ಭುವನೇಶ್ವರ (ಪಿಟಿಐ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಇಲ್ಲಿನ ‘ನವೀನ್ ನಿವಾಸ’ದಲ್ಲಿ ಮಂಗಳವಾರ ಭೇಟಿಯಾಗಿದ್ದು, ‘ಲೋಕಸಭಾ ಚುನಾವಣೆಗೆ ಜೆಡಿಯು ಮತ್ತು ಬಿಜೆಡಿ ಪಕ್ಷಗಳ ಮೈತ್ರಿಯ ಕುರಿತು ಮಾತುಕತೆ ನಡೆಸಿಲ್ಲ’ ಎಂದು ಇಬ್ಬರೂ ನಾಯಕರು ಬಳಿಕ ತಿಳಿಸಿದ್ದಾರೆ.