<p><strong>ಶ್ರೀನಗರ</strong>: ದೇಶದ ಖ್ಯಾತ ಹೃದ್ರೋಗ ತಜ್ಞ ಉಪೇಂದ್ರ ಕೌಲ್ ಅವರು ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಸರಿಯಾದ ರಸ್ತೆ ಸಂಪರ್ಕಗಳಿಲ್ಲದ ಪ್ರದೇಶಗಳಲ್ಲಿ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ‘ಹಾರ್ಟ್ ಕ್ಲಿನಿಕ್ ಆನ್ ವ್ಹೀಲ್ಸ್’ ಎಂಬ ಯೋಜನೆಯನ್ನು ಗುರುವಾರ ಆರಂಭಿಸಿದರು. </p>.<p>5ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಸ್ಥೂಲಕಾಯದ ಜತೆಗೆ ಸಂಧಿವಾತ ಮತ್ತು ಜನ್ಮಜಾತ ಹೃದಯ ಕಾಯಿಲೆಗಳನ್ನು ಪತ್ತೆಹಚ್ಚಲು ಶಾಲಾ ಸಮೀಕ್ಷೆಗಳಿಗೆ ಈ ಸಂಚಾರಿ ಕ್ಲಿನಿಕ್ ಬಳಸಲಾಗುವುದು ಎಂದು ಕೌಲ್ ಹೇಳಿದರು.</p>.<p>ಮಹತ್ವಾಕಾಂಕ್ಷೆಯ ‘ನೋ ಹಾರ್ಟ್ ಅಟ್ಯಾಕ್ ಮಿಷನ್’ ಭಾಗವಾಗಿರುವ ಈ ನವೀನ ಯೋಜನೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಹಯೋಗದೊಂದಿಗೆ ಗೌರಿ ಕೌಲ್ ಫೌಂಡೇಶನ್ (ಜಿಕೆಎಫ್) ಪ್ರಾರಂಭಿಸಿದೆ ಎಂದು ಅವರು ಹೇಳಿದರು.</p>.<p>ಪುಲ್ವಾಮಾದ ಹವಾಲ್ ಗ್ರಾಮದಲ್ಲಿ ‘ಹಾರ್ಟ್ ಕ್ಲಿನಿಕ್ ಆನ್ ವೀಲ್ಸ್’ಗೆ ಚಾಲನೆ ನೀಡಿದ ವೇಳೆ ಮಾತನಾಡಿದ ಅವರು, ‘ಸಂಚಾರಿ ಕ್ಲಿನಿಕ್ ಇಸಿಜಿ, ಡಾಪ್ಲರ್ನೊಂದಿಗೆ ಪೋರ್ಟಬಲ್ ಎಕೋಕಾರ್ಡಿಯೋಗ್ರಫಿ ಮತ್ತು ಸುಧಾರಿತ ರೋಗನಿರ್ಣಯ ಸಾಧನಗಳನ್ನು ಒಳಗೊಂಡಿದೆ. ಹೃದಯ ವೈಫಲ್ಯ (ಎನ್ಟಿ-ಪ್ರೊ ಬಿಎನ್ಪಿ) ಹೃದಯ ಸ್ನಾಯುವಿನ ಗಾಯ (ಟ್ರೋಪೋನಿನ್ಸ್), ಮಧುಮೇಹ (ಎಚ್ಬಿಎ1ಸಿ), ರಕ್ತ ಹೆಪ್ಪುಗಟ್ಟುವಿಕೆ ಪತ್ತೆಹಚ್ಚುವ ಸೌಲಭ್ಯಗಳನ್ನು ಸಹ ಇದು ಹೊಂದಿದೆ. ಆರಂಭದಲ್ಲಿ, ಈ ಕ್ಲಿನಿಕ್ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳ ದುರ್ಗಮ ಪ್ರದೇಶಗಳಲ್ಲಿ ಸೇವೆ ಒದಗಿಸಲಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ದೇಶದ ಖ್ಯಾತ ಹೃದ್ರೋಗ ತಜ್ಞ ಉಪೇಂದ್ರ ಕೌಲ್ ಅವರು ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಸರಿಯಾದ ರಸ್ತೆ ಸಂಪರ್ಕಗಳಿಲ್ಲದ ಪ್ರದೇಶಗಳಲ್ಲಿ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ‘ಹಾರ್ಟ್ ಕ್ಲಿನಿಕ್ ಆನ್ ವ್ಹೀಲ್ಸ್’ ಎಂಬ ಯೋಜನೆಯನ್ನು ಗುರುವಾರ ಆರಂಭಿಸಿದರು. </p>.<p>5ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಸ್ಥೂಲಕಾಯದ ಜತೆಗೆ ಸಂಧಿವಾತ ಮತ್ತು ಜನ್ಮಜಾತ ಹೃದಯ ಕಾಯಿಲೆಗಳನ್ನು ಪತ್ತೆಹಚ್ಚಲು ಶಾಲಾ ಸಮೀಕ್ಷೆಗಳಿಗೆ ಈ ಸಂಚಾರಿ ಕ್ಲಿನಿಕ್ ಬಳಸಲಾಗುವುದು ಎಂದು ಕೌಲ್ ಹೇಳಿದರು.</p>.<p>ಮಹತ್ವಾಕಾಂಕ್ಷೆಯ ‘ನೋ ಹಾರ್ಟ್ ಅಟ್ಯಾಕ್ ಮಿಷನ್’ ಭಾಗವಾಗಿರುವ ಈ ನವೀನ ಯೋಜನೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಹಯೋಗದೊಂದಿಗೆ ಗೌರಿ ಕೌಲ್ ಫೌಂಡೇಶನ್ (ಜಿಕೆಎಫ್) ಪ್ರಾರಂಭಿಸಿದೆ ಎಂದು ಅವರು ಹೇಳಿದರು.</p>.<p>ಪುಲ್ವಾಮಾದ ಹವಾಲ್ ಗ್ರಾಮದಲ್ಲಿ ‘ಹಾರ್ಟ್ ಕ್ಲಿನಿಕ್ ಆನ್ ವೀಲ್ಸ್’ಗೆ ಚಾಲನೆ ನೀಡಿದ ವೇಳೆ ಮಾತನಾಡಿದ ಅವರು, ‘ಸಂಚಾರಿ ಕ್ಲಿನಿಕ್ ಇಸಿಜಿ, ಡಾಪ್ಲರ್ನೊಂದಿಗೆ ಪೋರ್ಟಬಲ್ ಎಕೋಕಾರ್ಡಿಯೋಗ್ರಫಿ ಮತ್ತು ಸುಧಾರಿತ ರೋಗನಿರ್ಣಯ ಸಾಧನಗಳನ್ನು ಒಳಗೊಂಡಿದೆ. ಹೃದಯ ವೈಫಲ್ಯ (ಎನ್ಟಿ-ಪ್ರೊ ಬಿಎನ್ಪಿ) ಹೃದಯ ಸ್ನಾಯುವಿನ ಗಾಯ (ಟ್ರೋಪೋನಿನ್ಸ್), ಮಧುಮೇಹ (ಎಚ್ಬಿಎ1ಸಿ), ರಕ್ತ ಹೆಪ್ಪುಗಟ್ಟುವಿಕೆ ಪತ್ತೆಹಚ್ಚುವ ಸೌಲಭ್ಯಗಳನ್ನು ಸಹ ಇದು ಹೊಂದಿದೆ. ಆರಂಭದಲ್ಲಿ, ಈ ಕ್ಲಿನಿಕ್ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳ ದುರ್ಗಮ ಪ್ರದೇಶಗಳಲ್ಲಿ ಸೇವೆ ಒದಗಿಸಲಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>