<p><strong>ಕುಶಿನಗರ (ಉತ್ತರ ಪ್ರದೇಶ):</strong> ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನುಪ್ರಧಾನಿ ನರೇಂದ್ರ ಮೋದಿಅವರು ಬುಧವಾರ ಉದ್ಘಾಟಿಸಿದರು.</p>.<p>ಉತ್ತರ ಪ್ರದೇಶ ರಾಜ್ಯದಲ್ಲಿರುವ ಕುಶಿನಗರ, ಭಗವಾನ್ ಗೌತಮ ಬುದ್ಧ ತೀರಿಕೊಂಡ ತಾಣ. ಇದನ್ನು ಬುದ್ಧ ಮಹಾಪರಿನಿರ್ವಾಣಗೊಂಡ ಸ್ಥಳ ಎಂದು ಕರೆಯುತ್ತಾರೆ. ಜಗತ್ತಿನಲ್ಲಿರುವ ಬೌದ್ಧ ತಾಣಗಳಲ್ಲಿ ಇದು ಬಹಳ ಪ್ರಮುಖವಾದ ತಾಣ.</p>.<p>ಜಗತ್ತಿನ ಬೇರೆ ಬೇರೆ ಭಾಗದಲ್ಲಿರುವ ಬೌದ್ಧ ಕ್ಷೇತ್ರಗಳನ್ನು ತಲಪಲು ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿರುವ ಬೌದ್ಧರ ಅನುಯಾಯಿಗಳಿಗೆ ಬುದ್ಧನ ಪರಿನಿರ್ವಾಣ ಸ್ಥಳಕ್ಕೆ ಸುಲಭವಾಗಿ ತಲುಪಲು ಈ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.</p>.<p>3600 ಚದರ ಮೀಟರ್ ವಿಸ್ತೀರ್ಣದಲ್ಲಿರುವ ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ₹260 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಸಹಯೋಗದಲ್ಲಿ ನಿರ್ಮಾಣವಾಗಿದೆ.</p>.<p>ಈ ವಿಮಾನ ನಿಲ್ದಾಣ ದೇಶ ಮತ್ತು ವಿದೇಶಗಳಲ್ಲಿರುವ ಬೌದ್ಧ ಧರ್ಮದ ಅನುಯಾಯಿಗಳನ್ನು ಆಕರ್ಷಿಸಲು ನೆರವಾಗುತ್ತದೆ. ಬೌದ್ಧ ಧರ್ಮೀಯ ಆಧಾರಿತ ಸರ್ಕ್ಯೂಟ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ.</p>.<p>ಈ ವಿಮಾನ ನಿಲ್ದಾಣದ ಮೂಲಕ ಕಡಿಮೆ ಸಮಯದಲ್ಲಿ ದೇಶದಲ್ಲಿರುವ ಬೌದ್ಧ ಕ್ಷೇತ್ರಗಳಾದ ಲುಂಬಿನಿ, ಬೋಧಗಯಾ, ಸಾರಾನಾಥ, ಕುಶಿನಗರ, ಶ್ರಾವಸ್ತಿ, ರಾಜಗೀರ್, ಸಂಕಿಸಾ ಮತ್ತು ವೈಶಾಲಿ ಸ್ಥಳಗಳಿಗೆ ಪ್ರಯಾಣಿಸುವಂತಹ ಯೋಜನೆಯನ್ನು ಸಿದ್ಧಪಡಿಸಲಾಗುವುದು‘ ಎಂದು ಸೋಮವಾರ ಬಿಡುಗಡೆ ಮಾಡಿರುವ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಿನಗರ (ಉತ್ತರ ಪ್ರದೇಶ):</strong> ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನುಪ್ರಧಾನಿ ನರೇಂದ್ರ ಮೋದಿಅವರು ಬುಧವಾರ ಉದ್ಘಾಟಿಸಿದರು.</p>.<p>ಉತ್ತರ ಪ್ರದೇಶ ರಾಜ್ಯದಲ್ಲಿರುವ ಕುಶಿನಗರ, ಭಗವಾನ್ ಗೌತಮ ಬುದ್ಧ ತೀರಿಕೊಂಡ ತಾಣ. ಇದನ್ನು ಬುದ್ಧ ಮಹಾಪರಿನಿರ್ವಾಣಗೊಂಡ ಸ್ಥಳ ಎಂದು ಕರೆಯುತ್ತಾರೆ. ಜಗತ್ತಿನಲ್ಲಿರುವ ಬೌದ್ಧ ತಾಣಗಳಲ್ಲಿ ಇದು ಬಹಳ ಪ್ರಮುಖವಾದ ತಾಣ.</p>.<p>ಜಗತ್ತಿನ ಬೇರೆ ಬೇರೆ ಭಾಗದಲ್ಲಿರುವ ಬೌದ್ಧ ಕ್ಷೇತ್ರಗಳನ್ನು ತಲಪಲು ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿರುವ ಬೌದ್ಧರ ಅನುಯಾಯಿಗಳಿಗೆ ಬುದ್ಧನ ಪರಿನಿರ್ವಾಣ ಸ್ಥಳಕ್ಕೆ ಸುಲಭವಾಗಿ ತಲುಪಲು ಈ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.</p>.<p>3600 ಚದರ ಮೀಟರ್ ವಿಸ್ತೀರ್ಣದಲ್ಲಿರುವ ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ₹260 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಸಹಯೋಗದಲ್ಲಿ ನಿರ್ಮಾಣವಾಗಿದೆ.</p>.<p>ಈ ವಿಮಾನ ನಿಲ್ದಾಣ ದೇಶ ಮತ್ತು ವಿದೇಶಗಳಲ್ಲಿರುವ ಬೌದ್ಧ ಧರ್ಮದ ಅನುಯಾಯಿಗಳನ್ನು ಆಕರ್ಷಿಸಲು ನೆರವಾಗುತ್ತದೆ. ಬೌದ್ಧ ಧರ್ಮೀಯ ಆಧಾರಿತ ಸರ್ಕ್ಯೂಟ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ.</p>.<p>ಈ ವಿಮಾನ ನಿಲ್ದಾಣದ ಮೂಲಕ ಕಡಿಮೆ ಸಮಯದಲ್ಲಿ ದೇಶದಲ್ಲಿರುವ ಬೌದ್ಧ ಕ್ಷೇತ್ರಗಳಾದ ಲುಂಬಿನಿ, ಬೋಧಗಯಾ, ಸಾರಾನಾಥ, ಕುಶಿನಗರ, ಶ್ರಾವಸ್ತಿ, ರಾಜಗೀರ್, ಸಂಕಿಸಾ ಮತ್ತು ವೈಶಾಲಿ ಸ್ಥಳಗಳಿಗೆ ಪ್ರಯಾಣಿಸುವಂತಹ ಯೋಜನೆಯನ್ನು ಸಿದ್ಧಪಡಿಸಲಾಗುವುದು‘ ಎಂದು ಸೋಮವಾರ ಬಿಡುಗಡೆ ಮಾಡಿರುವ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>