<p><strong>ನವದೆಹಲಿ</strong>: ‘ದೆಹಲಿ ಅಬಕಾರಿ ನೀತಿ ಹಗರಣದಲ್ಲಿನ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ಪತಿ ಮಾರ್ಚ್ 28ರಂದು ನ್ಯಾಯಾಲಯದಲ್ಲಿ ಮಹತ್ವದ ವಿಷಯಗಳನ್ನು ಬಹಿರಂಗಪಡಿಸಲಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.</p>.<p>ಡಿಜಿಟಲ್ ವಿಧಾನದ ಮೂಲಕ ಈ ಮಾಹಿತಿ ನೀಡಿದ ಅವರು,‘ಹಗರಣಕ್ಕೆ ಸಂಬಂಧಿಸಿದ ನೈಜ ವಿವರಗಳನ್ನು ಬಹಿರಂಗಪಡಿಸುವ ಜೊತೆಗೆ, ಸಾಕ್ಷ್ಯಗಳನ್ನು ಸಹ ಹಾಜರುಪಡಿಸಲಿರುವುದಾಗಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ’ ಎಂದರು.</p>.<p>‘ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಕಳೆದ ಎರಡು ವರ್ಷಗಳ ಅವಧಿಯಲ್ಲಿ 250ಕ್ಕೂ ಹೆಚ್ಚು ಬಾರಿ ದಾಳಿಗಳನ್ನು ನಡೆಸಿದೆ. ಈ ಯಾವುದೇ ದಾಳಿ ಸಂದರ್ಭದಲ್ಲಿಯೂ ಒಂದು ಪೈಸೆಯೂ ಪತ್ತೆಯಾಗಿಲ್ಲ ಎಂದು ಇ.ಡಿ ವಶದಲ್ಲಿರುವ ವೇಳೆ ಭೇಟಿ ಮಾಡಿದ ನನಗೆ ಕೇಜ್ರಿವಾಲ್ ತಿಳಿಸಿದ್ದರು’ ಎಂದು ಹೇಳಿದರು.</p>.<p>‘ಇ.ಡಿ ಅಧಿಕಾರಿಗಳು ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಹಾಗೂ ಸತ್ಯೇಂದ್ರ ಜೈನ್ ಅವರಿಗೆ ಸೇರಿದ ಸ್ಥಳಗಳ ಮೇಲೆಯೂ ದಾಳಿ ನಡೆಸಿದ್ದರು. ಅಲ್ಲಿಯೂ ಹಣ ಪತ್ತೆಯಾಗಿಲ್ಲ. ಮುಖ್ಯಮಂತ್ರಿಗಳ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಇ.ಡಿ ಅಧಿಕಾರಿಗಳಿಗೆ ಕೇವಲ ₹73 ಸಾವಿರ ಸಿಕ್ಕಿತ್ತು’ ಎಂದ ಅವರು, ‘ಅಬಕಾರಿ ಹಗರಣದ ಹಣ ಎಲ್ಲಿದೆ’ ಎಂದು ಪ್ರಶ್ನಿಸಿದರು.</p>.<p>‘ದೆಹಲಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ, ಇ.ಡಿ ವಶದಲ್ಲಿರುವ ನನ್ನ ಪತಿ ಜಲ ಸಚಿವೆ ಆತಿಶಿ ಅವರಿಗೆ ನಿರ್ದೇಶನಗಳನ್ನು ನೀಡಿದ್ದರು. ನನ್ನ ಪತಿಯ ಈ ನಡೆ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿತ್ತು’ ಎಂದು ಹೇಳಿದ ಸುನೀತಾ, ’ಅವರು (ಕೇಂದ್ರ) ದೆಹಲಿಯನ್ನು ಹಾಳು ಮಾಡಲು ಹೊರಟಿದ್ದಾರೆಯೇ’ ಎಂದು ಪ್ರಶ್ನಿಸಿದರು. </p>.<p>‘ಕೇಜ್ರಿವಾಲ್ ಧೈರ್ಯವಂತ, ಪ್ರಾಮಾಣಿಕ ಹಾಗೂ ದೇಶಪ್ರೇಮಿ. ಮಧುಮೇಹ ಇದ್ದರೂ ದೃಢಸಂಕಲ್ಪ ಹೊಂದಿದವರಾಗಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ದೆಹಲಿ ಜನರನ್ನು ಕೋರುವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ದೆಹಲಿ ಅಬಕಾರಿ ನೀತಿ ಹಗರಣದಲ್ಲಿನ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ಪತಿ ಮಾರ್ಚ್ 28ರಂದು ನ್ಯಾಯಾಲಯದಲ್ಲಿ ಮಹತ್ವದ ವಿಷಯಗಳನ್ನು ಬಹಿರಂಗಪಡಿಸಲಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.</p>.<p>ಡಿಜಿಟಲ್ ವಿಧಾನದ ಮೂಲಕ ಈ ಮಾಹಿತಿ ನೀಡಿದ ಅವರು,‘ಹಗರಣಕ್ಕೆ ಸಂಬಂಧಿಸಿದ ನೈಜ ವಿವರಗಳನ್ನು ಬಹಿರಂಗಪಡಿಸುವ ಜೊತೆಗೆ, ಸಾಕ್ಷ್ಯಗಳನ್ನು ಸಹ ಹಾಜರುಪಡಿಸಲಿರುವುದಾಗಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ’ ಎಂದರು.</p>.<p>‘ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಕಳೆದ ಎರಡು ವರ್ಷಗಳ ಅವಧಿಯಲ್ಲಿ 250ಕ್ಕೂ ಹೆಚ್ಚು ಬಾರಿ ದಾಳಿಗಳನ್ನು ನಡೆಸಿದೆ. ಈ ಯಾವುದೇ ದಾಳಿ ಸಂದರ್ಭದಲ್ಲಿಯೂ ಒಂದು ಪೈಸೆಯೂ ಪತ್ತೆಯಾಗಿಲ್ಲ ಎಂದು ಇ.ಡಿ ವಶದಲ್ಲಿರುವ ವೇಳೆ ಭೇಟಿ ಮಾಡಿದ ನನಗೆ ಕೇಜ್ರಿವಾಲ್ ತಿಳಿಸಿದ್ದರು’ ಎಂದು ಹೇಳಿದರು.</p>.<p>‘ಇ.ಡಿ ಅಧಿಕಾರಿಗಳು ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಹಾಗೂ ಸತ್ಯೇಂದ್ರ ಜೈನ್ ಅವರಿಗೆ ಸೇರಿದ ಸ್ಥಳಗಳ ಮೇಲೆಯೂ ದಾಳಿ ನಡೆಸಿದ್ದರು. ಅಲ್ಲಿಯೂ ಹಣ ಪತ್ತೆಯಾಗಿಲ್ಲ. ಮುಖ್ಯಮಂತ್ರಿಗಳ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಇ.ಡಿ ಅಧಿಕಾರಿಗಳಿಗೆ ಕೇವಲ ₹73 ಸಾವಿರ ಸಿಕ್ಕಿತ್ತು’ ಎಂದ ಅವರು, ‘ಅಬಕಾರಿ ಹಗರಣದ ಹಣ ಎಲ್ಲಿದೆ’ ಎಂದು ಪ್ರಶ್ನಿಸಿದರು.</p>.<p>‘ದೆಹಲಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ, ಇ.ಡಿ ವಶದಲ್ಲಿರುವ ನನ್ನ ಪತಿ ಜಲ ಸಚಿವೆ ಆತಿಶಿ ಅವರಿಗೆ ನಿರ್ದೇಶನಗಳನ್ನು ನೀಡಿದ್ದರು. ನನ್ನ ಪತಿಯ ಈ ನಡೆ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿತ್ತು’ ಎಂದು ಹೇಳಿದ ಸುನೀತಾ, ’ಅವರು (ಕೇಂದ್ರ) ದೆಹಲಿಯನ್ನು ಹಾಳು ಮಾಡಲು ಹೊರಟಿದ್ದಾರೆಯೇ’ ಎಂದು ಪ್ರಶ್ನಿಸಿದರು. </p>.<p>‘ಕೇಜ್ರಿವಾಲ್ ಧೈರ್ಯವಂತ, ಪ್ರಾಮಾಣಿಕ ಹಾಗೂ ದೇಶಪ್ರೇಮಿ. ಮಧುಮೇಹ ಇದ್ದರೂ ದೃಢಸಂಕಲ್ಪ ಹೊಂದಿದವರಾಗಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ದೆಹಲಿ ಜನರನ್ನು ಕೋರುವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>