ಹೆಸರು ಹೇಗೆ ಬಂತು?: ಈ ಗ್ರಾಮದಲ್ಲಿ ಮೊದಲು ಮುಸ್ಲಿಂ ಕುಟುಂಬಗಳು ವಾಸವಿದ್ದವು. 1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲಿ ಇಲ್ಲಿನ ಮುಸ್ಲಿಮರೆಲ್ಲರೂ ಪೂರ್ವ ಪಾಕಿಸ್ತಾನಕ್ಕೆ (ಈಗಿನ ಬಾಂಗ್ಲಾ ದೇಶ) ತೆರಳಿದರು. ಮುಸ್ಲಿಮರು ಗ್ರಾಮದಲ್ಲಿ ಹೊಂದಿದ್ದ ತಮ್ಮ ಭೂಮಿಯನ್ನು ಬುಡಕಟ್ಟು ಜನಾಂಗ
ದವರಿಗೆ ಕೊಡುಗೆಯಾಗಿ ನೀಡಿ, ಇದಕ್ಕೆ ಪಾಕಿಸ್ತಾನ ಎಂಬ ಹೆಸರನ್ನೇ ಮುಂದುವರಿಸಬೇಕು ಎಂದು ಮನವಿ ಮಾಡಿದ್ದರು. ಅದಕ್ಕಾಗಿಯೇ ಈ ಹೆಸರು ಇನ್ನೂ ಚಾಲ್ತಿಯಲ್ಲಿದೆ.‘ಗ್ರಾಮಸ್ಥರ ಮನವಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಕಳುಹಿಸಲಾಗಿದೆ’ ಎಂದು ಶ್ರೀನಗರದ ವೃತ್ತ ಅಧಿಕಾರಿ ನಂದನ್ ಕುಮಾರ್ ತಿಳಿಸಿದ್ದಾರೆ.