<p><strong>ಲಖನೌ:</strong> ಹಾಲಿಗೆ ನೀರು ಬೆರೆಸಿ ಮಾರಾಟ ಮಾಡಿರುವುದರ ಬಗ್ಗೆ ಕೇಳಿರುತ್ತೀರಿ. ಉತ್ತರ ಪ್ರದೇಶದ ಶಾಲೆಯೊಂದರಲ್ಲಿ, ಅಡುಗೆ ಸಿಬ್ಬಂದಿ 1 ಲೀಟರ್ ಹಾಲನ್ನು ಒಂದು ಬಕೆಟ್ ನೀರಿಗೆ ಬೆರೆಸಿ, ಅದನ್ನು 50 ಮಕ್ಕಳಿಗೆ ವಿತರಿಸಿದ್ದಾರೆ. </p>.<p>ನೀರು ತುಂಬಿದ್ದ ಬಕೆಟ್ಗೆ ಅರ್ಧ ಲೀಟರ್ನ ಎರಡು ಪ್ಯಾಕೆಟ್ ಹಾಲನ್ನು ಸುರಿದು, ಅದನ್ನು ಕದಡಿ ಮಕ್ಕಳಿಗೆ ಕುಡಿಯಲು ವಿತರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. </p><p>ಘಟನೆ ನಡೆದಿರುವುದು ಉತ್ತರ ಪ್ರದೇಶದ ಮಹೊಬಾ ಜಿಲ್ಲೆಯ, ಕಬ್ರೈ ಬ್ಲಾಕ್ನ ಧಿಕ್ವಾಹ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ.</p><p>‘ಮಧ್ಯಾಹ್ನದ ಬಿಸಿಯೂಟದ ವೇಳೆ, ಶಾಲೆಯ ಪ್ರಾಂಶುಪಾಲರೇ ‘ಮಕ್ಕಳೇ ಹಾಲು ಕುಡಿಯಲು ಬನ್ನಿ‘ ಎಂದು ಕೂಗುತ್ತಿರುವುದು, ಅಡುಗೆ ಸಿಬ್ಬಂದಿ ಹಾಲನ್ನು ನೀರಿನಲ್ಲಿ ಬೆರೆಸಿ ಮಕ್ಕಳಿಗೆ ಕುಡಿಯಲು ವಿತರಿಸುತ್ತಿರುವುದು ವಿಡಿಯೊದಲ್ಲಿದೆ. </p><p>ಘಟನೆಯ ಬೆನ್ನಲ್ಲೇ, ಮಹೊಬಾ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರಾಂಶುಪಾಲರಾದ ಮೋನಿಕಾ ಸೋನಿ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. </p><p>‘ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿರುವ ಪ್ರಾಂಶುಪಾಲರು, ‘ನೀರಿನಲ್ಲಿ ಹಾಲು ಬೆರೆಸಿ ಮಕ್ಕಳಿಗೆ ವಿತರಿಸುವಂತೆ ನಾನು ಸೂಚಿಸಿಲ್ಲ, ಅಡುಗೆ ಸಿಬ್ಬಂದಿ ತಮಗೆ ತೋಚಿದಂತೆ ಮಾಡಿದ್ದಾರೆ’ ಎಂದು ದೂರಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಹಾಲಿಗೆ ನೀರು ಬೆರೆಸಿ ಮಾರಾಟ ಮಾಡಿರುವುದರ ಬಗ್ಗೆ ಕೇಳಿರುತ್ತೀರಿ. ಉತ್ತರ ಪ್ರದೇಶದ ಶಾಲೆಯೊಂದರಲ್ಲಿ, ಅಡುಗೆ ಸಿಬ್ಬಂದಿ 1 ಲೀಟರ್ ಹಾಲನ್ನು ಒಂದು ಬಕೆಟ್ ನೀರಿಗೆ ಬೆರೆಸಿ, ಅದನ್ನು 50 ಮಕ್ಕಳಿಗೆ ವಿತರಿಸಿದ್ದಾರೆ. </p>.<p>ನೀರು ತುಂಬಿದ್ದ ಬಕೆಟ್ಗೆ ಅರ್ಧ ಲೀಟರ್ನ ಎರಡು ಪ್ಯಾಕೆಟ್ ಹಾಲನ್ನು ಸುರಿದು, ಅದನ್ನು ಕದಡಿ ಮಕ್ಕಳಿಗೆ ಕುಡಿಯಲು ವಿತರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. </p><p>ಘಟನೆ ನಡೆದಿರುವುದು ಉತ್ತರ ಪ್ರದೇಶದ ಮಹೊಬಾ ಜಿಲ್ಲೆಯ, ಕಬ್ರೈ ಬ್ಲಾಕ್ನ ಧಿಕ್ವಾಹ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ.</p><p>‘ಮಧ್ಯಾಹ್ನದ ಬಿಸಿಯೂಟದ ವೇಳೆ, ಶಾಲೆಯ ಪ್ರಾಂಶುಪಾಲರೇ ‘ಮಕ್ಕಳೇ ಹಾಲು ಕುಡಿಯಲು ಬನ್ನಿ‘ ಎಂದು ಕೂಗುತ್ತಿರುವುದು, ಅಡುಗೆ ಸಿಬ್ಬಂದಿ ಹಾಲನ್ನು ನೀರಿನಲ್ಲಿ ಬೆರೆಸಿ ಮಕ್ಕಳಿಗೆ ಕುಡಿಯಲು ವಿತರಿಸುತ್ತಿರುವುದು ವಿಡಿಯೊದಲ್ಲಿದೆ. </p><p>ಘಟನೆಯ ಬೆನ್ನಲ್ಲೇ, ಮಹೊಬಾ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರಾಂಶುಪಾಲರಾದ ಮೋನಿಕಾ ಸೋನಿ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. </p><p>‘ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿರುವ ಪ್ರಾಂಶುಪಾಲರು, ‘ನೀರಿನಲ್ಲಿ ಹಾಲು ಬೆರೆಸಿ ಮಕ್ಕಳಿಗೆ ವಿತರಿಸುವಂತೆ ನಾನು ಸೂಚಿಸಿಲ್ಲ, ಅಡುಗೆ ಸಿಬ್ಬಂದಿ ತಮಗೆ ತೋಚಿದಂತೆ ಮಾಡಿದ್ದಾರೆ’ ಎಂದು ದೂರಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>