<p><strong>ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ</strong></p><p>ತಿರುವನಂತಪುರ: ಕೇರಳದ ಸರ್ಕಾರಿ ನಿಗಮವೊಂದು ಪ್ರೇಮಿಗಳ ದಿನದ ಅಂಗವಾಗಿ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ನೀಡಲಿದೆ.</p><p>ಕೇರಳ ನಾಗರಿಕ ಸರಬರಾಜು ನಿಗಮವು ತನ್ನ 50ನೇ ವರ್ಷಾಚರಣೆಯ ಪ್ರಯುಕ್ತ ಈ ರಿಯಾಯಿತಿ ಸೌಲಭ್ಯವನ್ನು ಘೋಷಿಸಿದೆ.</p><p>ನಿಗಮದ ಮಳಿಗೆಗಳಿಂದ ₹1 ಸಾವಿರ ಮೌಲ್ಯದ ಸಬ್ಸಿಡಿ ರಹಿತ ವಸ್ತುಗಳನ್ನು ಖರೀದಿಸುವವರಿಗೆ ₹14 ದರದಲ್ಲಿ ಒಂದು ಕೆ.ಜಿ ಸಕ್ಕರೆ ಸಿಗಲಿದೆ. ₹500 ಮೌಲ್ಯದ ವಸ್ತುಗಳ ಜೊತೆ 500 ಗ್ರಾಂ ಸಕ್ಕರೆ ದೊರಕಲಿದೆ. ಈ ರಿಯಾಯಿತಿ ಸೌಲಭ್ಯವು ಫೆಬ್ರುವರಿ 14ರಿಂದ 28ರವರೆಗೆ ಜಾರಿಯಲ್ಲಿರಲಿದೆ.</p><p>ಜನರನ್ನು ಸೆಳೆಯಲು ಈ ರಿಯಾಯಿತಿ ನೀಡಲಾಗಿದೆ.</p><p>****</p><p><strong>ಬೆಳಿಗ್ಗೆ ಬಂಧನ; ಮಧ್ಯಾಹ್ನ ಬಿಡುಗಡೆ</strong></p><p>ಕಾನ್ಪುರ: ಲ್ಯಾಂಬೋರ್ಗಿನಿ ಕಾರು ಸರಣಿ ಅಪಘಾತ ಪ್ರಕರಣದಲ್ಲಿ ಗುರುವಾರ ಬೆಳಿಗ್ಗೆ ಕಾನ್ಪುರ ಪೊಲೀಸರಿಂದ ಬಂಧಿತನಾಗಿದ್ದ ತಂಬಾಕು ಉದ್ಯಮಿಯ ಪುತ್ರ ಶಿವಂ ಮಿಶ್ರಾ ಮಧ್ಯಾಹ್ನದ ವೇಳೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.</p><p>ಉದ್ಯಮಿ ಕೆ.ಕೆ.ಮಿಶ್ರಾ ಅವರ ಪುತ್ರ 35 ವರ್ಷದ ಶಿವಂ ಮಿಶ್ರಾನನ್ನು ಕಾನ್ಪುರ ಪೊಲೀಸರು ಬಂಧಿಸಿ ಗುರುವಾರ ಬೆಳಗ್ಗೆ ಎಸಿಜೆಎಂ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.</p><p>ಪೊಲೀಸರು ವಿಚಾರಣೆಗಾಗಿ ವಶಕ್ಕೆ ಕೋರಿದ್ದರು. ಆದರೆ ವಶಕ್ಕೆ ನೀಡುವ ಅಗತ್ಯ ಏನಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ವಾದ–ಪ್ರತಿವಾದ ಆಲಿಸಿ ₹20 ಸಾವಿರದ ಗ್ಯಾರಂಟಿ ಪತ್ರದೊಂದಿಗೆ ಜಾಮೀನು ಮಂಜೂರು ಮಾಡಿತು ಎಂದು ಸರ್ಕಾರಿ ಅಭಿಯೋಜಕ ದಿಲೀಪ್ ಅಶ್ವತಿ ತಿಳಿಸಿದ್ದಾರೆ.</p><p>****</p><p><strong>ಸೇವಾ ತೀರ್ಥ, ಕರ್ತವ್ಯ ಭವನ ಉದ್ಘಾಟನೆ ಇಂದು</strong></p><p>ನವದೆಹಲಿ: ಸುಮಾರು 126 ವರ್ಷಗಳ ಇತಿಹಾಸವಿದ್ದ ಬ್ರಿಟಿಷ್ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದ್ದ ಸಂಸತ್ ಕಾರ್ಯಾಲಯವು ಇತಿಹಾಸದ ಪುಟ ಸೇರಲಿದೆ. ಪ್ರಧಾನ ಮಂತ್ರಿ ಕಚೇರಿಯೂ ಸೇರಿ ಹಲವು ಸಚಿವಾಲಯಗಳ ಕಚೇರಿಯು ಈಗ ಸೇವಾ ತೀರ್ಥ ಮತ್ತು ಕರ್ತವ್ಯ ಭವನಕ್ಕೆ ಸ್ಥಳಾಂತರಗೊಳ್ಳಲಿವೆ.</p><p>ಪ್ರಧಾನಿ ಕಚೇರಿ ಒಳಗೊಂಡ ‘ಸೇವಾ ತೀರ್ಥ’ ಮತ್ತು ವಿವಿಧ ಸಚಿವಾಲಯಗಳ ಕಚೇರಿಗಳಿರುವ ಕರ್ತವ್ಯ ಭವನ 1 ಮತ್ತು 2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ.</p><p>ತಮ್ಮ ಕಚೇರಿಯಲ್ಲಿ ಶುಕ್ರವಾರದಂದು ಪ್ರಧಾನಿ ಮೋದಿ ಅವರು ಕೊನೇ ಸಂಪುಟ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ಕಚೇರಿಯ ಸ್ಥಳಾಂತರ ಕಾರ್ಯ ಆರಂಭಗೊಳ್ಳಲಿವೆ. ‘ಯುಗೇ ಯುಗೀನ್ ಭಾರತ್ ನ್ಯಾಷನಲ್ ಮ್ಯೂಸಿಯಂ’ ಯೋಜನೆಯ ಭಾಗವಾಗಿ ಹಳೇ ಕಟ್ಟಡಗಳನ್ನೂ ಮ್ಯೂಸಿಯಂ ಆಗಿ ಪರಿವರ್ತಿ<br>ಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ</strong></p><p>ತಿರುವನಂತಪುರ: ಕೇರಳದ ಸರ್ಕಾರಿ ನಿಗಮವೊಂದು ಪ್ರೇಮಿಗಳ ದಿನದ ಅಂಗವಾಗಿ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ನೀಡಲಿದೆ.</p><p>ಕೇರಳ ನಾಗರಿಕ ಸರಬರಾಜು ನಿಗಮವು ತನ್ನ 50ನೇ ವರ್ಷಾಚರಣೆಯ ಪ್ರಯುಕ್ತ ಈ ರಿಯಾಯಿತಿ ಸೌಲಭ್ಯವನ್ನು ಘೋಷಿಸಿದೆ.</p><p>ನಿಗಮದ ಮಳಿಗೆಗಳಿಂದ ₹1 ಸಾವಿರ ಮೌಲ್ಯದ ಸಬ್ಸಿಡಿ ರಹಿತ ವಸ್ತುಗಳನ್ನು ಖರೀದಿಸುವವರಿಗೆ ₹14 ದರದಲ್ಲಿ ಒಂದು ಕೆ.ಜಿ ಸಕ್ಕರೆ ಸಿಗಲಿದೆ. ₹500 ಮೌಲ್ಯದ ವಸ್ತುಗಳ ಜೊತೆ 500 ಗ್ರಾಂ ಸಕ್ಕರೆ ದೊರಕಲಿದೆ. ಈ ರಿಯಾಯಿತಿ ಸೌಲಭ್ಯವು ಫೆಬ್ರುವರಿ 14ರಿಂದ 28ರವರೆಗೆ ಜಾರಿಯಲ್ಲಿರಲಿದೆ.</p><p>ಜನರನ್ನು ಸೆಳೆಯಲು ಈ ರಿಯಾಯಿತಿ ನೀಡಲಾಗಿದೆ.</p><p>****</p><p><strong>ಬೆಳಿಗ್ಗೆ ಬಂಧನ; ಮಧ್ಯಾಹ್ನ ಬಿಡುಗಡೆ</strong></p><p>ಕಾನ್ಪುರ: ಲ್ಯಾಂಬೋರ್ಗಿನಿ ಕಾರು ಸರಣಿ ಅಪಘಾತ ಪ್ರಕರಣದಲ್ಲಿ ಗುರುವಾರ ಬೆಳಿಗ್ಗೆ ಕಾನ್ಪುರ ಪೊಲೀಸರಿಂದ ಬಂಧಿತನಾಗಿದ್ದ ತಂಬಾಕು ಉದ್ಯಮಿಯ ಪುತ್ರ ಶಿವಂ ಮಿಶ್ರಾ ಮಧ್ಯಾಹ್ನದ ವೇಳೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.</p><p>ಉದ್ಯಮಿ ಕೆ.ಕೆ.ಮಿಶ್ರಾ ಅವರ ಪುತ್ರ 35 ವರ್ಷದ ಶಿವಂ ಮಿಶ್ರಾನನ್ನು ಕಾನ್ಪುರ ಪೊಲೀಸರು ಬಂಧಿಸಿ ಗುರುವಾರ ಬೆಳಗ್ಗೆ ಎಸಿಜೆಎಂ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.</p><p>ಪೊಲೀಸರು ವಿಚಾರಣೆಗಾಗಿ ವಶಕ್ಕೆ ಕೋರಿದ್ದರು. ಆದರೆ ವಶಕ್ಕೆ ನೀಡುವ ಅಗತ್ಯ ಏನಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ವಾದ–ಪ್ರತಿವಾದ ಆಲಿಸಿ ₹20 ಸಾವಿರದ ಗ್ಯಾರಂಟಿ ಪತ್ರದೊಂದಿಗೆ ಜಾಮೀನು ಮಂಜೂರು ಮಾಡಿತು ಎಂದು ಸರ್ಕಾರಿ ಅಭಿಯೋಜಕ ದಿಲೀಪ್ ಅಶ್ವತಿ ತಿಳಿಸಿದ್ದಾರೆ.</p><p>****</p><p><strong>ಸೇವಾ ತೀರ್ಥ, ಕರ್ತವ್ಯ ಭವನ ಉದ್ಘಾಟನೆ ಇಂದು</strong></p><p>ನವದೆಹಲಿ: ಸುಮಾರು 126 ವರ್ಷಗಳ ಇತಿಹಾಸವಿದ್ದ ಬ್ರಿಟಿಷ್ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದ್ದ ಸಂಸತ್ ಕಾರ್ಯಾಲಯವು ಇತಿಹಾಸದ ಪುಟ ಸೇರಲಿದೆ. ಪ್ರಧಾನ ಮಂತ್ರಿ ಕಚೇರಿಯೂ ಸೇರಿ ಹಲವು ಸಚಿವಾಲಯಗಳ ಕಚೇರಿಯು ಈಗ ಸೇವಾ ತೀರ್ಥ ಮತ್ತು ಕರ್ತವ್ಯ ಭವನಕ್ಕೆ ಸ್ಥಳಾಂತರಗೊಳ್ಳಲಿವೆ.</p><p>ಪ್ರಧಾನಿ ಕಚೇರಿ ಒಳಗೊಂಡ ‘ಸೇವಾ ತೀರ್ಥ’ ಮತ್ತು ವಿವಿಧ ಸಚಿವಾಲಯಗಳ ಕಚೇರಿಗಳಿರುವ ಕರ್ತವ್ಯ ಭವನ 1 ಮತ್ತು 2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ.</p><p>ತಮ್ಮ ಕಚೇರಿಯಲ್ಲಿ ಶುಕ್ರವಾರದಂದು ಪ್ರಧಾನಿ ಮೋದಿ ಅವರು ಕೊನೇ ಸಂಪುಟ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ಕಚೇರಿಯ ಸ್ಥಳಾಂತರ ಕಾರ್ಯ ಆರಂಭಗೊಳ್ಳಲಿವೆ. ‘ಯುಗೇ ಯುಗೀನ್ ಭಾರತ್ ನ್ಯಾಷನಲ್ ಮ್ಯೂಸಿಯಂ’ ಯೋಜನೆಯ ಭಾಗವಾಗಿ ಹಳೇ ಕಟ್ಟಡಗಳನ್ನೂ ಮ್ಯೂಸಿಯಂ ಆಗಿ ಪರಿವರ್ತಿ<br>ಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>