<p class="title"><strong>ನವದೆಹಲಿ</strong>: ‘ಕರ್ನಾಟಕದಲ್ಲಿ ‘ನಂದಿನಿ’ ಬ್ರ್ಯಾಂಡ್ನ ಉತ್ಪನ್ನಗಳ ಜೊತೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ‘ಅಮೂಲ್‘ ತನ್ನ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಆನ್ಲೈನ್ ವೇದಿಕೆ ಮೂಲಕವಷ್ಟೇ ಮಾರಾಟ ಮಾಡಲಿದೆ‘ ಎಂದು ‘ಅಮೂಲ್’ ಸಂಸ್ಥೆಯು ಸ್ಪಷ್ಟಪಡಿಸಿದೆ.</p>.<p class="title">ಅಮೂಲ್ ಬ್ರ್ಯಾಂಡ್ನ ಉತ್ಪನ್ನಗಳನ್ನು ತಯಾರಿಸುವ ಗುಜರಾತ್ ಹಾಲು ಸಹಕಾರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಅವರು, ‘ಎರಡೂ ಒಕ್ಕೂಟಗಳು ರೈತರದೇ ಆಗಿವೆ. ಎರಡು ಬ್ರ್ಯಾಂಡ್ಗಳ ನಡುವೆ ಸ್ಪರ್ಧೆ ಚಿತ್ರಣವೇ ಇಲ್ಲ’ ಎಂದು ಹೇಳಿದರು.</p>.<p class="title">ಕರ್ನಾಟಕದಲ್ಲಿ ಅಮೂಲ್ ಬ್ರ್ಯಾಂಡ್ನ ಹಾಲು, ಮೊಸರು ಮಾರಾಟ ಪ್ರಕ್ರಿಯೆಯು ವಿವಾದದ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ‘ಅಮೂಲ್ ಉತ್ಪನ್ನಗಳು ಪೂರ್ಣ ಪ್ರಮಾಣದಲ್ಲಿ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. </p>.<p class="title">ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ 2015–16ರಿಂದಲೇ ಅಮೂಲ್ ಹಾಲು ಮಾರಾಟದಲ್ಲಿ ತೊಡಗಿದೆ. ಸರ್ಕಾರದ ಸಬ್ಸಿಡಿ ಕಾರಣದಿಂದ ‘ನಂದಿನಿ’ ಹಾಲು, ಮೊಸರು ದರ ಅಗ್ಗವಾಗಿದೆ. ಅಮೂಲ್ ಹಾಲಿನ ದರ ಲೀಟರಿಗೆ ₹ 54 ಇದ್ದರೆ, ‘ನಂದಿನಿ’ ಹಾಲಿನ ದರ ಲಿಟರಿಗೆ ₹ 39 ಆಗಿದೆ. ಈ ಕಾರಣದಿಂದಲೂ ಉಭಯ ಬ್ರ್ಯಾಂಡ್ಗಳ ನಡುವೆ ಸ್ಪರ್ಧೆಯ ಪ್ರಶ್ನೆ ಉದ್ಭವಿಸದು ಎಂದರು. </p>.<p class="title"><a href="https://www.prajavani.net/karnataka-news/farmers-suffering-from-various-problems-in-dairy-farming-1030675.html" itemprop="url">ಡೇರಿಗೆ ಹಾಲು; ರೈತರಿಗೆ ಗೋಳು- ದುಬಾರಿಯಾದ ಪಶು ಆಹಾರ, ಹಸುಗಳಿಗೆ ಕಾಡುವ ರೋಗ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ‘ಕರ್ನಾಟಕದಲ್ಲಿ ‘ನಂದಿನಿ’ ಬ್ರ್ಯಾಂಡ್ನ ಉತ್ಪನ್ನಗಳ ಜೊತೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ‘ಅಮೂಲ್‘ ತನ್ನ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಆನ್ಲೈನ್ ವೇದಿಕೆ ಮೂಲಕವಷ್ಟೇ ಮಾರಾಟ ಮಾಡಲಿದೆ‘ ಎಂದು ‘ಅಮೂಲ್’ ಸಂಸ್ಥೆಯು ಸ್ಪಷ್ಟಪಡಿಸಿದೆ.</p>.<p class="title">ಅಮೂಲ್ ಬ್ರ್ಯಾಂಡ್ನ ಉತ್ಪನ್ನಗಳನ್ನು ತಯಾರಿಸುವ ಗುಜರಾತ್ ಹಾಲು ಸಹಕಾರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಅವರು, ‘ಎರಡೂ ಒಕ್ಕೂಟಗಳು ರೈತರದೇ ಆಗಿವೆ. ಎರಡು ಬ್ರ್ಯಾಂಡ್ಗಳ ನಡುವೆ ಸ್ಪರ್ಧೆ ಚಿತ್ರಣವೇ ಇಲ್ಲ’ ಎಂದು ಹೇಳಿದರು.</p>.<p class="title">ಕರ್ನಾಟಕದಲ್ಲಿ ಅಮೂಲ್ ಬ್ರ್ಯಾಂಡ್ನ ಹಾಲು, ಮೊಸರು ಮಾರಾಟ ಪ್ರಕ್ರಿಯೆಯು ವಿವಾದದ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ‘ಅಮೂಲ್ ಉತ್ಪನ್ನಗಳು ಪೂರ್ಣ ಪ್ರಮಾಣದಲ್ಲಿ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. </p>.<p class="title">ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ 2015–16ರಿಂದಲೇ ಅಮೂಲ್ ಹಾಲು ಮಾರಾಟದಲ್ಲಿ ತೊಡಗಿದೆ. ಸರ್ಕಾರದ ಸಬ್ಸಿಡಿ ಕಾರಣದಿಂದ ‘ನಂದಿನಿ’ ಹಾಲು, ಮೊಸರು ದರ ಅಗ್ಗವಾಗಿದೆ. ಅಮೂಲ್ ಹಾಲಿನ ದರ ಲೀಟರಿಗೆ ₹ 54 ಇದ್ದರೆ, ‘ನಂದಿನಿ’ ಹಾಲಿನ ದರ ಲಿಟರಿಗೆ ₹ 39 ಆಗಿದೆ. ಈ ಕಾರಣದಿಂದಲೂ ಉಭಯ ಬ್ರ್ಯಾಂಡ್ಗಳ ನಡುವೆ ಸ್ಪರ್ಧೆಯ ಪ್ರಶ್ನೆ ಉದ್ಭವಿಸದು ಎಂದರು. </p>.<p class="title"><a href="https://www.prajavani.net/karnataka-news/farmers-suffering-from-various-problems-in-dairy-farming-1030675.html" itemprop="url">ಡೇರಿಗೆ ಹಾಲು; ರೈತರಿಗೆ ಗೋಳು- ದುಬಾರಿಯಾದ ಪಶು ಆಹಾರ, ಹಸುಗಳಿಗೆ ಕಾಡುವ ರೋಗ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>