<p>ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ಸೃಷ್ಟಿ, ನನ್ನನ್ನು ಜೈಲಿಗೆ ಕಳಿಸಲು ಆತುರ: ಡಿ.ಕೆ.ಶಿವಕುಮಾರ್ ಲೇವಡಿ, ಮೈಸೂರಿಗೂ ಬೆಂಗಳೂರು ಮಾದರಿಯ ಮೆಟ್ರೊ ರೈಲು: ಪ್ರಧಾನಿ ನರೇಂದ್ರ ಮೋದಿ ಸುಳಿವು ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.</p>.<p>ದೇಶದ ಆಗ್ನೇಯ ಹಾಗೂ ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಅಕ್ಟೋಬರ್ 21ರಂದು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.</p> <p><a href="https://www.prajavani.net/news/india-news/low-pressure-system-in-arabian-sea-set-to-intensify-into-cyclonic-storm-imd-2529469">ಸಂಪೂರ್ಣ ಸುದ್ದಿ ಓದಿ</a></p>.<p>‘ಜೆಡಿಎಸ್ ಮತ್ತು ಬಿಜೆಪಿ ಮುಖಂಡರೆಲ್ಲ ನನ್ನನ್ನು ಜೈಲಿಗೆ ಕಳಿಸಲು ಆತುರದಲ್ಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.</p> <p><a href="https://www.prajavani.net/district/bangaluru-rural/d-k-shivakumar-statement-against-opposition-2529544">ಸಂಪೂರ್ಣ ಸುದ್ದಿ ಓದಿ</a></p>.<p>ಉತ್ತರ ಪ್ರದೇಶದ ಸಾಹಿಬಾಬಾದ್ ರಾಪಿಡ್ಎಕ್ಸ್ ನಿಲ್ದಾಣದಲ್ಲಿ ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ಆರ್ಟಿಎಸ್) ಕಾರಿಡಾರ್ನ ಆದ್ಯತೆಯ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಉದ್ಘಾಟಿಸಿದರು.</p> <p><a href="https://www.prajavani.net/news/india-news/pm-modi-inaugurates-delhi-ghaziabad-meerut-rrts-corridor-2529326">ಸಂಪೂರ್ಣ ಸುದ್ದಿ ಓದಿ</a></p>.<p>ಭಾರತದಲ್ಲಿರುವ ತನ್ನ 62 ರಾಜತಾಂತ್ರಿಕ ಸಿಬ್ಬಂದಿ ಪೈಕಿ 41 ಜನರನ್ನು ಕೆನಡಾ ಹಿಂದಕ್ಕೆ ಕರೆಸಿಕೊಂಡಿದೆ. ಆದರೆ, ಇದಕ್ಕೆ ಬದಲಾಗಿ, ತನ್ನ ದೇಶದಲ್ಲಿರುವ ಭಾರತದ ರಾಜತಾಂತ್ರಿಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೆನಡಾ ಹೇಳಿದೆ.</p> <p><a href="https://www.prajavani.net/news/india-news/canada-withdraws-its-41-diplomats-from-india-vows-to-continue-to-probe-killing-of-hardeep-singh-nijjar-2529504">ಸಂಪೂರ್ಣ ಸುದ್ದಿ ಓದಿ</a></p>.<p>‘ನಮ್ಮ ಮೆಟ್ರೊ’ದ ಕೆ.ಆರ್.ಪುರ–ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ–ಚಲ್ಲಘಟ್ಟದ ವಿಸ್ತರಿತ ಮಾರ್ಗವನ್ನು (ನೇರಳೆ ಮಾರ್ಗ) ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಾಹಿಬಾಬಾದ್ನಿಂದ ವರ್ಚುವಲ್ ಮೂಲಕ ಶುಕ್ರವಾರ ಉದ್ಘಾಟಿಸಿದರು. ವರ್ಚುವಲ್ ಸಭೆ ಮೂಲಕ ಬೆಂಗಳೂರಿನಿಂದ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದಲ್ಲೇ ಭಾಷಣ ಮಾಡಿದರು.</p> <p><a href="https://www.prajavani.net/news/karnataka-news/karnataka-chief-minister-siddaramaiah-refuses-to-speak-in-english-during-namma-metro-event-2529602">ಸಂಪೂರ್ಣ ಸುದ್ದಿ ಓದಿ</a></p>.<p>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಪುನರ್ ಸ್ಥಾಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. </p> <p><a href="https://www.prajavani.net/news/india-news/sc-dismisses-pil-challenging-restoration-of-rahul-gandhi-ls-membership-2529513">ಸಂಪೂರ್ಣ ಸುದ್ದಿ ಓದಿ</a></p>.<p>‘ಬೆಂಗಳೂರಿನಲ್ಲಿ ಇರುವಂತೆಯೇ ಮೆಟ್ರೊ ರೈಲು ಸೇವೆಯನ್ನು ಭವಿಷ್ಯದಲ್ಲಿ ಮೈಸೂರು ಹಾಗೂ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಆರಂಭಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.</p> <p><a href="https://www.prajavani.net/news/india-news/pm-modi-formally-inaugurates-two-stretches-of-bangalore-metro-2529590">ಸಂಪೂರ್ಣ ಸುದ್ದಿ ಓದಿ</a></p>.<p>ಬೆಂಗಳೂರುನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನಕ್ಕೆ 368 ರನ್ಗಳ ಸವಾಲಿನ ಗುರಿ ನೀಡಿದೆ. ಅಮೋಘ ಶತಕ ಸಿಡಿಸಿದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಚ್ ಆಸೀಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. </p> <p><a href="https://www.prajavani.net/sports/cricket/icc-cricket-odi-world-cup-david-warner-marsg-centru-australia-scored-367-against-pakistan-2529777">ಸಂಪೂರ್ಣ ಸುದ್ದಿ ಓದಿ<br></a></p>.<p>ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ‘ಆಪರೇಷನ್ ಹಸ್ತ’ದ ಮೂಲಕ ಕಾಂಗ್ರೆಸ್ ಆಘಾತ ನೀಡಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು (ಶುಕ್ರವಾರ) ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ಗೆ ಸೇರಿದರು.</p> <p><a href="https://www.prajavani.net/news/karnataka-news/former-bjp-mla-poornima-srinivas-joined-congress-today-2529505">ಸಂಪೂರ್ಣ ಸುದ್ದಿ ಓದಿ</a></p>.<p>ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿ ಕೂಲಿ ಕೇಳಿದ ಪರಿಶಿಷ್ಟ ಜಾತಿ ಯುವಕನ ಮೇಲೆ ಜಾತಿ ನಿಂದನೆ ಮಾಡಿ, ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿರುವ ದೌರ್ಜನ್ಯ ಪ್ರಕರಣ ದಾಖಲಾಗಿದೆ.</p><p><br><a href="https://www.prajavani.net/news/karnataka-news/atrocity-on-st-2-arrested-in-bangarpet-of-kolar-2529875">ಸಂಪೂರ್ಣ ಸುದ್ದಿ ಓದಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ಸೃಷ್ಟಿ, ನನ್ನನ್ನು ಜೈಲಿಗೆ ಕಳಿಸಲು ಆತುರ: ಡಿ.ಕೆ.ಶಿವಕುಮಾರ್ ಲೇವಡಿ, ಮೈಸೂರಿಗೂ ಬೆಂಗಳೂರು ಮಾದರಿಯ ಮೆಟ್ರೊ ರೈಲು: ಪ್ರಧಾನಿ ನರೇಂದ್ರ ಮೋದಿ ಸುಳಿವು ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.</p>.<p>ದೇಶದ ಆಗ್ನೇಯ ಹಾಗೂ ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಅಕ್ಟೋಬರ್ 21ರಂದು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.</p> <p><a href="https://www.prajavani.net/news/india-news/low-pressure-system-in-arabian-sea-set-to-intensify-into-cyclonic-storm-imd-2529469">ಸಂಪೂರ್ಣ ಸುದ್ದಿ ಓದಿ</a></p>.<p>‘ಜೆಡಿಎಸ್ ಮತ್ತು ಬಿಜೆಪಿ ಮುಖಂಡರೆಲ್ಲ ನನ್ನನ್ನು ಜೈಲಿಗೆ ಕಳಿಸಲು ಆತುರದಲ್ಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.</p> <p><a href="https://www.prajavani.net/district/bangaluru-rural/d-k-shivakumar-statement-against-opposition-2529544">ಸಂಪೂರ್ಣ ಸುದ್ದಿ ಓದಿ</a></p>.<p>ಉತ್ತರ ಪ್ರದೇಶದ ಸಾಹಿಬಾಬಾದ್ ರಾಪಿಡ್ಎಕ್ಸ್ ನಿಲ್ದಾಣದಲ್ಲಿ ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ಆರ್ಟಿಎಸ್) ಕಾರಿಡಾರ್ನ ಆದ್ಯತೆಯ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಉದ್ಘಾಟಿಸಿದರು.</p> <p><a href="https://www.prajavani.net/news/india-news/pm-modi-inaugurates-delhi-ghaziabad-meerut-rrts-corridor-2529326">ಸಂಪೂರ್ಣ ಸುದ್ದಿ ಓದಿ</a></p>.<p>ಭಾರತದಲ್ಲಿರುವ ತನ್ನ 62 ರಾಜತಾಂತ್ರಿಕ ಸಿಬ್ಬಂದಿ ಪೈಕಿ 41 ಜನರನ್ನು ಕೆನಡಾ ಹಿಂದಕ್ಕೆ ಕರೆಸಿಕೊಂಡಿದೆ. ಆದರೆ, ಇದಕ್ಕೆ ಬದಲಾಗಿ, ತನ್ನ ದೇಶದಲ್ಲಿರುವ ಭಾರತದ ರಾಜತಾಂತ್ರಿಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೆನಡಾ ಹೇಳಿದೆ.</p> <p><a href="https://www.prajavani.net/news/india-news/canada-withdraws-its-41-diplomats-from-india-vows-to-continue-to-probe-killing-of-hardeep-singh-nijjar-2529504">ಸಂಪೂರ್ಣ ಸುದ್ದಿ ಓದಿ</a></p>.<p>‘ನಮ್ಮ ಮೆಟ್ರೊ’ದ ಕೆ.ಆರ್.ಪುರ–ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ–ಚಲ್ಲಘಟ್ಟದ ವಿಸ್ತರಿತ ಮಾರ್ಗವನ್ನು (ನೇರಳೆ ಮಾರ್ಗ) ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಾಹಿಬಾಬಾದ್ನಿಂದ ವರ್ಚುವಲ್ ಮೂಲಕ ಶುಕ್ರವಾರ ಉದ್ಘಾಟಿಸಿದರು. ವರ್ಚುವಲ್ ಸಭೆ ಮೂಲಕ ಬೆಂಗಳೂರಿನಿಂದ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದಲ್ಲೇ ಭಾಷಣ ಮಾಡಿದರು.</p> <p><a href="https://www.prajavani.net/news/karnataka-news/karnataka-chief-minister-siddaramaiah-refuses-to-speak-in-english-during-namma-metro-event-2529602">ಸಂಪೂರ್ಣ ಸುದ್ದಿ ಓದಿ</a></p>.<p>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಪುನರ್ ಸ್ಥಾಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. </p> <p><a href="https://www.prajavani.net/news/india-news/sc-dismisses-pil-challenging-restoration-of-rahul-gandhi-ls-membership-2529513">ಸಂಪೂರ್ಣ ಸುದ್ದಿ ಓದಿ</a></p>.<p>‘ಬೆಂಗಳೂರಿನಲ್ಲಿ ಇರುವಂತೆಯೇ ಮೆಟ್ರೊ ರೈಲು ಸೇವೆಯನ್ನು ಭವಿಷ್ಯದಲ್ಲಿ ಮೈಸೂರು ಹಾಗೂ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಆರಂಭಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.</p> <p><a href="https://www.prajavani.net/news/india-news/pm-modi-formally-inaugurates-two-stretches-of-bangalore-metro-2529590">ಸಂಪೂರ್ಣ ಸುದ್ದಿ ಓದಿ</a></p>.<p>ಬೆಂಗಳೂರುನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನಕ್ಕೆ 368 ರನ್ಗಳ ಸವಾಲಿನ ಗುರಿ ನೀಡಿದೆ. ಅಮೋಘ ಶತಕ ಸಿಡಿಸಿದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಚ್ ಆಸೀಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. </p> <p><a href="https://www.prajavani.net/sports/cricket/icc-cricket-odi-world-cup-david-warner-marsg-centru-australia-scored-367-against-pakistan-2529777">ಸಂಪೂರ್ಣ ಸುದ್ದಿ ಓದಿ<br></a></p>.<p>ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ‘ಆಪರೇಷನ್ ಹಸ್ತ’ದ ಮೂಲಕ ಕಾಂಗ್ರೆಸ್ ಆಘಾತ ನೀಡಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು (ಶುಕ್ರವಾರ) ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ಗೆ ಸೇರಿದರು.</p> <p><a href="https://www.prajavani.net/news/karnataka-news/former-bjp-mla-poornima-srinivas-joined-congress-today-2529505">ಸಂಪೂರ್ಣ ಸುದ್ದಿ ಓದಿ</a></p>.<p>ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿ ಕೂಲಿ ಕೇಳಿದ ಪರಿಶಿಷ್ಟ ಜಾತಿ ಯುವಕನ ಮೇಲೆ ಜಾತಿ ನಿಂದನೆ ಮಾಡಿ, ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿರುವ ದೌರ್ಜನ್ಯ ಪ್ರಕರಣ ದಾಖಲಾಗಿದೆ.</p><p><br><a href="https://www.prajavani.net/news/karnataka-news/atrocity-on-st-2-arrested-in-bangarpet-of-kolar-2529875">ಸಂಪೂರ್ಣ ಸುದ್ದಿ ಓದಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>