‘ಸ್ವಾತಂತ್ರ್ಯ ನಂತರ ಭಾರತವೂ ಹೊಸ ಪಯಣ ಆರಂಭಿಸಿದೆ. ಮುಂದಿನ 25 ವರ್ಷಗಳ ನಂತರ ದೇಶ ಸಂಪೂರ್ಣ ಸ್ವಾವಲಂಬಿಯಾಗಬೇಕು. ಈ ಗುರಿ ಸಾಧನೆಗೆ ಸಾಕಷ್ಟು ಕಾರ್ಯವಾಗಬೇಕಾಗುತ್ತದೆ. ಆದರೆ, ಎರಡು ಪೀಳಿಗೆಗಳನ್ನು ಕಂಡಿರುವ ದೇಶ, ಸಾಕಷ್ಟು ಸಮಯವನ್ನೂ ವ್ಯರ್ಥ ಮಾಡಿದೆ. ಇನ್ನು ಮುಂದೆ ಎರಡು ನಿಮಿಷವನ್ನು ಸಹ ನಾವು ವ್ಯರ್ಥ ಮಾಡಬಾರದು’ ಎಂದು ಅವರು ಹೇಳಿದರು.