<p><strong>ಕೋಲ್ಕತ್ತ:</strong> ಸರ್ಕಾರ ನೀಡಿದ್ದ ಪದ್ಮಶ್ರೀ ಪ್ರಶಸ್ತಿ ಪದಕವು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ತಮ್ಮ ಪೂರ್ವಜರ ಮನೆಯಿಂದ ಕಳವಾಗಿದೆ ಎಂದು ಮಾಜಿ ಈಜುಪಟು ಬುಲಾ ಚೌಧರಿ ದೂರು ನೀಡಿದ್ದಾರೆ.</p><p>ಬದುಕಿನಲ್ಲಿ ಏನೆಲ್ಲಾ ಗಳಿಸಿದ್ದೆನೋ ಅವೆಲ್ಲವನ್ನೂ ಕಳೆದುಕೊಂಡೆ ಎಂದು ಬುಲಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.</p><p>‘ನನ್ನ ಬದುಕಿನಲ್ಲಿ ಅತ್ಯಂತ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸಂಪಾದಿಸಿದ ಎಲ್ಲವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಆರು ಚಿನ್ನದ ಪದಕ ಸೇರಿ ಎಲ್ಲಾ ಪದಕಗಳನ್ನೂ ನಾನು ಕಳೆದುಕೊಂಡಿದ್ದೇನೆ. ಎಲ್ಲವನ್ನೂ ಹೊತ್ತೊಯ್ದ ಕಳ್ಳರು ಅರ್ಜುನ ಪ್ರಶಸ್ತಿ ಮತ್ತು ತೇನ್ಸಿಂಗ್ ನಾರ್ವೆ ಪದಕವನ್ನು ಬಿಟ್ಟುಹೋಗಿದ್ದಾರೆ’ ಎಂದಿದ್ದಾರೆ.</p><p>‘ಬಹುಶಃ ಕಳ್ಳರಿಗೆ ಅರ್ಜುನ ಮತ್ತು ತೇನ್ಸಿಂಗ್ ಪದಕಗಳು ಒಂದೇ ಗಾತ್ರದಾದ್ದರಿಂದ ಬಿಟ್ಟುಹೋಗಿರಬಹುದು. ಹಿಂಡ್ಮೋಟಾರ್ನಲ್ಲಿರುವ ಮನೆಯಲ್ಲೇ ನಾನು ಎಲ್ಲವನ್ನೂ ಇಟ್ಟಿರುತ್ತೇನೆ. ಆಗಾಗ ಭೇಟಿ ನೀಡುತ್ತಿರುತ್ತೇನೆ. ಬೀಗ ಹಾಕಿದ್ದರೂ ಇದು ಮೂರನೇ ಬಾರಿ ಕಳ್ಳತನವಾಗುತ್ತಿದೆ’ ಎಂದು ಬುಲಾ ಹೇಳಿದ್ದಾರೆ.</p><p>ಆ. 15ರಂದು ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಲು ಬುಲಾ ತೆರಳಿದ್ದರು. ಆ ಸಂದರ್ಭದಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.</p><p>‘ಅವರಿಗೆ ನನ್ನ ಪದಕಗಳೇ ಏಕೆ ಬೇಕು? ಅವು ನನ್ನ ಬದುಕಿನ ಅಮೂಲ್ಯ ವಸ್ತುಗಳು. ನನ್ನ ವೃತ್ತಿ ಜೀವನದ ಫಲಗಳು. ಪ್ರತಿಬಾರಿಯೂ ನನ್ನ ಮನೆಯನ್ನೇ ಏಕೆ ಗುರಿಯಾಗಿಸಿ ಕಳ್ಳತನವಾಗುತ್ತಿದೆ’ ಎಂದು ಬುಲಾ ಪ್ರಶ್ನಿಸಿದ್ದಾರೆ.</p><p>ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಸರ್ಕಾರ ನೀಡಿದ್ದ ಪದ್ಮಶ್ರೀ ಪ್ರಶಸ್ತಿ ಪದಕವು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ತಮ್ಮ ಪೂರ್ವಜರ ಮನೆಯಿಂದ ಕಳವಾಗಿದೆ ಎಂದು ಮಾಜಿ ಈಜುಪಟು ಬುಲಾ ಚೌಧರಿ ದೂರು ನೀಡಿದ್ದಾರೆ.</p><p>ಬದುಕಿನಲ್ಲಿ ಏನೆಲ್ಲಾ ಗಳಿಸಿದ್ದೆನೋ ಅವೆಲ್ಲವನ್ನೂ ಕಳೆದುಕೊಂಡೆ ಎಂದು ಬುಲಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.</p><p>‘ನನ್ನ ಬದುಕಿನಲ್ಲಿ ಅತ್ಯಂತ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸಂಪಾದಿಸಿದ ಎಲ್ಲವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಆರು ಚಿನ್ನದ ಪದಕ ಸೇರಿ ಎಲ್ಲಾ ಪದಕಗಳನ್ನೂ ನಾನು ಕಳೆದುಕೊಂಡಿದ್ದೇನೆ. ಎಲ್ಲವನ್ನೂ ಹೊತ್ತೊಯ್ದ ಕಳ್ಳರು ಅರ್ಜುನ ಪ್ರಶಸ್ತಿ ಮತ್ತು ತೇನ್ಸಿಂಗ್ ನಾರ್ವೆ ಪದಕವನ್ನು ಬಿಟ್ಟುಹೋಗಿದ್ದಾರೆ’ ಎಂದಿದ್ದಾರೆ.</p><p>‘ಬಹುಶಃ ಕಳ್ಳರಿಗೆ ಅರ್ಜುನ ಮತ್ತು ತೇನ್ಸಿಂಗ್ ಪದಕಗಳು ಒಂದೇ ಗಾತ್ರದಾದ್ದರಿಂದ ಬಿಟ್ಟುಹೋಗಿರಬಹುದು. ಹಿಂಡ್ಮೋಟಾರ್ನಲ್ಲಿರುವ ಮನೆಯಲ್ಲೇ ನಾನು ಎಲ್ಲವನ್ನೂ ಇಟ್ಟಿರುತ್ತೇನೆ. ಆಗಾಗ ಭೇಟಿ ನೀಡುತ್ತಿರುತ್ತೇನೆ. ಬೀಗ ಹಾಕಿದ್ದರೂ ಇದು ಮೂರನೇ ಬಾರಿ ಕಳ್ಳತನವಾಗುತ್ತಿದೆ’ ಎಂದು ಬುಲಾ ಹೇಳಿದ್ದಾರೆ.</p><p>ಆ. 15ರಂದು ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಲು ಬುಲಾ ತೆರಳಿದ್ದರು. ಆ ಸಂದರ್ಭದಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.</p><p>‘ಅವರಿಗೆ ನನ್ನ ಪದಕಗಳೇ ಏಕೆ ಬೇಕು? ಅವು ನನ್ನ ಬದುಕಿನ ಅಮೂಲ್ಯ ವಸ್ತುಗಳು. ನನ್ನ ವೃತ್ತಿ ಜೀವನದ ಫಲಗಳು. ಪ್ರತಿಬಾರಿಯೂ ನನ್ನ ಮನೆಯನ್ನೇ ಏಕೆ ಗುರಿಯಾಗಿಸಿ ಕಳ್ಳತನವಾಗುತ್ತಿದೆ’ ಎಂದು ಬುಲಾ ಪ್ರಶ್ನಿಸಿದ್ದಾರೆ.</p><p>ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>