ವಿಶ್ವ ಜಲದಿನಾಚರಣೆ ಅಂಗವಾಗಿ ‘ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್‘ ಆಂದೋಲನಕ್ಕೆ ಸೋಮವಾರ ವರ್ಚುವಲ್ ಆಗಿ ಚಾಲನೆ ನೀಡಿ ಮಾತನಾಡಿದ ಅವರು, ‘ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ವ್ಯರ್ಥವಾಗುತ್ತಿದ್ದು, ಇದು ಆತಂಕದ ವಿಷಯವಾಗಿದೆ. ಸುರಿಯುವ ಮಳೆ ನೀರನ್ನು ಬಹುಪಾಲು ಸಂರಕ್ಷಿಸಿದರೆ, ಅಂತರ್ಜಲದ ಮೇಲೆ ಅವಲಂಬನೆ ಆಗುವುದನ್ನು ತಪ್ಪಿಸಬಹುದು‘ ಎಂದು ಅವರು ಹೇಳಿದರು.