<p><strong>ಜೋಧಪುರ</strong>: ಜೋಧಪುರದಿಂದ ಬೆಂಗಳೂರಿಗೆ ಮಂಗಳವಾರ ಬೆಳಿಗ್ಗೆ ಹೊರಡಲಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಪ್ಯಾನಿಕ್ ಬಟನ್ (ಅಪಾಯ ಸೂಚನಾ ಒತ್ತುಗುಂಡಿ) ಒತ್ತಿದ್ದು ಕೆಲ ಕಾಲ ಗೊಂದಲ, ಆತಂಕಕ್ಕೆ ಕಾರಣವಾಗಿತ್ತು.</p>.<p>ವಿಮಾನವು (6ಇ–603) ರನ್ವೇಗೆ ಸಾಗಿ, ಬೆಳಿಗ್ಗೆ 10.05ಕ್ಕೆ ಟೇಕಾಫ್ ಆಗಬೇಕಿತ್ತು.</p>.<p>ಈ ಬೆಳವಣಿಗೆ ಬೆನ್ನಲ್ಲೇ, ಸ್ಥಳಕ್ಕೆ ದೌಡಾಯಿಸಿದ ವಿಮಾನನಿಲ್ದಾಣ ಸಿಬ್ಬಂದಿ, ಪ್ಯಾನಿಕ್ ಬಟನ್ ಒತ್ತಿದ್ದ ಪ್ರಯಾಣಿಕ ಸಿರಾಜ್ ಕಿದ್ವಾಯಿ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದರು.</p>.<p>‘ಸಿರಾಜ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಅವರ ಈ ಕೃತ್ಯದಲ್ಲಿ ಯಾವುದೇ ಶಂಕಾಸ್ಪದವೇನೂ ಕಂಡುಬರದ ಕಾರಣ ಅವರನ್ನು ಬಿಟ್ಟು ಕಳಿಸಲಾಯಿತು. ವಿಮಾನವು 20 ನಿಮಿಷ ತಡವಾಗಿ ಪ್ರಯಾಣ ಬೆಳೆಸಿತು’ ಎಂದು ವಿಮಾನನಿಲ್ದಾಣ ಠಾಣೆ ಪೊಲೀಸ್ ಅಧಿಕಾರಿ ಸುರೇಶ್ ಚೌಧರಿ ತಿಳಿಸಿದ್ದಾರೆ.</p>.<p>ಸಿರಾಜ್, ಬ್ಯಾಂಕ್ ಅಧಿಕಾರಿ. ತಾವು ಕುಳಿತಿದ್ದ ಸೀಟಿನ ಬಳಿಯೇ ಇದ್ದ ಪ್ಯಾನಿಕ್ ಬಟನ್ಅನ್ನು ಆಕಸ್ಮಿಕವಾಗಿ ಅವರು ಒತ್ತಿದ್ದಾರೆ ಎಂದೂ ತಿಳಿಸಿದ್ದಾರೆ. ಆದರೆ, ಸಿರಾಜ್ ಈ ವಿಮಾನ ತಪ್ಪಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೋಧಪುರ</strong>: ಜೋಧಪುರದಿಂದ ಬೆಂಗಳೂರಿಗೆ ಮಂಗಳವಾರ ಬೆಳಿಗ್ಗೆ ಹೊರಡಲಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಪ್ಯಾನಿಕ್ ಬಟನ್ (ಅಪಾಯ ಸೂಚನಾ ಒತ್ತುಗುಂಡಿ) ಒತ್ತಿದ್ದು ಕೆಲ ಕಾಲ ಗೊಂದಲ, ಆತಂಕಕ್ಕೆ ಕಾರಣವಾಗಿತ್ತು.</p>.<p>ವಿಮಾನವು (6ಇ–603) ರನ್ವೇಗೆ ಸಾಗಿ, ಬೆಳಿಗ್ಗೆ 10.05ಕ್ಕೆ ಟೇಕಾಫ್ ಆಗಬೇಕಿತ್ತು.</p>.<p>ಈ ಬೆಳವಣಿಗೆ ಬೆನ್ನಲ್ಲೇ, ಸ್ಥಳಕ್ಕೆ ದೌಡಾಯಿಸಿದ ವಿಮಾನನಿಲ್ದಾಣ ಸಿಬ್ಬಂದಿ, ಪ್ಯಾನಿಕ್ ಬಟನ್ ಒತ್ತಿದ್ದ ಪ್ರಯಾಣಿಕ ಸಿರಾಜ್ ಕಿದ್ವಾಯಿ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದರು.</p>.<p>‘ಸಿರಾಜ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಅವರ ಈ ಕೃತ್ಯದಲ್ಲಿ ಯಾವುದೇ ಶಂಕಾಸ್ಪದವೇನೂ ಕಂಡುಬರದ ಕಾರಣ ಅವರನ್ನು ಬಿಟ್ಟು ಕಳಿಸಲಾಯಿತು. ವಿಮಾನವು 20 ನಿಮಿಷ ತಡವಾಗಿ ಪ್ರಯಾಣ ಬೆಳೆಸಿತು’ ಎಂದು ವಿಮಾನನಿಲ್ದಾಣ ಠಾಣೆ ಪೊಲೀಸ್ ಅಧಿಕಾರಿ ಸುರೇಶ್ ಚೌಧರಿ ತಿಳಿಸಿದ್ದಾರೆ.</p>.<p>ಸಿರಾಜ್, ಬ್ಯಾಂಕ್ ಅಧಿಕಾರಿ. ತಾವು ಕುಳಿತಿದ್ದ ಸೀಟಿನ ಬಳಿಯೇ ಇದ್ದ ಪ್ಯಾನಿಕ್ ಬಟನ್ಅನ್ನು ಆಕಸ್ಮಿಕವಾಗಿ ಅವರು ಒತ್ತಿದ್ದಾರೆ ಎಂದೂ ತಿಳಿಸಿದ್ದಾರೆ. ಆದರೆ, ಸಿರಾಜ್ ಈ ವಿಮಾನ ತಪ್ಪಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>