<p><strong>ಮಿಡ್ನಾಪುರ್: </strong>ಪಶ್ಚಿಮ ಬಂಗಾಳದ ವ್ಯವಸಾಯ ನಗರಿ ಅಸಾನ್ಸೋಲ್ ಎಂಬಲ್ಲಿ ಗಂಡನಿಗಾಗಿ ಕಾಯುತ್ತಿದ್ದ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.</p>.<p>ಬುಧವಾರ ರಾತ್ರಿ ತನ್ನ ಮನೆಯಲ್ಲಿ ಗಂಡನಿಗಾಗಿ ಕಾಯುತ್ತಿದ್ದ 28ರ ಹರೆಯದ ಗರ್ಭಿಣಿ ಮೇಲೆ ಮೂವರು ಅತ್ಯಾಚಾರವೆಸಗಿರುವುಗಾಗಿ ಪೊಲೀಸರು ಹೇಳಿದ್ದಾರೆ. ಈ ಮಹಿಳೆ ರಾತ್ರಿ ಹೊತ್ತುಮನೆಯಲ್ಲಿ ಒಂಟಿಯಾಗಿದ್ದಾಗಮೂರು ಜನ ದುಷ್ಕರ್ಮಿಗಳು ಬಂದು ಬಾಗಿಲು ತಟ್ಟಿದ್ದಾರೆ. ಮನೆಗೆ ಬಲವಂತವಾಗಿ ನುಗ್ಗಿದ ಇವರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ.</p>.<p>ಮೊಟಾರ್ ಮೆಕ್ಯಾನಿಕ್ ಆಗಿರುವ ಪತಿ ಕೆಲಸ ಮುಗಿಸಿಮನೆಗೆ ಬಂದಾಗ ಹೆಂಡತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ ಎಂದಿದ್ದಾರೆ ಪೊಲೀಸರು.</p>.<p>ಸಾಮೂಹಿಕ ಅತ್ಯಾಚಾರದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರವೆಸಗಿದವರಲ್ಲಿ ಒಬ್ಬನ ಹೆಸರು ಕುಲದೀಪ್ ಸಿಂಗ್ ಎಂದಾಗಿದ್ದು, ಮತ್ತಿಬ್ಬರ ಬಗ್ಗೆ ಗೊತ್ತಿಲ್ಲ ಎಂದು ಸಂತ್ರಸ್ತೆ ಹೇಳಿರುವುದಾಗಿ ಅಸಾನ್ಸೋಲ್ ದುರ್ಗಾಪುರ್ ಪೊಲೀಸ್ ಆಯುಕ್ತ ಲಕ್ಷ್ಮೀ ನಾರಾಯಣ್ ಮೀನಾ ಹೇಳಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಿಡ್ನಾಪುರ್: </strong>ಪಶ್ಚಿಮ ಬಂಗಾಳದ ವ್ಯವಸಾಯ ನಗರಿ ಅಸಾನ್ಸೋಲ್ ಎಂಬಲ್ಲಿ ಗಂಡನಿಗಾಗಿ ಕಾಯುತ್ತಿದ್ದ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.</p>.<p>ಬುಧವಾರ ರಾತ್ರಿ ತನ್ನ ಮನೆಯಲ್ಲಿ ಗಂಡನಿಗಾಗಿ ಕಾಯುತ್ತಿದ್ದ 28ರ ಹರೆಯದ ಗರ್ಭಿಣಿ ಮೇಲೆ ಮೂವರು ಅತ್ಯಾಚಾರವೆಸಗಿರುವುಗಾಗಿ ಪೊಲೀಸರು ಹೇಳಿದ್ದಾರೆ. ಈ ಮಹಿಳೆ ರಾತ್ರಿ ಹೊತ್ತುಮನೆಯಲ್ಲಿ ಒಂಟಿಯಾಗಿದ್ದಾಗಮೂರು ಜನ ದುಷ್ಕರ್ಮಿಗಳು ಬಂದು ಬಾಗಿಲು ತಟ್ಟಿದ್ದಾರೆ. ಮನೆಗೆ ಬಲವಂತವಾಗಿ ನುಗ್ಗಿದ ಇವರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ.</p>.<p>ಮೊಟಾರ್ ಮೆಕ್ಯಾನಿಕ್ ಆಗಿರುವ ಪತಿ ಕೆಲಸ ಮುಗಿಸಿಮನೆಗೆ ಬಂದಾಗ ಹೆಂಡತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ ಎಂದಿದ್ದಾರೆ ಪೊಲೀಸರು.</p>.<p>ಸಾಮೂಹಿಕ ಅತ್ಯಾಚಾರದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರವೆಸಗಿದವರಲ್ಲಿ ಒಬ್ಬನ ಹೆಸರು ಕುಲದೀಪ್ ಸಿಂಗ್ ಎಂದಾಗಿದ್ದು, ಮತ್ತಿಬ್ಬರ ಬಗ್ಗೆ ಗೊತ್ತಿಲ್ಲ ಎಂದು ಸಂತ್ರಸ್ತೆ ಹೇಳಿರುವುದಾಗಿ ಅಸಾನ್ಸೋಲ್ ದುರ್ಗಾಪುರ್ ಪೊಲೀಸ್ ಆಯುಕ್ತ ಲಕ್ಷ್ಮೀ ನಾರಾಯಣ್ ಮೀನಾ ಹೇಳಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>