವರು ರೈತರ ಮನವಿ ಆಲಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು.ಇದಾದನಂತರ ಆ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ ಸ್ಥಾಪಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಈ ಬಗ್ಗೆ ಎನ್ಡಿಟಿವಿ ಜತೆ ಮಾತನಾಡಿದ ರೈತ, ಗದ್ದೆಗೆ ಪಂಪ್ ಸೆಟ್ ಅಳವಡಿಸುವುದಕ್ಕಾಗಿ ತಾವು ಟ್ರಾನ್ಸ್ಫಾರ್ಮರ್ ಬೇಕು ಎಂದು ಕೇಳಿದ್ದೆ. ಇದಕ್ಕಾಗಿ ಸ್ಥಳೀಯ ವಿದ್ಯುತ್ ಇಲಾಖೆಯಲ್ಲಿ ₹40,000 ಮುಂಗಡ ಹಣವನ್ನೂ ನೀಡಿದ್ದೆ., ಟ್ರಾನ್ಸ್ಫಾರ್ಮರ್ ಸ್ಥಾಪಿಸದೇ ಇದ್ದರೆ ಬೆಳೆ ನಾಶವಾಗುತ್ತಿತ್ತು ಎಂದಿದ್ದಾರೆ.