ಪಣಜಿ: ಇತ್ತೀಚೆಗೆ ನಿಧನರಾದ, ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರ್ರೀಕರ್ ಅವರ ಇಬ್ಬರು ಪುತ್ರರು ತಾವು ರಾಜಕೀಯ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದ್ದಾರೆ.
‘ರಾಜ್ಯ ಮತ್ತು ದೇಶಕ್ಕೆ ನಮ್ಮ ತಂದೆಯವರು ತೋರಿದ ನಿಷ್ಠೆಯ ಪರಂಪರೆಯನ್ನು ಮುಂದುವರಿಸಬೇಕಿದೆ ಎಂಬುದಾಗಿ ಪರ್ರೀಕರ್ ಅವರ ಪುತ್ರರಾದ ಉತ್ಪಲ್ ಹಾಗೂ ಅಭಿಜಾತ್ ನೀಡಿರುವ ಪ್ರಕಟಣೆ, ಅವರಿಬ್ಬರು ರಾಜಕೀಯ ಪ್ರವೇಶಿಸುತ್ತಾರೆ ಎಂಬ ಮಾತಿಗೆ ಪುಷ್ಟಿ ನೀಡುತ್ತದೆ’ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಧಾನಸಭೆಗೆ ನಡೆಯುವ ಉಪಚುನಾವಣೆ ಸಂದರ್ಭದಲ್ಲಿ ಈ ಇಬ್ಬರು ರಾಜಕೀಯಕ್ಕೆ ಧುಮುಕಬಹುದು .