ರಾಜ್ಯಸಭೆಯ ಕಲಾಪವು ಊಟದ ವಿರಾಮದ ಹೊತ್ತಿಗೆ ಎರಡು ಬಾರಿ ಮುಂದೂಡಿಕೆಯಾಯಿತು. ಬೆಲೆ ಏರಿಕೆ ಮತ್ತು ಇತರ ವಿಚಾರಗಳ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸಿದವು. ಮಧ್ಯಾಹ್ನ 12ರ ಬಳಿಕ ಸದನವು ಸೇರಿದಾಗ, ರಾಜ್ಯಸಭಾ ಉಪಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಅವರು ‘ಪ್ರಶ್ನೋತ್ತರ ವೇಳೆ’ಯನ್ನು ಕೈಗೆತ್ತಿಕೊಂಡರು.