<p class="title"><strong>ನವದೆಹಲಿ:</strong> ಎಂಟು ಸದಸ್ಯರ ಅಮಾನತು ಆದೇಶ ಹಿಂಪಡೆಯುವವರೆಗೂ ರಾಜ್ಯಸಭೆಯ ಕಲಾಪದಿಂದ ವಿರೋಧಪಕ್ಷಗಳು ದೂರ ಉಳಿಯಲಿವೆ ಎಂದು ವಿರೋಧಪಕ್ಷದ ನಾಯಕ ಗುಲಾಂ ನಬಿ ಅಜಾದ್ ಮಂಗಳವಾರ ತಿಳಿಸಿದರು.</p>.<p>ಶೂನ್ಯವೇಳೆಯ ಬಳಿಕ ಮಾತನಾಡಿದಅವರು, ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತಲೂ (ಎಂ.ಎಸ್.ಪಿ) ಕಡಿಮೆ ಬೆಲೆಗೆ ಖಾಸಗಿಯವರು ಆಹಾರಧಾನ್ಯ ಖರೀದಿಸಲು ಅವಕಾಶವಿಲ್ಲದಂತೆ ಮಸೂದೆಯನ್ನು ತರಬೇಕು ಎಂದು ಒತ್ತಾಯಿಸಿದರು.</p>.<p>ಸ್ವಾಮಿನಾಥನ್ ಸೂತ್ರದ ಅನುಸಾರ ಕಾಲ ಕಾಲಕ್ಕೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿಷ್ಕರಿಸಬೇಕು ಎಂದೂ ಅವರು ಒತ್ತಾಯಿಸಿದರು.</p>.<p>ಕೃಷಿ ಮಸೂದೆ ವಿರುದ್ಧದ ಚರ್ಚೆ ವೇಳೆ ಅನುಚಿತ ವರ್ತನೆ ಆರೋಪದ ಮೇಲೆ ರಾಜ್ಯಸಭೆಯ ಎಂಟು ಸದಸ್ಯರನ್ನು ಅಮಾನತುಪಡಿಸಲಾಗಿಎ. ಈ ನಡುವೆಯೇ, ಮಸೂದೆಯೂ ಧ್ವನಿಮತದಿಂದ ಅಂಗೀಕಾರಗೊಂಡಿದೆ.</p>.<p><strong>ವಿರೋಧಪಕ್ಷಗಳಿಂದ ಸಭಾತ್ಯಾಗ:</strong></p>.<p>ಎಂಟು ಸದಸ್ಯರ ಅಮಾನತು ಆದೇಶ ರದ್ದುಪಡಿಸಲು ಆಗ್ರಹಪಡಿಸಿ ಇದಕ್ಕೂ ಮೊದಲು ವಿರೋಧಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.</p>.<p>ಕಾಂಗ್ರೆಸ್ ಮೊದಲಿಗೆ ಸದನದಿಂದ ಹೊರನಡೆದರೆ, ಹಿಂದೆಯೇ ಎಎಪಿ, ಟಿಎಂಸಿ ಮತ್ತು ಎಡಪಕ್ಷಗಳು ಕೂಡಾ ಹೊರನಡೆದವು. ಈ ಪಕ್ಷಗಳಿಗೆ ಸೇರಿದ ಎಂಟು ಸದಸ್ಯರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಪಡಿಸಲಾಗಿದೆ.</p>.<p>ಅಲ್ಲದೆ ಎನ್.ಸಿ.ಪಿ., ಎಸ್.ಪಿ., ಶಿವಸೇನೆ, ಆರ್.ಜೆ.ಡಿ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾತ್ಯಾಗ ನಿರ್ಧಾರ ಕೈಬಿಡಲು ಸಭಾಪತಿ ಎಂ.ವೆಂಕಯ್ಯನಾಯ್ಡು ಮನವಿ ಮಾಡಿದರು. ಆದರೆ, ವಿರೋಧಪಕ್ಷಗಳು ಇದನ್ನು ಪುರಸ್ಕರಿಸಲಿಲ್ಲ.</p>.<p>ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಕಲಾಪವನ್ನು ಸುಲಲಿತವಾಗಿ ನಡೆಸಲು ಸರ್ಕಾರ ಮತ್ತು ವಿರೋಧಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಬೇಕು ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಎಂಟು ಸದಸ್ಯರ ಅಮಾನತು ಆದೇಶ ಹಿಂಪಡೆಯುವವರೆಗೂ ರಾಜ್ಯಸಭೆಯ ಕಲಾಪದಿಂದ ವಿರೋಧಪಕ್ಷಗಳು ದೂರ ಉಳಿಯಲಿವೆ ಎಂದು ವಿರೋಧಪಕ್ಷದ ನಾಯಕ ಗುಲಾಂ ನಬಿ ಅಜಾದ್ ಮಂಗಳವಾರ ತಿಳಿಸಿದರು.</p>.<p>ಶೂನ್ಯವೇಳೆಯ ಬಳಿಕ ಮಾತನಾಡಿದಅವರು, ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತಲೂ (ಎಂ.ಎಸ್.ಪಿ) ಕಡಿಮೆ ಬೆಲೆಗೆ ಖಾಸಗಿಯವರು ಆಹಾರಧಾನ್ಯ ಖರೀದಿಸಲು ಅವಕಾಶವಿಲ್ಲದಂತೆ ಮಸೂದೆಯನ್ನು ತರಬೇಕು ಎಂದು ಒತ್ತಾಯಿಸಿದರು.</p>.<p>ಸ್ವಾಮಿನಾಥನ್ ಸೂತ್ರದ ಅನುಸಾರ ಕಾಲ ಕಾಲಕ್ಕೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿಷ್ಕರಿಸಬೇಕು ಎಂದೂ ಅವರು ಒತ್ತಾಯಿಸಿದರು.</p>.<p>ಕೃಷಿ ಮಸೂದೆ ವಿರುದ್ಧದ ಚರ್ಚೆ ವೇಳೆ ಅನುಚಿತ ವರ್ತನೆ ಆರೋಪದ ಮೇಲೆ ರಾಜ್ಯಸಭೆಯ ಎಂಟು ಸದಸ್ಯರನ್ನು ಅಮಾನತುಪಡಿಸಲಾಗಿಎ. ಈ ನಡುವೆಯೇ, ಮಸೂದೆಯೂ ಧ್ವನಿಮತದಿಂದ ಅಂಗೀಕಾರಗೊಂಡಿದೆ.</p>.<p><strong>ವಿರೋಧಪಕ್ಷಗಳಿಂದ ಸಭಾತ್ಯಾಗ:</strong></p>.<p>ಎಂಟು ಸದಸ್ಯರ ಅಮಾನತು ಆದೇಶ ರದ್ದುಪಡಿಸಲು ಆಗ್ರಹಪಡಿಸಿ ಇದಕ್ಕೂ ಮೊದಲು ವಿರೋಧಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.</p>.<p>ಕಾಂಗ್ರೆಸ್ ಮೊದಲಿಗೆ ಸದನದಿಂದ ಹೊರನಡೆದರೆ, ಹಿಂದೆಯೇ ಎಎಪಿ, ಟಿಎಂಸಿ ಮತ್ತು ಎಡಪಕ್ಷಗಳು ಕೂಡಾ ಹೊರನಡೆದವು. ಈ ಪಕ್ಷಗಳಿಗೆ ಸೇರಿದ ಎಂಟು ಸದಸ್ಯರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಪಡಿಸಲಾಗಿದೆ.</p>.<p>ಅಲ್ಲದೆ ಎನ್.ಸಿ.ಪಿ., ಎಸ್.ಪಿ., ಶಿವಸೇನೆ, ಆರ್.ಜೆ.ಡಿ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾತ್ಯಾಗ ನಿರ್ಧಾರ ಕೈಬಿಡಲು ಸಭಾಪತಿ ಎಂ.ವೆಂಕಯ್ಯನಾಯ್ಡು ಮನವಿ ಮಾಡಿದರು. ಆದರೆ, ವಿರೋಧಪಕ್ಷಗಳು ಇದನ್ನು ಪುರಸ್ಕರಿಸಲಿಲ್ಲ.</p>.<p>ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಕಲಾಪವನ್ನು ಸುಲಲಿತವಾಗಿ ನಡೆಸಲು ಸರ್ಕಾರ ಮತ್ತು ವಿರೋಧಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಬೇಕು ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>