<p><strong>ಕಾನ್ಪುರ</strong>: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು 'ಆಪರೇಷನ್ ಸಿಂಧೂರ'ದ ಚಿತ್ರ ಬಿಡಿಸಿ, ಉಡುಗೊರೆಯಾಗಿ ನೀಡಿರುವುದು ಗಮನ ಸೆಳೆದಿದೆ.</p><p>ಚಂದ್ರಶೇಖರ್ ಆಜಾದ್ ವಿಶ್ವವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಭಾಗಿಯಾದ ಮೋದಿ, ರಾಜ್ಯದ ₹47,600 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.</p><p>ವಿದ್ಯಾರ್ಥಿನಿಯೊಬ್ಬಳು 'ಆಪರೇಷನ್ ಸಿಂಧೂರ'ದ ಚಿತ್ರವನ್ನು ಬಿಡಿಸಿ ಕಾರ್ಯಕ್ರಮಕ್ಕೆ ತಂದಿದ್ದಳು. ಸಭೆಯ ನಡುವೆ ವಿದ್ಯಾರ್ಥಿನಿ, ಮೋದಿ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದಳು. ತಮ್ಮ ಭಾಷಣದ ನಡುವೆಯೇ ವಿದ್ಯಾರ್ಥಿನಿ ತಂದಿದ್ದ ಫೋಟೊವನ್ನು ತೆಗೆದುಕೊಂಡು ಬರುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ಆಪರೇಷನ್ ಸಿಂಧೂರದ ಬಗೆಗಿನ ವಿದ್ಯಾರ್ಥಿನಿಯ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಫೋಟೊ ಜತೆಗೆ ಹೆಸರು ಮತ್ತು ವಿಳಾಸವನ್ನು ನಮೂದಿಸಿಲು ಮೋದಿ ವೇದಿಕೆಯಿಂದಲೇ ತಿಳಿಸಿದ್ದರು. </p>.‘ಆಪರೇಷನ್ ಸಿಂಧೂರ’ ಈಗ ಶೌರ್ಯದ ಸಂಕೇತವಾಗಿದೆ: ಪ್ರಧಾನಿ ಮೋದಿ.ಕೇರಳದಲ್ಲಿ ಮಳೆ ಬಿರುಸು; ತಗ್ಗು ಪ್ರದೇಶಗಳು ಜಲಾವೃತ: ಆಶ್ರಯ ಕೇಂದ್ರಗಳಲ್ಲಿ ಜನರು. <p>ವಿದ್ಯಾರ್ಥಿನಿಗೆ ಪತ್ರ ಕಳುಹಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ.</p><p>ಇದೇ ಸಮಾವೇಶದಲ್ಲಿ ಮತ್ತೊಬ್ಬ ಹುಡುಗನು ಫೋಟೊ ಹಿಡಿದುಕೊಂಡಿರುವುದನ್ನು ಗಮನಿಸಿದ ಮೋದಿ, ನಿಮ್ಮ ಭುಜಗಳಿಗೆ ನೋವು ಬರಬಹುದು ಕೈಗಳನ್ನು ಕೆಳಗಿಳಿಸಿ ಎಂದು ಮೋದಿ ಪ್ರೀತಿಯಿಂದ ಹೇಳಿದರು.</p><p>ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.</p><p>ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.</p>.ಕಾರ್ಕಳ: ಮೆಸ್ಕಾಂ ಅಧಿಕಾರಿ ಗಿರೀಶ್ ರಾವ್ ಮನೆ, ಲಾಡ್ಜ್ ಮೇಲೆ ಲೋಕಾಯುಕ್ತ ದಾಳಿ.Mangaluru | ಮಕ್ಕಳನ್ನು ಕಳೆದುಕೊಂಡ ತಾಯಿಗೆ ಸರ್ಕಾರಿ ಉದ್ಯೋಗ ನೀಡಿ: ರವಿಕುಮಾರ್.ಪ್ರಸಿದ್ಧ ಹುಲಿ ಸಂರಕ್ಷಕ ವಾಲ್ಮೀಕ್ ಥಾಪರ್ ನಿಧನ.ಮಂಗಳೂರು | ದ್ವೇಷ ಭಾಷಣಗಾರರಿಗೆ ಸಂಘಟನೆ, ರಾಜಕೀಯದ ರಕ್ಷಣೆ: ದಿನೇಶ್ ಗುಂಡೂರಾವ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ</strong>: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು 'ಆಪರೇಷನ್ ಸಿಂಧೂರ'ದ ಚಿತ್ರ ಬಿಡಿಸಿ, ಉಡುಗೊರೆಯಾಗಿ ನೀಡಿರುವುದು ಗಮನ ಸೆಳೆದಿದೆ.</p><p>ಚಂದ್ರಶೇಖರ್ ಆಜಾದ್ ವಿಶ್ವವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಭಾಗಿಯಾದ ಮೋದಿ, ರಾಜ್ಯದ ₹47,600 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.</p><p>ವಿದ್ಯಾರ್ಥಿನಿಯೊಬ್ಬಳು 'ಆಪರೇಷನ್ ಸಿಂಧೂರ'ದ ಚಿತ್ರವನ್ನು ಬಿಡಿಸಿ ಕಾರ್ಯಕ್ರಮಕ್ಕೆ ತಂದಿದ್ದಳು. ಸಭೆಯ ನಡುವೆ ವಿದ್ಯಾರ್ಥಿನಿ, ಮೋದಿ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದಳು. ತಮ್ಮ ಭಾಷಣದ ನಡುವೆಯೇ ವಿದ್ಯಾರ್ಥಿನಿ ತಂದಿದ್ದ ಫೋಟೊವನ್ನು ತೆಗೆದುಕೊಂಡು ಬರುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ಆಪರೇಷನ್ ಸಿಂಧೂರದ ಬಗೆಗಿನ ವಿದ್ಯಾರ್ಥಿನಿಯ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಫೋಟೊ ಜತೆಗೆ ಹೆಸರು ಮತ್ತು ವಿಳಾಸವನ್ನು ನಮೂದಿಸಿಲು ಮೋದಿ ವೇದಿಕೆಯಿಂದಲೇ ತಿಳಿಸಿದ್ದರು. </p>.‘ಆಪರೇಷನ್ ಸಿಂಧೂರ’ ಈಗ ಶೌರ್ಯದ ಸಂಕೇತವಾಗಿದೆ: ಪ್ರಧಾನಿ ಮೋದಿ.ಕೇರಳದಲ್ಲಿ ಮಳೆ ಬಿರುಸು; ತಗ್ಗು ಪ್ರದೇಶಗಳು ಜಲಾವೃತ: ಆಶ್ರಯ ಕೇಂದ್ರಗಳಲ್ಲಿ ಜನರು. <p>ವಿದ್ಯಾರ್ಥಿನಿಗೆ ಪತ್ರ ಕಳುಹಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ.</p><p>ಇದೇ ಸಮಾವೇಶದಲ್ಲಿ ಮತ್ತೊಬ್ಬ ಹುಡುಗನು ಫೋಟೊ ಹಿಡಿದುಕೊಂಡಿರುವುದನ್ನು ಗಮನಿಸಿದ ಮೋದಿ, ನಿಮ್ಮ ಭುಜಗಳಿಗೆ ನೋವು ಬರಬಹುದು ಕೈಗಳನ್ನು ಕೆಳಗಿಳಿಸಿ ಎಂದು ಮೋದಿ ಪ್ರೀತಿಯಿಂದ ಹೇಳಿದರು.</p><p>ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.</p><p>ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.</p>.ಕಾರ್ಕಳ: ಮೆಸ್ಕಾಂ ಅಧಿಕಾರಿ ಗಿರೀಶ್ ರಾವ್ ಮನೆ, ಲಾಡ್ಜ್ ಮೇಲೆ ಲೋಕಾಯುಕ್ತ ದಾಳಿ.Mangaluru | ಮಕ್ಕಳನ್ನು ಕಳೆದುಕೊಂಡ ತಾಯಿಗೆ ಸರ್ಕಾರಿ ಉದ್ಯೋಗ ನೀಡಿ: ರವಿಕುಮಾರ್.ಪ್ರಸಿದ್ಧ ಹುಲಿ ಸಂರಕ್ಷಕ ವಾಲ್ಮೀಕ್ ಥಾಪರ್ ನಿಧನ.ಮಂಗಳೂರು | ದ್ವೇಷ ಭಾಷಣಗಾರರಿಗೆ ಸಂಘಟನೆ, ರಾಜಕೀಯದ ರಕ್ಷಣೆ: ದಿನೇಶ್ ಗುಂಡೂರಾವ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>