<p><strong>ನವದೆಹಲಿ</strong>: ದೇಶದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಮಹಾ ನಿರ್ದೇಶಕ ಡಾ. ರಾಜೀವ್ ಬಹಲ್, ’ಸೋಂಕಿನ ತೀವ್ರತೆಯು ಸದ್ಯ ಅಲ್ಪ ಪ್ರಮಾಣದಲ್ಲಿದೆ ಮತ್ತು ಭಯಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.</p>.<p>ಹೊಸ ಕೋವಿಡ್ ರೂಪಾಂತರಿಗಳನ್ನು ಗುರುತಿಸಿರುವ ಬಗ್ಗೆ ಮಾತನಾಡಿದ ಅವರು, ‘ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಮಾದರಿಗಳ ರೂಪಾಂತರಿ ಅನುಕ್ರಮದಲ್ಲಿ (ಜಿನೋಮ್ ಸೀಕ್ವೆನ್ಸಿಂಗ್) ಹೊಸ ಉಪತಳಿಗಳು ಪತ್ತೆಯಾಗಿವೆ. ಅವುಗಳನ್ನು ಎಲ್ಎಫ್.7, ಎಕ್ಸ್ಎಫ್ಜಿ, ಜೆಎನ್.1 ಮತ್ತು ಎನ್ಬಿ 1.8.1 ಎಂದು ಗುರುತಿಸಲಾಗಿದೆ. ಅವು ಒಮಿಕ್ರಾನ್ ಉಪ ತಳಿಗಳಾಗಿದ್ದು, ಮಾರಣಾಂತಿಕವಲ್ಲ ಎಂದು ಗೊತ್ತಾಗಿದೆ’ ಎಂದಿದ್ದಾರೆ.</p>.<p>ಮೊದಲ ಮೂರು ರೂಪಾಂತರಿಗಳು ವ್ಯಾಪಕವಾಗಿವೆ. ಮತ್ತಷ್ಟು ಪ್ರದೇಶಗಳ ಮಾದರಿಗಳನ್ನು ಸೀಕ್ವೆನ್ಸ್ ಮಾಡಲಾಗುತ್ತಿದೆ. ಇನ್ನೂ ರೂಪಾಂತರಿಗಳು ಇವೆಯೇ ಎಂಬುದು ಎರಡು–ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಮಹಾ ನಿರ್ದೇಶಕ ಡಾ. ರಾಜೀವ್ ಬಹಲ್, ’ಸೋಂಕಿನ ತೀವ್ರತೆಯು ಸದ್ಯ ಅಲ್ಪ ಪ್ರಮಾಣದಲ್ಲಿದೆ ಮತ್ತು ಭಯಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.</p>.<p>ಹೊಸ ಕೋವಿಡ್ ರೂಪಾಂತರಿಗಳನ್ನು ಗುರುತಿಸಿರುವ ಬಗ್ಗೆ ಮಾತನಾಡಿದ ಅವರು, ‘ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಮಾದರಿಗಳ ರೂಪಾಂತರಿ ಅನುಕ್ರಮದಲ್ಲಿ (ಜಿನೋಮ್ ಸೀಕ್ವೆನ್ಸಿಂಗ್) ಹೊಸ ಉಪತಳಿಗಳು ಪತ್ತೆಯಾಗಿವೆ. ಅವುಗಳನ್ನು ಎಲ್ಎಫ್.7, ಎಕ್ಸ್ಎಫ್ಜಿ, ಜೆಎನ್.1 ಮತ್ತು ಎನ್ಬಿ 1.8.1 ಎಂದು ಗುರುತಿಸಲಾಗಿದೆ. ಅವು ಒಮಿಕ್ರಾನ್ ಉಪ ತಳಿಗಳಾಗಿದ್ದು, ಮಾರಣಾಂತಿಕವಲ್ಲ ಎಂದು ಗೊತ್ತಾಗಿದೆ’ ಎಂದಿದ್ದಾರೆ.</p>.<p>ಮೊದಲ ಮೂರು ರೂಪಾಂತರಿಗಳು ವ್ಯಾಪಕವಾಗಿವೆ. ಮತ್ತಷ್ಟು ಪ್ರದೇಶಗಳ ಮಾದರಿಗಳನ್ನು ಸೀಕ್ವೆನ್ಸ್ ಮಾಡಲಾಗುತ್ತಿದೆ. ಇನ್ನೂ ರೂಪಾಂತರಿಗಳು ಇವೆಯೇ ಎಂಬುದು ಎರಡು–ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>