<p><strong>ಮುಂಬೈ:</strong> ನವೀ ಮುಂಬೈಯ ವಾಶಿ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ವ್ಯಕ್ತಿಯೊಬ್ಪರು ವಿದ್ಯುತ್ಚಾಲಿತರೈಲಿನ ಮೇಲಿರುವ ಕೇಬಲ್ ಮೇಲೆ ಬ್ಯಾಗ್ ಬಿಸಾಡಿದ್ದರಿಂದ ರೈಲಿಗೆ ಬೆಂಕಿ ಹತ್ತಿಕೊಂಡಿದೆ.</p>.<p>ಪನ್ವೇಲ್ ದಾರಿಯಾಗಿ ಸಾಗುವ ರೈಲು ವಾಶಿ ನಿಲ್ದಾಣಕ್ಕೆ ತಲುಪಿದಾಗ ಅನಾಮಿಕ ವ್ಯಕ್ತಿಯೊಬ್ಬರು ವಿದ್ಯುತ್ ರೈಲಿನ ಮೇಲಿರುವ ಕೇಬಲ್ಗೆ ಬ್ಯಾಗ್ ಬಿಸಾಡಿದ್ದಾರೆ. ವಿದ್ಯುತ್ ತಂತಿಗೆ ಬ್ಯಾಗ್ ತಗುಲಿ ಬೆಂಕಿ ಹತ್ತಿಕೊಂಡಿದ್ದು ತಕ್ಷಣವೇ ಬೆಂಕಿ ನಂದಿಸಲಾಗಿದೆ. ಈ ಘಟನೆಯಲ್ಲಿ ಪ್ರಾಣಾಪಾಯವೇನೂ ಸಂಭವಿಸಿಲ್ಲ. ಸುರಕ್ಷತೆಯ ನಿಟ್ಟಿನಲ್ಲಿ ಬೋಗಿಗಳನ್ನು ತೆಗೆಯಲಾಗಿದೆ ಎಂದು ಸೆಂಟ್ರಲ್ ರೈಲ್ವೆಯ ಹಿರಿಯ ಪಿಆರ್ಒ ಎಕೆ ಜೈನ್ ಹೇಳಿದ್ದಾರೆ.</p>.<p>ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಬೆಳಗ್ಗೆ 9.28ಕ್ಕೆ ಹೊರಡಬೇಕಿದ್ದ ರೈಲು 12 ನಿಮಿಷ ವಿಳಂಬವಾಗಿದೆ.</p>.<p>ರೈಲು ವಿಳಂಬವಾದ ಕಾರಣ ಹೆಚ್ಚಿನ ಪ್ರಯಾಣಿಕರು ವಾಶಿ ನಿಲ್ದಾಣದಿಂದ ಬಸ್ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಇನ್ನು ಕೆಲವರು ರೈಲು ಸಂಚಾರ ಪುನರಾರಂಭಗೊಳ್ಳುವ ವರಗೆ ಕಾದು ನಿಂತರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ನವೀ ಮುಂಬೈಯ ವಾಶಿ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ವ್ಯಕ್ತಿಯೊಬ್ಪರು ವಿದ್ಯುತ್ಚಾಲಿತರೈಲಿನ ಮೇಲಿರುವ ಕೇಬಲ್ ಮೇಲೆ ಬ್ಯಾಗ್ ಬಿಸಾಡಿದ್ದರಿಂದ ರೈಲಿಗೆ ಬೆಂಕಿ ಹತ್ತಿಕೊಂಡಿದೆ.</p>.<p>ಪನ್ವೇಲ್ ದಾರಿಯಾಗಿ ಸಾಗುವ ರೈಲು ವಾಶಿ ನಿಲ್ದಾಣಕ್ಕೆ ತಲುಪಿದಾಗ ಅನಾಮಿಕ ವ್ಯಕ್ತಿಯೊಬ್ಬರು ವಿದ್ಯುತ್ ರೈಲಿನ ಮೇಲಿರುವ ಕೇಬಲ್ಗೆ ಬ್ಯಾಗ್ ಬಿಸಾಡಿದ್ದಾರೆ. ವಿದ್ಯುತ್ ತಂತಿಗೆ ಬ್ಯಾಗ್ ತಗುಲಿ ಬೆಂಕಿ ಹತ್ತಿಕೊಂಡಿದ್ದು ತಕ್ಷಣವೇ ಬೆಂಕಿ ನಂದಿಸಲಾಗಿದೆ. ಈ ಘಟನೆಯಲ್ಲಿ ಪ್ರಾಣಾಪಾಯವೇನೂ ಸಂಭವಿಸಿಲ್ಲ. ಸುರಕ್ಷತೆಯ ನಿಟ್ಟಿನಲ್ಲಿ ಬೋಗಿಗಳನ್ನು ತೆಗೆಯಲಾಗಿದೆ ಎಂದು ಸೆಂಟ್ರಲ್ ರೈಲ್ವೆಯ ಹಿರಿಯ ಪಿಆರ್ಒ ಎಕೆ ಜೈನ್ ಹೇಳಿದ್ದಾರೆ.</p>.<p>ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಬೆಳಗ್ಗೆ 9.28ಕ್ಕೆ ಹೊರಡಬೇಕಿದ್ದ ರೈಲು 12 ನಿಮಿಷ ವಿಳಂಬವಾಗಿದೆ.</p>.<p>ರೈಲು ವಿಳಂಬವಾದ ಕಾರಣ ಹೆಚ್ಚಿನ ಪ್ರಯಾಣಿಕರು ವಾಶಿ ನಿಲ್ದಾಣದಿಂದ ಬಸ್ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಇನ್ನು ಕೆಲವರು ರೈಲು ಸಂಚಾರ ಪುನರಾರಂಭಗೊಳ್ಳುವ ವರಗೆ ಕಾದು ನಿಂತರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>