ನವದೆಹಲಿ: ‘ಭಾರತ ಎಲ್ಲಾ ಧರ್ಮದವರಿಗೂ ಸೇರಿದ ರಾಷ್ಟ್ರ. ಇಲ್ಲಿ ಧರ್ಮಕ್ಕಾಗಿ ಬಡಿದಾಡಿಕೊಳ್ಳುವುದು ದೇಶಕ್ಕೆ ಒಳ್ಳೆಯದಲ್ಲ’ ಎಂದು ನ್ಯಾಷನಲ್ ಕಾನ್ಫರೆನ್ಸ್ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆದ ಘಟನೆ ಆಘಾತಕಾರಿ. ಭಾರತದಲ್ಲಿರುವ ಎಲ್ಲಾ ಧರ್ಮದವರಿಗೂ ಅಸ್ತಿತ್ವ ಕಂಡುಕೊಳ್ಳಲು ತಮ್ಮದೇ ಆದ ಹಕ್ಕುಗಳಿವೆ’ ಎಂದಿದ್ದಾರೆ.