ಚುನಾವಣಾ ಬಾಂಡ್ ಯೋಜನೆ ಜಾರಿಯಾದಾಗಲೇ ಆರ್ಬಿಐ, ಈ ಯೋಜನೆಯು ಮುಂದೆ ಅಕ್ರಮ ರೀತಿಯಲ್ಲಿ ಹಣ ವರ್ಗಾವಣೆಗೆ ದಾರಿ ಮಾಡಿಕೊಡಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು. ಆದರೆ, ಚಂದಾ ವಸೂಲಿ ಮಾಡುವ ಬಿಜೆಪಿಯ ಇರಾದೆಯು ಈ ಯೋಜನೆಯನ್ನು ಜಾರಿಗೊಳಿಸಲು ಪ್ರೇರಕವಾಗಿತ್ತು. ಅಂದು ಆರ್ಬಿಐ ಸೂಚನೆಯನ್ನು ಕಡೆಗಣಿಸಿದ್ದಕ್ಕೆ, ಇಂದು ದೇಶವು ಬೆಲೆ ತೆರುತ್ತಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.