<p><strong>ಶ್ರೀನಗರ:</strong> ಪಹಲ್ಗಾಮ್ ದಾಳಿ ಬಳಿಕ ನಿಷ್ಕ್ರಿಯಗೊಂಡಿದ್ದ ಸ್ಯಾಟ್ಲೈಟ್ ಫೋನ್ಗಳು 2 ದಿನಗಳ ಹಿಂದೆ ಆ್ಯಕ್ಟಿವ್ ಆಗಿದ್ದವು. ಇದು 'ಆಪರೇಷನ್ ಮಹಾದೇವ' ಕಾರ್ಯಾಚರಣೆಗೆ ನೆರವಾಗಿದೆ ಎಂದು ವರದಿಯಾಗಿದೆ.</p>.<p>ದಾಳಿಕೋರರು ಬಳಸಿದ್ದಾರೆಂದು ಶಂಕಿಸಲಾದ ಹುವಾವೇ ಸ್ಯಾಟ್ಲೈಟ್ ಫೋನ್ಗಳು ಸುಮಾರು ಎರಡು ತಿಂಗಳಿಂದ ನಿಷ್ಕ್ರಿಯಗೊಂಡಿದ್ದವು. ಆದರೆ 2 ದಿನಗಳ ಹಿಂದೆ ಈ ಫೋನ್ಗಳು ದಿಢೀರ್ ಆನ್ ಆಗಿದ್ದವು. </p>.<p>ಫೋನ್ ಟ್ರ್ಯಾಕ್ ಮಾಡಿದಾಗ ಡಚಿಗಮ್ನಲ್ಲಿ ಫೋನ್ ಬಳಕೆಯಾಗಿರುವುದು ತಿಳಿದು ಬಂದಿತ್ತು. ಅಲ್ಲಿ ಜನವಸತಿ ಇಲ್ಲ. ಈ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಗುಪ್ತಚರ ವಿಭಾಗದ ಖಚಿತ ಮಾಹಿತಿ ಆಧರಿಸಿ, ಸೇನೆ ಇಂದು ಮುಂಜಾನೆ 'ಆಪರೇಷನ್ ಮಹಾದೇವ' ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.</p>.<p>ಹತ್ಯೆಯಾದ ಉಗ್ರರಲ್ಲಿ ಓರ್ವ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸುಲೇಮಾನ್ ಅಲಿಯಾಸ್ ಹಾಶಿಮ್ ಮೂಸಾ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಆತನ ಸಹಚರರಾದ ಯಾಸಿರ್ ಮತ್ತು ಅಬು ಹಮ್ಜಾ ಎಂದು ಗುರುತಿಸಲಾಗಿದೆ. ಈ ಮೂವರು ಪಾಕಿಸ್ತಾನಿ ಪ್ರಜೆಗಳು ಮತ್ತು ಎಲ್ಇಟಿ ಸದಸ್ಯರು ಎನ್ನಲಾಗಿದೆ.</p>.ಆಪರೇಷನ್ ಮಹಾದೇವ: ಪಹಲ್ಗಾಮ್ ದಾಳಿಕೋರರೆಂದು ಶಂಕಿಸಲಾದ ಮೂವರು ಭಯೋತ್ಪಾದಕರ ಹತ್ಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಪಹಲ್ಗಾಮ್ ದಾಳಿ ಬಳಿಕ ನಿಷ್ಕ್ರಿಯಗೊಂಡಿದ್ದ ಸ್ಯಾಟ್ಲೈಟ್ ಫೋನ್ಗಳು 2 ದಿನಗಳ ಹಿಂದೆ ಆ್ಯಕ್ಟಿವ್ ಆಗಿದ್ದವು. ಇದು 'ಆಪರೇಷನ್ ಮಹಾದೇವ' ಕಾರ್ಯಾಚರಣೆಗೆ ನೆರವಾಗಿದೆ ಎಂದು ವರದಿಯಾಗಿದೆ.</p>.<p>ದಾಳಿಕೋರರು ಬಳಸಿದ್ದಾರೆಂದು ಶಂಕಿಸಲಾದ ಹುವಾವೇ ಸ್ಯಾಟ್ಲೈಟ್ ಫೋನ್ಗಳು ಸುಮಾರು ಎರಡು ತಿಂಗಳಿಂದ ನಿಷ್ಕ್ರಿಯಗೊಂಡಿದ್ದವು. ಆದರೆ 2 ದಿನಗಳ ಹಿಂದೆ ಈ ಫೋನ್ಗಳು ದಿಢೀರ್ ಆನ್ ಆಗಿದ್ದವು. </p>.<p>ಫೋನ್ ಟ್ರ್ಯಾಕ್ ಮಾಡಿದಾಗ ಡಚಿಗಮ್ನಲ್ಲಿ ಫೋನ್ ಬಳಕೆಯಾಗಿರುವುದು ತಿಳಿದು ಬಂದಿತ್ತು. ಅಲ್ಲಿ ಜನವಸತಿ ಇಲ್ಲ. ಈ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಗುಪ್ತಚರ ವಿಭಾಗದ ಖಚಿತ ಮಾಹಿತಿ ಆಧರಿಸಿ, ಸೇನೆ ಇಂದು ಮುಂಜಾನೆ 'ಆಪರೇಷನ್ ಮಹಾದೇವ' ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.</p>.<p>ಹತ್ಯೆಯಾದ ಉಗ್ರರಲ್ಲಿ ಓರ್ವ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸುಲೇಮಾನ್ ಅಲಿಯಾಸ್ ಹಾಶಿಮ್ ಮೂಸಾ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಆತನ ಸಹಚರರಾದ ಯಾಸಿರ್ ಮತ್ತು ಅಬು ಹಮ್ಜಾ ಎಂದು ಗುರುತಿಸಲಾಗಿದೆ. ಈ ಮೂವರು ಪಾಕಿಸ್ತಾನಿ ಪ್ರಜೆಗಳು ಮತ್ತು ಎಲ್ಇಟಿ ಸದಸ್ಯರು ಎನ್ನಲಾಗಿದೆ.</p>.ಆಪರೇಷನ್ ಮಹಾದೇವ: ಪಹಲ್ಗಾಮ್ ದಾಳಿಕೋರರೆಂದು ಶಂಕಿಸಲಾದ ಮೂವರು ಭಯೋತ್ಪಾದಕರ ಹತ್ಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>