ನವದೆಹಲಿ: ಸಂಸ್ಕೃತ ಭಾಷೆಯನ್ನು ಬಳಸುತ್ತಿರುವವರಿಗೆ, ಅದನ್ನು ಪ್ರೋತ್ಸಾಹಿಸುತ್ತಿರುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿರುವ ಶಿಕ್ಷಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಸಂಸ್ಕೃತ ದಿನಾಚರಣೆ’ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದ್ದಾರೆ.
ಪ್ರತಿ ವರ್ಷಶ್ರಾವಣ ತಿಂಗಳ ಹುಣ್ಣಿಮೆಯ ದಿನವನ್ನು ಸಂಸ್ಕೃತ ದಿನ ಎಂದು ಆಚರಿಸಲಾಗುತ್ತದೆ. ‘ಸಂಸ್ಕೃತ ಒಂದು ಸುಂದರವಾದ ಭಾಷೆ. ಈ ಭಾಷೆಯು ಭಾರತವನ್ನು ಅದೆಷ್ಟೋ ವರ್ಷಗಳಿಂದ ಜ್ಞಾನದ ಭಂಡಾರವಾಗಿಸಿದೆ. ಸಂಸ್ಕೃತವನ್ನು ಇನ್ನಷ್ಟು ಪ್ರಖ್ಯಾತಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಟ್ವೀಟ್ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
अद्य संस्कृतदिवसे ये संस्कृतभाषां पठन्ति तथा च जनेषु तस्याः प्रचारार्थं प्रयासं कुर्वन्ति तान् सर्वान् प्रणमामि। संस्कृतभाषा सुन्दरी भाषा अस्ति किञ्च सहस्रशः वर्षेभ्यः अस्माकं श्रेष्ठायाः संस्कृत्याः भागभूता अस्ति। आगामिषु वर्षेषु संस्कृतभाषायाः लोकप्रियता नितराम् अभिवर्धताम्।