<p><strong>ಭುವನೇಶ್ವರ:</strong> ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶನಿವಾರ ಸತತ ಒಂಬತ್ತನೇ ಬಾರಿಗೆ ಬಿಜು ಜನತಾದಳದ (ಬಿಜೆಡಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.</p>.ಒಡಿಶಾ: ಬಿಜೆಡಿ ಅಧ್ಯಕ್ಷ ಸ್ಥಾನಕ್ಕೆ ಪಟ್ನಾಯಕ್ ನಾಮಪತ್ರ. <p>ಪಕ್ಷದ ಸ್ಥಾಪಕಾಧ್ಯಕ್ಷರಾದ ಪಟ್ನಾಯಕ್ ಅವರು ಮಾತ್ರ ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.</p><p>ಬಿಜೆಡಿಯ ಸಾಂಸ್ಥಿಕ ಚುನಾವಣಾ ರಿಟರ್ನಿಂಗ್ ಅಧಿಕಾರಿ ಪಿ.ಕೆ ದೇಬ್ ಅವರು ಪಟ್ನಾಯಕ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸಿದರು. ರಾಜ್ಯ ಪ್ರಧಾನ ಕಚೇರಿ ಶಂಖ ಭವನದಲ್ಲಿ ನಡೆದ ರಾಜ್ಯ ಮಂಡಳಿ ಸಭೆಯಲ್ಲಿ ಈ ಘೋಷಣೆ ನಡೆಯಿತು.</p>.ಅದಾನಿ ಸಮೂಹದಿಂದ ಅಧಿಕಾರಿಗಳಿಗೆ ಲಂಚ ಆರೋಪ ಸುಳ್ಳು: ಬಿಜೆಡಿ.<p>ಹೆಸರು ಘೋಷಣೆ ಬೆನ್ನಲ್ಲೇ, ಪಕ್ಷದ ಜಿಲ್ಲಾ ನಾಯಕರು ಪಟ್ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಹೂಗುಚ್ಛ, ವರ್ಣಚಿತ್ರ ಮತ್ತು ಭಗವಾನ್ ಜಗನ್ನಾಥನ 'ಅಂಗಬಸ್ತ್ರ' ಮತ್ತು 'ಮಹಾ ಪ್ರಸಾದ್' ನೀಡಿದರು. </p><p>ಪಕ್ಷದ ರಾಜ್ಯ ಮಂಡಳಿಯು 355 ಸದಸ್ಯರನ್ನು ಹೊಂದಿದ್ದು, ಅವರಲ್ಲಿ 80 ಜನರನ್ನು ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ದೇಬ್ ಹೇಳಿದರು.</p> .ಒಡಿಶಾದಲ್ಲಿ ‘ಆಪರೇಷನ್ ಕಮಲ’ ಸದ್ದು; ಬಿಜೆಡಿ ಸಂಸದ ಸುಜೀತ್ ಕುಮಾರ್ ರಾಜೀನಾಮೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶನಿವಾರ ಸತತ ಒಂಬತ್ತನೇ ಬಾರಿಗೆ ಬಿಜು ಜನತಾದಳದ (ಬಿಜೆಡಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.</p>.ಒಡಿಶಾ: ಬಿಜೆಡಿ ಅಧ್ಯಕ್ಷ ಸ್ಥಾನಕ್ಕೆ ಪಟ್ನಾಯಕ್ ನಾಮಪತ್ರ. <p>ಪಕ್ಷದ ಸ್ಥಾಪಕಾಧ್ಯಕ್ಷರಾದ ಪಟ್ನಾಯಕ್ ಅವರು ಮಾತ್ರ ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.</p><p>ಬಿಜೆಡಿಯ ಸಾಂಸ್ಥಿಕ ಚುನಾವಣಾ ರಿಟರ್ನಿಂಗ್ ಅಧಿಕಾರಿ ಪಿ.ಕೆ ದೇಬ್ ಅವರು ಪಟ್ನಾಯಕ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸಿದರು. ರಾಜ್ಯ ಪ್ರಧಾನ ಕಚೇರಿ ಶಂಖ ಭವನದಲ್ಲಿ ನಡೆದ ರಾಜ್ಯ ಮಂಡಳಿ ಸಭೆಯಲ್ಲಿ ಈ ಘೋಷಣೆ ನಡೆಯಿತು.</p>.ಅದಾನಿ ಸಮೂಹದಿಂದ ಅಧಿಕಾರಿಗಳಿಗೆ ಲಂಚ ಆರೋಪ ಸುಳ್ಳು: ಬಿಜೆಡಿ.<p>ಹೆಸರು ಘೋಷಣೆ ಬೆನ್ನಲ್ಲೇ, ಪಕ್ಷದ ಜಿಲ್ಲಾ ನಾಯಕರು ಪಟ್ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಹೂಗುಚ್ಛ, ವರ್ಣಚಿತ್ರ ಮತ್ತು ಭಗವಾನ್ ಜಗನ್ನಾಥನ 'ಅಂಗಬಸ್ತ್ರ' ಮತ್ತು 'ಮಹಾ ಪ್ರಸಾದ್' ನೀಡಿದರು. </p><p>ಪಕ್ಷದ ರಾಜ್ಯ ಮಂಡಳಿಯು 355 ಸದಸ್ಯರನ್ನು ಹೊಂದಿದ್ದು, ಅವರಲ್ಲಿ 80 ಜನರನ್ನು ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ದೇಬ್ ಹೇಳಿದರು.</p> .ಒಡಿಶಾದಲ್ಲಿ ‘ಆಪರೇಷನ್ ಕಮಲ’ ಸದ್ದು; ಬಿಜೆಡಿ ಸಂಸದ ಸುಜೀತ್ ಕುಮಾರ್ ರಾಜೀನಾಮೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>