<p><strong>ಮುಂಬೈ</strong>: ನಾಂದೇಡ್ನಲ್ಲಿ 2006ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ, ಬದುಕಿ ಉಳಿದಿದ್ದ ಎಲ್ಲ 9 ಆರೋಪಿಗಳನ್ನು ಸ್ಥಳೀಯ ಸೆಷನ್ಸ್ ಕೋರ್ಟ್ ಆರೋಪಮುಕ್ತಗೊಳಿಸಿದೆ.</p><p>ಆದೇಶದ ಪೂರ್ಣ ವಿವರ ಲಭ್ಯವಾಗಿಲ್ಲ. ‘ಸರ್ಕಾರ ಪರ ವಕೀಲರು, ಈ ಘಟನೆಯು ಬಾಂಬ್ ಸ್ಫೋಟ ಕೃತ್ಯ ಎಂದು ನಿರೂಪಿಸಲು ವಿಫಲವಾದರು’ ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ.</p><p>ಸ್ಫೋಟ ಕೃತದಲ್ಲಿ ಒಟ್ಟು 12 ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ಇಬ್ಬರು ಸ್ಫೋಟ ಸ್ಥಳದಲ್ಲಿಯೇ ಅಸುನೀಗಿದ್ದರು. ವಿಚಾರಣೆ ಹಂತದಲ್ಲಿ ಒಬ್ಬರು ಮೃತಪಟ್ಟಿದ್ದರು.</p><p>ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಿ.ವಿ.ಮರಾಠೆ ಅವರು ಶನಿವಾರ ಎಲ್ಲ 9 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದರು.</p><p>ನಾಂದೇಡ್ ನಗರದ ನಿವಾಸಿ, ಆರ್ಎಸ್ಎಸ್ ಕಾರ್ಯಕರ್ತ ಎನ್ನಲಾದ ಲಕ್ಷ್ಮಣ ರಾಜ್ಕೊಂಡ್ವಾರ್ ಅವರ ಮನೆಯಲ್ಲಿ 2006ರ ಏಪ್ರಿಲ್ 4ರ ಮಧ್ಯರಾತ್ರಿ ಸ್ಫೋಟ ಸಂಭವಿಸಿತ್ತು. </p><p>ರಾಜ್ಕೊಂಡ್ವಾರ್ ಅವರ ಪುತ್ರ ನರೇಶ್ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಹಿಮಾಂಶು ಪಾನ್ಸೆಸ್ಥಳದಲ್ಲಿಯೇ ಮೃತಪಟ್ಟಿದ್ದರು.</p><p>ಆರಂಭದಲ್ಲಿ ಮುಂಬೈನ ಭಯೋತ್ಪಾದನೆ ನಿಗ್ರಹ ಪಡೆ (ಎಟಿಎಸ್) ಕೃತ್ಯದ ತನಿಖೆ ನಡೆಸಿದ್ದು, ಬಳಿಕ ಸಿಬಿಐಗೆ ತನಿಖೆಯ ಹೊಣೆಯನ್ನು ಹಸ್ತಾಂತರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ನಾಂದೇಡ್ನಲ್ಲಿ 2006ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ, ಬದುಕಿ ಉಳಿದಿದ್ದ ಎಲ್ಲ 9 ಆರೋಪಿಗಳನ್ನು ಸ್ಥಳೀಯ ಸೆಷನ್ಸ್ ಕೋರ್ಟ್ ಆರೋಪಮುಕ್ತಗೊಳಿಸಿದೆ.</p><p>ಆದೇಶದ ಪೂರ್ಣ ವಿವರ ಲಭ್ಯವಾಗಿಲ್ಲ. ‘ಸರ್ಕಾರ ಪರ ವಕೀಲರು, ಈ ಘಟನೆಯು ಬಾಂಬ್ ಸ್ಫೋಟ ಕೃತ್ಯ ಎಂದು ನಿರೂಪಿಸಲು ವಿಫಲವಾದರು’ ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ.</p><p>ಸ್ಫೋಟ ಕೃತದಲ್ಲಿ ಒಟ್ಟು 12 ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ಇಬ್ಬರು ಸ್ಫೋಟ ಸ್ಥಳದಲ್ಲಿಯೇ ಅಸುನೀಗಿದ್ದರು. ವಿಚಾರಣೆ ಹಂತದಲ್ಲಿ ಒಬ್ಬರು ಮೃತಪಟ್ಟಿದ್ದರು.</p><p>ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಿ.ವಿ.ಮರಾಠೆ ಅವರು ಶನಿವಾರ ಎಲ್ಲ 9 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದರು.</p><p>ನಾಂದೇಡ್ ನಗರದ ನಿವಾಸಿ, ಆರ್ಎಸ್ಎಸ್ ಕಾರ್ಯಕರ್ತ ಎನ್ನಲಾದ ಲಕ್ಷ್ಮಣ ರಾಜ್ಕೊಂಡ್ವಾರ್ ಅವರ ಮನೆಯಲ್ಲಿ 2006ರ ಏಪ್ರಿಲ್ 4ರ ಮಧ್ಯರಾತ್ರಿ ಸ್ಫೋಟ ಸಂಭವಿಸಿತ್ತು. </p><p>ರಾಜ್ಕೊಂಡ್ವಾರ್ ಅವರ ಪುತ್ರ ನರೇಶ್ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಹಿಮಾಂಶು ಪಾನ್ಸೆಸ್ಥಳದಲ್ಲಿಯೇ ಮೃತಪಟ್ಟಿದ್ದರು.</p><p>ಆರಂಭದಲ್ಲಿ ಮುಂಬೈನ ಭಯೋತ್ಪಾದನೆ ನಿಗ್ರಹ ಪಡೆ (ಎಟಿಎಸ್) ಕೃತ್ಯದ ತನಿಖೆ ನಡೆಸಿದ್ದು, ಬಳಿಕ ಸಿಬಿಐಗೆ ತನಿಖೆಯ ಹೊಣೆಯನ್ನು ಹಸ್ತಾಂತರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>