ನೇತಾಜಿ ಅವರ 127ನೇ ಜನ್ಮ ಜಯಂತಿ ಅಂಗವಾಗಿ ಆಚರಿಸಲಾದ ಪರಾಕ್ರಮ ದಿವಸದ ಹಿನ್ನೆಲೆಯಲ್ಲಿ ಪಟ್ನಾಯಕ್ ಮರಳು ಕಲಾಕೃತಿ ನಿರ್ಮಿಸಿದ್ದರು.
7 ಅಡಿ ಎತ್ತರದ ಈ ಕಲಾಕೃತಿಗೆ 8 ಟನ್ ಮರಳು, 500 ಸ್ಟೀಲ್ ಬಟ್ಟಲುಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದರು.
ಪ್ರಧಾನಿಯವರನ್ನು ಭೇಟಿಯಾಗಿದ್ದು ಮತ್ತು ಪ್ರಶಂಸೆ ಸಿಕ್ಕಿದ್ದು ಅಪೂರ್ವ ಕ್ಷಣವಾಗಿದೆ ಎಂದು ಪಟ್ನಾಯಕ್ ಹೇಳಿದ್ದಾರೆ.
ನಾವು ಬೇಟಿಯಾದಾಗ ‘ಜೈ ಜಗನ್ನಾಥ’ಎಂದು ಮೋದಿ ಹೇಳಿದರು ಎಂಬುದಾಗಿ ಕಲಾವಿದ ಹೇಳಿದ್ದಾರೆ.