<p><strong>ಲಖನೌ:</strong> ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ಒತ್ತಡ ಹೇರಿದ್ದಕ್ಕೆ 21 ವರ್ಷದ ಯುವಕನೊಬ್ಬ ತನ್ನ ತಂದೆಯನ್ನೇ ಕೊಂದು, ಮೃತದೇಹವನ್ನು ತುಂಡರಿಸಿದ ಭೀಕರ ಘಟನೆ ಉತ್ತರಪ್ರದೇಶದ ಆಶಿಯಾನಾ ಎಂಬಲ್ಲಿ ನಡೆದಿದೆ. </p>.<p>ಮೃತ ವ್ಯಕ್ತಿಯನ್ನು ಮಾನವೇಂದ್ರ ಸಿಂಗ್ ಹಾಗೂ ಆರೋಪಿ ಯುವಕನನ್ನು ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪ್ರತಾಪ್ ಈ ಹಿಂದೆಯೂ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದ. ಆದರೆ, ಉತ್ತೀರ್ಣನಾಗಿರಲಿಲ್ಲ. ಇದೇ ವಿಚಾರವಾಗಿ ಕಳೆದ ಶುಕ್ರವಾರ ತಂದೆ–ಮಗನ ನಡುವೆ ವಾಗ್ವಾದ ನಡೆಯಿತು. ಮಗನ ಮೇಲೆ ಕೋಪಗೊಂಡಿದ್ದ ಮಾನವೇಂದ್ರ, ಪ್ರತಾಪ್ನ ತಲೆಗೆ ಬಂದೂಕು ಇಟ್ಟು ಬೆದರಿಸಿದ್ದರು. ಈ ವೇಳೆ ತಂದೆಯ ಕೈಯಲ್ಲಿದ್ದ ಬಂದೂಕು ಕಸಿದ ಪ್ರತಾಪ್, ಅವರನ್ನೇ ಗುಂಡಿಟ್ಟು ಕೊಂದ ಎಂದು ಹೇಳಿದ್ದಾರೆ.</p>.<p>‘ತನ್ನ ತಂದೆ ಕಾಣೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಅಕ್ಕಪಕ್ಕದವರಿಗೆ ಹೇಳಿದ್ದ ಪ್ರತಾಪ್, ಬಳಿಕ ಪೊಲೀಸರು ಹಾಗೂ ನೆರೆಯವರ ಪ್ರಶ್ನೆಗಳಿಗೆ ಹೆದರಿ, ತನ್ನ ತಂದೆಯ ಸ್ನೇಹಿತರೊಬ್ಬರಿಗೆ ಕರೆ ಮಾಡಿದ. ತಾನೇ ಕೊಲೆ ಮಾಡಿರುವ ವಿಚಾರವನ್ನು ಅವರಲ್ಲಿ ಒಪ್ಪಿಕೊಂಡ’ ಎಂದು ಮಾಹಿತಿ ನೀಡಿದ್ದಾರೆ. </p>.<p><strong>ಸಹೋದರಿಯ ಕಣ್ಣೆದುರೇ ಕೃತ್ಯ:</strong> ಘಟನೆಯ ಸಂದರ್ಭದಲ್ಲಿ ಪ್ರತಾಪ್ನ ಕಿರಿಯ ಸಹೋದರಿಯು ಮನೆಯ ಬೇರೊಂದು ಕೊಠಡಿಯಲ್ಲಿದ್ದರು. ಗುಂಡಿನ ಸದ್ದು ಕೇಳಿ ಹೊರಬಂದ ಅವರನ್ನೂ ಕೊಲ್ಲುವುದಾಗಿ ಬೆದರಿಸಿದ ಪ್ರತಾಪ್, ಆಕೆಯನ್ನು 4 ದಿನಗಳ ಕಾಲ ಕೊಠಡಿಯಲ್ಲಿ ಕೂಡಿಹಾಕಿದ್ದ. ಈ ಅವಧಿಯಲ್ಲಿ ಮಾನವೇಂದ್ರ ಅವರ ದೇಹವನ್ನು ತುಂಡರಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಬಿಸಾಡಿದ್ದಾನೆ. ಮೃತದೇಹದ ಮುಂಡದ ಭಾಗವನ್ನು ಡ್ರಮ್ ಒಂದರಲ್ಲಿ ಆ್ಯಸಿಡ್ ಮತ್ತು ಸಿಮೆಂಟ್ ಹಾಕಿ ಮುಚ್ಚಿಡಲು ಯೋಜಿಸಿ ಡ್ರಮ್ ಕೂಡ ತಂದಿದ್ದ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ಒತ್ತಡ ಹೇರಿದ್ದಕ್ಕೆ 21 ವರ್ಷದ ಯುವಕನೊಬ್ಬ ತನ್ನ ತಂದೆಯನ್ನೇ ಕೊಂದು, ಮೃತದೇಹವನ್ನು ತುಂಡರಿಸಿದ ಭೀಕರ ಘಟನೆ ಉತ್ತರಪ್ರದೇಶದ ಆಶಿಯಾನಾ ಎಂಬಲ್ಲಿ ನಡೆದಿದೆ. </p>.<p>ಮೃತ ವ್ಯಕ್ತಿಯನ್ನು ಮಾನವೇಂದ್ರ ಸಿಂಗ್ ಹಾಗೂ ಆರೋಪಿ ಯುವಕನನ್ನು ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪ್ರತಾಪ್ ಈ ಹಿಂದೆಯೂ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದ. ಆದರೆ, ಉತ್ತೀರ್ಣನಾಗಿರಲಿಲ್ಲ. ಇದೇ ವಿಚಾರವಾಗಿ ಕಳೆದ ಶುಕ್ರವಾರ ತಂದೆ–ಮಗನ ನಡುವೆ ವಾಗ್ವಾದ ನಡೆಯಿತು. ಮಗನ ಮೇಲೆ ಕೋಪಗೊಂಡಿದ್ದ ಮಾನವೇಂದ್ರ, ಪ್ರತಾಪ್ನ ತಲೆಗೆ ಬಂದೂಕು ಇಟ್ಟು ಬೆದರಿಸಿದ್ದರು. ಈ ವೇಳೆ ತಂದೆಯ ಕೈಯಲ್ಲಿದ್ದ ಬಂದೂಕು ಕಸಿದ ಪ್ರತಾಪ್, ಅವರನ್ನೇ ಗುಂಡಿಟ್ಟು ಕೊಂದ ಎಂದು ಹೇಳಿದ್ದಾರೆ.</p>.<p>‘ತನ್ನ ತಂದೆ ಕಾಣೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಅಕ್ಕಪಕ್ಕದವರಿಗೆ ಹೇಳಿದ್ದ ಪ್ರತಾಪ್, ಬಳಿಕ ಪೊಲೀಸರು ಹಾಗೂ ನೆರೆಯವರ ಪ್ರಶ್ನೆಗಳಿಗೆ ಹೆದರಿ, ತನ್ನ ತಂದೆಯ ಸ್ನೇಹಿತರೊಬ್ಬರಿಗೆ ಕರೆ ಮಾಡಿದ. ತಾನೇ ಕೊಲೆ ಮಾಡಿರುವ ವಿಚಾರವನ್ನು ಅವರಲ್ಲಿ ಒಪ್ಪಿಕೊಂಡ’ ಎಂದು ಮಾಹಿತಿ ನೀಡಿದ್ದಾರೆ. </p>.<p><strong>ಸಹೋದರಿಯ ಕಣ್ಣೆದುರೇ ಕೃತ್ಯ:</strong> ಘಟನೆಯ ಸಂದರ್ಭದಲ್ಲಿ ಪ್ರತಾಪ್ನ ಕಿರಿಯ ಸಹೋದರಿಯು ಮನೆಯ ಬೇರೊಂದು ಕೊಠಡಿಯಲ್ಲಿದ್ದರು. ಗುಂಡಿನ ಸದ್ದು ಕೇಳಿ ಹೊರಬಂದ ಅವರನ್ನೂ ಕೊಲ್ಲುವುದಾಗಿ ಬೆದರಿಸಿದ ಪ್ರತಾಪ್, ಆಕೆಯನ್ನು 4 ದಿನಗಳ ಕಾಲ ಕೊಠಡಿಯಲ್ಲಿ ಕೂಡಿಹಾಕಿದ್ದ. ಈ ಅವಧಿಯಲ್ಲಿ ಮಾನವೇಂದ್ರ ಅವರ ದೇಹವನ್ನು ತುಂಡರಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಬಿಸಾಡಿದ್ದಾನೆ. ಮೃತದೇಹದ ಮುಂಡದ ಭಾಗವನ್ನು ಡ್ರಮ್ ಒಂದರಲ್ಲಿ ಆ್ಯಸಿಡ್ ಮತ್ತು ಸಿಮೆಂಟ್ ಹಾಕಿ ಮುಚ್ಚಿಡಲು ಯೋಜಿಸಿ ಡ್ರಮ್ ಕೂಡ ತಂದಿದ್ದ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>