<p><strong>ಮಂಡಿ</strong>: ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದಾಗ ಭಾರಿ ಗಾಳಿ ಬೀಸಿದ್ದರಿಂದ, ನಿಯಂತ್ರಣ ಕಳೆದುಕೊಂಡ ಪ್ಯಾರಾಗ್ಲೈಡರ್ ಒಬ್ಬರು ಜಿಲ್ಲೆಯ ಗ್ರಾಮವೊಂದರ ಕಟ್ಟಡದ ಮಹಡಿ ಮೇಲೆ ಬಿದ್ದು ಗಾಯಗೊಂಡಿದ್ದಾರೆ.</p>.<p>ಬಿಹಾರದ ವಿಜಯ್ಕುಮಾರ್ ಗಾಯಗೊಂಡವರು.</p>.<p>ಸ್ನೇಹಿತರೊಂದಿಗೆ ವಿಜಯ್ ಪ್ಯಾರಾಗ್ಲೈಂಡಿಗ್ನಲ್ಲಿ ಪಾಲ್ಗೊಂಡಿದ್ದರು. ಗೆಳೆಯರು ನಿಗದಿಪಡಿಸಿದ್ದ ಸ್ಥಳದಲ್ಲಿ ನಿಖರವಾಗಿ ಇಳಿದರೆ, ಇವರು 20 ಕಿ.ಮೀ. ದೂರಕ್ಕೆ ತೆರಳಿದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.</p>.<p>ಪ್ಯಾರಾಗ್ಲೈಂಡಿಗ್ನಲ್ಲಿ 18 ವರ್ಷಗಳ ಅನುಭವ ಹೊಂದಿರುವ ಇವರು, ಬಾನಿನಿಂದ ನೆಲಕ್ಕೆ ಇಳಿಯುವಾಗ ನಿಯಂತ್ರಣ ತಪ್ಪಿ ಮಂಡಿ ಜಿಲ್ಲೆಯ ಜೋಗಿಂದರ್ ನಗರದ ಪೆಹಲುಮ್ ಗ್ರಾಮದ ಕಟ್ಟಡವೊಂದರ ಮಹಡಿ ಮೇಲೆ ಬಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.</p>.<p>ವೈದ್ಯರ ಶಿಫಾರಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾಂಗರಾ ಜಿಲ್ಲೆಯ ಟಾಂಡಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p>.<p>ವಿಜಯ್ಕುಮಾರ್ ಅವರ ಕೈ ಹಾಗೂ ಕಾಲಿನ ಮೂಳೆಗಳು ಮುರಿದಿವೆ ಎಂದು ಜೋಗಿಂದರ್ನ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡಿ</strong>: ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದಾಗ ಭಾರಿ ಗಾಳಿ ಬೀಸಿದ್ದರಿಂದ, ನಿಯಂತ್ರಣ ಕಳೆದುಕೊಂಡ ಪ್ಯಾರಾಗ್ಲೈಡರ್ ಒಬ್ಬರು ಜಿಲ್ಲೆಯ ಗ್ರಾಮವೊಂದರ ಕಟ್ಟಡದ ಮಹಡಿ ಮೇಲೆ ಬಿದ್ದು ಗಾಯಗೊಂಡಿದ್ದಾರೆ.</p>.<p>ಬಿಹಾರದ ವಿಜಯ್ಕುಮಾರ್ ಗಾಯಗೊಂಡವರು.</p>.<p>ಸ್ನೇಹಿತರೊಂದಿಗೆ ವಿಜಯ್ ಪ್ಯಾರಾಗ್ಲೈಂಡಿಗ್ನಲ್ಲಿ ಪಾಲ್ಗೊಂಡಿದ್ದರು. ಗೆಳೆಯರು ನಿಗದಿಪಡಿಸಿದ್ದ ಸ್ಥಳದಲ್ಲಿ ನಿಖರವಾಗಿ ಇಳಿದರೆ, ಇವರು 20 ಕಿ.ಮೀ. ದೂರಕ್ಕೆ ತೆರಳಿದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.</p>.<p>ಪ್ಯಾರಾಗ್ಲೈಂಡಿಗ್ನಲ್ಲಿ 18 ವರ್ಷಗಳ ಅನುಭವ ಹೊಂದಿರುವ ಇವರು, ಬಾನಿನಿಂದ ನೆಲಕ್ಕೆ ಇಳಿಯುವಾಗ ನಿಯಂತ್ರಣ ತಪ್ಪಿ ಮಂಡಿ ಜಿಲ್ಲೆಯ ಜೋಗಿಂದರ್ ನಗರದ ಪೆಹಲುಮ್ ಗ್ರಾಮದ ಕಟ್ಟಡವೊಂದರ ಮಹಡಿ ಮೇಲೆ ಬಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.</p>.<p>ವೈದ್ಯರ ಶಿಫಾರಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾಂಗರಾ ಜಿಲ್ಲೆಯ ಟಾಂಡಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p>.<p>ವಿಜಯ್ಕುಮಾರ್ ಅವರ ಕೈ ಹಾಗೂ ಕಾಲಿನ ಮೂಳೆಗಳು ಮುರಿದಿವೆ ಎಂದು ಜೋಗಿಂದರ್ನ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>