<p><strong>ನವದೆಹಲಿ:</strong> ಮಾವಿನಹಣ್ಣಿಗಾಗಿ 40 ವರ್ಷದ ಹಿಂದೆ ನಡೆದಿದ್ದ ಜಗಳದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಸಂಬಂಧಿಸಿ ಮೂವರ ವಿರುದ್ಧ ದಾಖಲಿಸಲಾಗಿದ್ದ ಕೊಲೆ ಪ್ರಕರಣವನ್ನು ‘ಕೊಲೆ ಉದ್ದೇಶವಿಲ್ಲದ ಹಲ್ಲೆ ಪ್ರಕರಣ’ವಾಗಿ ಪರಿವರ್ತಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.</p>.<p>ಅಲ್ಲದೆ, ಈ ಪ್ರಕರಣದಲ್ಲಿ ಮನ್ ಬಹದ್ದೂರ್ ಸಿಂಗ್, ಭರತ್ ಸಿಂಗ್, ಭಾನುಪ್ರತಾಪ್ ಸಿಂಗ್ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಸಜೆ ಬದಲಿಗೆ, ಏಳು ವರ್ಷಗಳ ಸೆರೆವಾಸ ಮತ್ತು ತಲಾ ₹25 ಸಾವಿರ ದಂಡ ವಿಧಿಸಿ ಸುಪ್ರೀಂ ಕೋರ್ಟ್ ಪೀಠವು ಮಂಗಳವಾರ ಆದೇಶಿಸಿತು.</p>.<p>ದಂಡದ ಒಟ್ಟು ಮೊತ್ತವನ್ನು ಮೃತನ ಕುಟುಂಬದವರಿಗೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹಸಾನುದ್ದೀನ್ ಅಮಾನ್ಉಲ್ಲಾ ಅವರಿದ್ದ ಪೀಠ ಆದೇಶಿಸಿತು.</p>.<p>ಏಪ್ರಿಲ್ 19, 1984ರಂದು ಎರಡು ಕುಟುಂಬಗಳಿಗೆ ಸೇರಿದ್ದ ನಾಲ್ವರು ಬಾಲಕರ ನಡುವೆ ಜಗಳವಾಗಿತ್ತು. ಜಗಳದಲ್ಲಿ ಭಾಗಿಯಾಗಿದ್ದ ಬಾಲಕ ಡಬ್ಬುವಿನ ತಂದೆ ವಿಶ್ವನಾಥ್ ಸಿಂಗ್ ಮೇಲೆ ಹಲ್ಲೆ ನಡೆದಿತ್ತು. </p>.<p><br>ಐವರು ಆರೋಪಿಗಳು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿತ್ತು. ಅಲಹಾಬಾದ್ ಹೈಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆಯಲ್ಲಿ ಇರುವಾಗಲೇ ಇಬ್ಬರು ಆರೋಪಿಗಳು ಮೃತಪಟ್ಟಿದ್ದರು.</p>.<p><br>‘ಸಾಕ್ಷಿಗಳ ಹೇಳಿಕೆ ಗಮನಿಸಿದರೆ, ಈ ಕೊಲೆಯು ಪೂರ್ವನಿಯೋಜಿತವಲ್ಲ. ಮಾವಿನಹಣ್ಣಿಗಾಗಿ ಮಕ್ಕಳ ನಡುವೆ ಜಗಳ ಆರಂಭವಾಗಿದೆ. ನಂತರ ಜಗಳದಲ್ಲಿ ಹಿರಿಯರೂ ಸೇರಿದ್ದಾರೆ. ಅಂತಿಮವಾಗಿ ವಯಸ್ಕರೊಬ್ಬರ ಸಾವಿನಲ್ಲಿ ಜಗಳ ಅಂತ್ಯವಾಗಿದೆ’ ಎಂದು ಹೇಳಿತು.</p>.<p><br>‘ಗಾಯದ ಸ್ವರೂಪ, ಅಪರಾಧಲ್ಲಿ ಬಳಕೆಯಾಗಿದ್ದ ಆಯುಧದ (ಲಾಠಿ) ಹಿನ್ನೆಲೆಯಲ್ಲಿ ಇದು, ಕೊಲೆ ಉದ್ದೇಶವಿಲ್ಲದಿದ್ದ ಹಲ್ಲೆ ಪ್ರಕರಣ. ಕೊಲೆ ಪ್ರಕರಣವಲ್ಲ’ ಎಂದು ಹೇಳಿತು. ಕೆಳಹಂತದ ಕೋರ್ಟ್ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿ, ದಂಡ ವಿಧಿಸಿ ಆದೇಶಿಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮಾವಿನಹಣ್ಣಿಗಾಗಿ 40 ವರ್ಷದ ಹಿಂದೆ ನಡೆದಿದ್ದ ಜಗಳದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಸಂಬಂಧಿಸಿ ಮೂವರ ವಿರುದ್ಧ ದಾಖಲಿಸಲಾಗಿದ್ದ ಕೊಲೆ ಪ್ರಕರಣವನ್ನು ‘ಕೊಲೆ ಉದ್ದೇಶವಿಲ್ಲದ ಹಲ್ಲೆ ಪ್ರಕರಣ’ವಾಗಿ ಪರಿವರ್ತಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.</p>.<p>ಅಲ್ಲದೆ, ಈ ಪ್ರಕರಣದಲ್ಲಿ ಮನ್ ಬಹದ್ದೂರ್ ಸಿಂಗ್, ಭರತ್ ಸಿಂಗ್, ಭಾನುಪ್ರತಾಪ್ ಸಿಂಗ್ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಸಜೆ ಬದಲಿಗೆ, ಏಳು ವರ್ಷಗಳ ಸೆರೆವಾಸ ಮತ್ತು ತಲಾ ₹25 ಸಾವಿರ ದಂಡ ವಿಧಿಸಿ ಸುಪ್ರೀಂ ಕೋರ್ಟ್ ಪೀಠವು ಮಂಗಳವಾರ ಆದೇಶಿಸಿತು.</p>.<p>ದಂಡದ ಒಟ್ಟು ಮೊತ್ತವನ್ನು ಮೃತನ ಕುಟುಂಬದವರಿಗೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹಸಾನುದ್ದೀನ್ ಅಮಾನ್ಉಲ್ಲಾ ಅವರಿದ್ದ ಪೀಠ ಆದೇಶಿಸಿತು.</p>.<p>ಏಪ್ರಿಲ್ 19, 1984ರಂದು ಎರಡು ಕುಟುಂಬಗಳಿಗೆ ಸೇರಿದ್ದ ನಾಲ್ವರು ಬಾಲಕರ ನಡುವೆ ಜಗಳವಾಗಿತ್ತು. ಜಗಳದಲ್ಲಿ ಭಾಗಿಯಾಗಿದ್ದ ಬಾಲಕ ಡಬ್ಬುವಿನ ತಂದೆ ವಿಶ್ವನಾಥ್ ಸಿಂಗ್ ಮೇಲೆ ಹಲ್ಲೆ ನಡೆದಿತ್ತು. </p>.<p><br>ಐವರು ಆರೋಪಿಗಳು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿತ್ತು. ಅಲಹಾಬಾದ್ ಹೈಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆಯಲ್ಲಿ ಇರುವಾಗಲೇ ಇಬ್ಬರು ಆರೋಪಿಗಳು ಮೃತಪಟ್ಟಿದ್ದರು.</p>.<p><br>‘ಸಾಕ್ಷಿಗಳ ಹೇಳಿಕೆ ಗಮನಿಸಿದರೆ, ಈ ಕೊಲೆಯು ಪೂರ್ವನಿಯೋಜಿತವಲ್ಲ. ಮಾವಿನಹಣ್ಣಿಗಾಗಿ ಮಕ್ಕಳ ನಡುವೆ ಜಗಳ ಆರಂಭವಾಗಿದೆ. ನಂತರ ಜಗಳದಲ್ಲಿ ಹಿರಿಯರೂ ಸೇರಿದ್ದಾರೆ. ಅಂತಿಮವಾಗಿ ವಯಸ್ಕರೊಬ್ಬರ ಸಾವಿನಲ್ಲಿ ಜಗಳ ಅಂತ್ಯವಾಗಿದೆ’ ಎಂದು ಹೇಳಿತು.</p>.<p><br>‘ಗಾಯದ ಸ್ವರೂಪ, ಅಪರಾಧಲ್ಲಿ ಬಳಕೆಯಾಗಿದ್ದ ಆಯುಧದ (ಲಾಠಿ) ಹಿನ್ನೆಲೆಯಲ್ಲಿ ಇದು, ಕೊಲೆ ಉದ್ದೇಶವಿಲ್ಲದಿದ್ದ ಹಲ್ಲೆ ಪ್ರಕರಣ. ಕೊಲೆ ಪ್ರಕರಣವಲ್ಲ’ ಎಂದು ಹೇಳಿತು. ಕೆಳಹಂತದ ಕೋರ್ಟ್ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿ, ದಂಡ ವಿಧಿಸಿ ಆದೇಶಿಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>