<p><strong>ತಿರುವನಂತಪುರ: ‘</strong>ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನೀಡಿರುವುದನ್ನು ಟೀಕಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಇದು ದೇಶದ ಸೌಹಾರ್ದ ಕದಡುವಂತಹ ಸಿನಿಮಾಗೆ ಮನ್ನಣೆ ನೀಡಿದಂತಾಗಿದೆ’ ಎಂದಿದ್ದಾರೆ. </p>.<p>‘ರಾಷ್ಟ್ರ ಪ್ರಶಸ್ತಿ ಸಮಿತಿಯ ತೀರ್ಪುಗಾರರು ದೇಶದ ಏಕತೆಯನ್ನು ಕದಡುವ ಹೂರಣ ಇರುವ ಇಂತಹ ಸಿನಿಮಾಗೆ ಪ್ರಶಸ್ತಿ ನೀಡುವ ಮೂಲಕ ಕೇರಳದ ಕಮ್ಯುನಿಸಂ ಅನ್ನು ಗುರಿಯಾಗಿಸಿಕೊಂಡ ಧೋರಣೆಯನ್ನು ಸಮರ್ಥಿಸಿದ್ದಾರೆ’ ಎಂದು ವಿಜಯನ್ ಅವರು ಶನಿವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. </p>.<h2>ಸಂಘ ಪರಿವಾರದ ರಾಜಕೀಯ ಕಾರ್ಯಸೂಚಿ</h2>.<p>ಕೇರಳ ಸಂಸ್ಕೃತಿ ಸಚಿವ ಸಜಿ ಚೆರಿಯನ್, ‘ಇದು ಸಂಘ ಪರಿವಾರದ ರಾಜಕೀಯ ಕಾರ್ಯಸೂಚಿ’ ಎಂದು ಆರೋಪಿಸಿದ್ದಾರೆ.</p>.<p>ಈ ಚಿತ್ರವು ವಿಭಜನೆಯನ್ನು ಉತ್ತೇಜಿಸುತ್ತದೆ. ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಮತ್ತು ಕೇರಳದ ಜನರನ್ನು ಅವಮಾನಿಸುತ್ತದೆ ಎಂದಿದ್ದಾರೆ.</p>.<p>‘ನಮ್ಮ ನಟಿ–ನಟರಾದ ಊರ್ವಶಿ ಹಾಗೂ ವಿಜಯರಾಘವನ್ ಅವರು ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯ ಸಂಗತಿ. ಆದರೆ, ಅವರ ಜೊತೆಯಲ್ಲಿ ‘ಕೇರಳ ಸ್ಟೋರಿ’ ಚಿತ್ರವನ್ನು ಹೇಗೆ ಗುರುತಿಸುವುದು? ಯಾವ ಆಧಾರದ ಮೇಲೆ ಪ್ರಶಸ್ತಿ ನೀಡುವ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.</p>.<p>ದೇಶದಲ್ಲಿ ಸಂಘ ಪರಿವಾರದ ರಾಜಕೀಯವು ಭಯ ಹುಟ್ಟಿಸುತ್ತಿದೆ. ದ್ವೇಷವನ್ನು ಹರಡಲು ಆಡಳಿತ ಪಕ್ಷವು ಸಣ್ಣ ಅವಕಾಶವನ್ನೂ ಬಳಸಿಕೊಳ್ಳುತ್ತಿದೆ. ಅದರ ಒಂದು ಭಾಗವೇ ಈ ಪ್ರಶಸ್ತಿ ಎಂದು ಆರೋಪಿಸಿದ್ದಾರೆ.</p>.<p>ತೀರ್ಪುಗಾರರ ನಿರ್ಧಾರವನ್ನು ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರೂ ಟೀಕಿಸಿದ್ದು, ‘ದಿ ಕೇರಳ ಸ್ಟೋರಿಯು ರಾಜ್ಯದ ವಿರುದ್ಧ ಸುಳ್ಳು ಅಭಿಯಾನ’ ಎಂದು ಕರೆದಿದ್ದಾರೆ. </p>.<p>ಕೇರಳವು ಲವ್ ಜಿಹಾದ್ನ ಕೇಂದ್ರವಾಗಿದೆ. ಅವರ ಧರ್ಮಕ್ಕೆ ಮತಾಂತರಗೊಳಿಸಲು ಸಿರಿಯಾಕ್ಕೆ ಕರೆದೊಯ್ಯಲಾಗುತ್ತದೆ ಎಂದು ಈ ಸಿನಿಮಾ ಕಥೆ ಹೇಳುತ್ತದೆ. ಕೇರಳದ ಜನರು ಇದನ್ನು ನಂಬುವುದಿಲ್ಲ. ಆದರೆ, ಹೊರ ರಾಜ್ಯ ಹಾಗೂ ವಿದೇಶದ ಜನರಿಗೆ ಸತ್ಯ ಗೊತ್ತಿರುವುದಿಲ್ಲ ಎಂದಿದ್ದಾರೆ.</p>.<p>2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ತೀರ್ಪುಗಾರರ ಮಂಡಳಿಯ ಅಧ್ಯಕ್ಷ, ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ಅವರು ದೆಹಲಿಯಲ್ಲಿ ಶುಕ್ರವಾರ ಘೋಷಿಸಿದ್ದರು.</p>.<p>‘ದಿ ಕೇರಳ ಸ್ಟೋರಿ’ ಚಿತ್ರಕ್ಕಾಗಿ ಸುದಿಪ್ತೋ ಸೇನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ’ ದೊರೆತಿದೆ. ಇದೇ ಚಿತ್ರಕ್ಕೆ ‘ಅತ್ಯುತ್ತಮ ಛಾಯಾಚಿತ್ರಗ್ರಹಣ ಪ್ರಶಸ್ತಿ’ಯೂ ಸಂದಿದೆ.</p>.The Kerala Storyಗೆ ರಾಷ್ಟ್ರೀಯ ಪ್ರಶಸ್ತಿ: RSS ಅಜೆಂಡಾ ಎಂದ ಕೇರಳ ಸಚಿವ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ: ‘</strong>ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನೀಡಿರುವುದನ್ನು ಟೀಕಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಇದು ದೇಶದ ಸೌಹಾರ್ದ ಕದಡುವಂತಹ ಸಿನಿಮಾಗೆ ಮನ್ನಣೆ ನೀಡಿದಂತಾಗಿದೆ’ ಎಂದಿದ್ದಾರೆ. </p>.<p>‘ರಾಷ್ಟ್ರ ಪ್ರಶಸ್ತಿ ಸಮಿತಿಯ ತೀರ್ಪುಗಾರರು ದೇಶದ ಏಕತೆಯನ್ನು ಕದಡುವ ಹೂರಣ ಇರುವ ಇಂತಹ ಸಿನಿಮಾಗೆ ಪ್ರಶಸ್ತಿ ನೀಡುವ ಮೂಲಕ ಕೇರಳದ ಕಮ್ಯುನಿಸಂ ಅನ್ನು ಗುರಿಯಾಗಿಸಿಕೊಂಡ ಧೋರಣೆಯನ್ನು ಸಮರ್ಥಿಸಿದ್ದಾರೆ’ ಎಂದು ವಿಜಯನ್ ಅವರು ಶನಿವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. </p>.<h2>ಸಂಘ ಪರಿವಾರದ ರಾಜಕೀಯ ಕಾರ್ಯಸೂಚಿ</h2>.<p>ಕೇರಳ ಸಂಸ್ಕೃತಿ ಸಚಿವ ಸಜಿ ಚೆರಿಯನ್, ‘ಇದು ಸಂಘ ಪರಿವಾರದ ರಾಜಕೀಯ ಕಾರ್ಯಸೂಚಿ’ ಎಂದು ಆರೋಪಿಸಿದ್ದಾರೆ.</p>.<p>ಈ ಚಿತ್ರವು ವಿಭಜನೆಯನ್ನು ಉತ್ತೇಜಿಸುತ್ತದೆ. ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಮತ್ತು ಕೇರಳದ ಜನರನ್ನು ಅವಮಾನಿಸುತ್ತದೆ ಎಂದಿದ್ದಾರೆ.</p>.<p>‘ನಮ್ಮ ನಟಿ–ನಟರಾದ ಊರ್ವಶಿ ಹಾಗೂ ವಿಜಯರಾಘವನ್ ಅವರು ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯ ಸಂಗತಿ. ಆದರೆ, ಅವರ ಜೊತೆಯಲ್ಲಿ ‘ಕೇರಳ ಸ್ಟೋರಿ’ ಚಿತ್ರವನ್ನು ಹೇಗೆ ಗುರುತಿಸುವುದು? ಯಾವ ಆಧಾರದ ಮೇಲೆ ಪ್ರಶಸ್ತಿ ನೀಡುವ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.</p>.<p>ದೇಶದಲ್ಲಿ ಸಂಘ ಪರಿವಾರದ ರಾಜಕೀಯವು ಭಯ ಹುಟ್ಟಿಸುತ್ತಿದೆ. ದ್ವೇಷವನ್ನು ಹರಡಲು ಆಡಳಿತ ಪಕ್ಷವು ಸಣ್ಣ ಅವಕಾಶವನ್ನೂ ಬಳಸಿಕೊಳ್ಳುತ್ತಿದೆ. ಅದರ ಒಂದು ಭಾಗವೇ ಈ ಪ್ರಶಸ್ತಿ ಎಂದು ಆರೋಪಿಸಿದ್ದಾರೆ.</p>.<p>ತೀರ್ಪುಗಾರರ ನಿರ್ಧಾರವನ್ನು ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರೂ ಟೀಕಿಸಿದ್ದು, ‘ದಿ ಕೇರಳ ಸ್ಟೋರಿಯು ರಾಜ್ಯದ ವಿರುದ್ಧ ಸುಳ್ಳು ಅಭಿಯಾನ’ ಎಂದು ಕರೆದಿದ್ದಾರೆ. </p>.<p>ಕೇರಳವು ಲವ್ ಜಿಹಾದ್ನ ಕೇಂದ್ರವಾಗಿದೆ. ಅವರ ಧರ್ಮಕ್ಕೆ ಮತಾಂತರಗೊಳಿಸಲು ಸಿರಿಯಾಕ್ಕೆ ಕರೆದೊಯ್ಯಲಾಗುತ್ತದೆ ಎಂದು ಈ ಸಿನಿಮಾ ಕಥೆ ಹೇಳುತ್ತದೆ. ಕೇರಳದ ಜನರು ಇದನ್ನು ನಂಬುವುದಿಲ್ಲ. ಆದರೆ, ಹೊರ ರಾಜ್ಯ ಹಾಗೂ ವಿದೇಶದ ಜನರಿಗೆ ಸತ್ಯ ಗೊತ್ತಿರುವುದಿಲ್ಲ ಎಂದಿದ್ದಾರೆ.</p>.<p>2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ತೀರ್ಪುಗಾರರ ಮಂಡಳಿಯ ಅಧ್ಯಕ್ಷ, ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ಅವರು ದೆಹಲಿಯಲ್ಲಿ ಶುಕ್ರವಾರ ಘೋಷಿಸಿದ್ದರು.</p>.<p>‘ದಿ ಕೇರಳ ಸ್ಟೋರಿ’ ಚಿತ್ರಕ್ಕಾಗಿ ಸುದಿಪ್ತೋ ಸೇನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ’ ದೊರೆತಿದೆ. ಇದೇ ಚಿತ್ರಕ್ಕೆ ‘ಅತ್ಯುತ್ತಮ ಛಾಯಾಚಿತ್ರಗ್ರಹಣ ಪ್ರಶಸ್ತಿ’ಯೂ ಸಂದಿದೆ.</p>.The Kerala Storyಗೆ ರಾಷ್ಟ್ರೀಯ ಪ್ರಶಸ್ತಿ: RSS ಅಜೆಂಡಾ ಎಂದ ಕೇರಳ ಸಚಿವ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>